ಸುವರ್ಣ ನ್ಯೂಸ್ನಲ್ಲಿ 'ಎದೆ ತುಂಬಿ ಹಾಡುವೆನು' ಸ್ಪರ್ಧಿಗಳ ಗಾನಸುಧೆ; ಕಿವಿಯಾಗೋಣ ಬನ್ನಿ
ಮನಸ್ಸನ್ನು ಹಗುರವಾಗಿಸುವ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ. ಸಂಗೀತ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಕರ್ನಾಟಕದಲ್ಲಿ 'ಎದೆ ತುಂಬಿ ಹಾಡುವೆನು' ಎಂದಾಕ್ಷಣ ನೆನಪಾಗುವುದು ಎಸ್ಪಿ ಬಾಲಸುಬ್ರಹ್ಮಣ್ಯಂ. ಅವರನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ.
ಮನಸ್ಸನ್ನು ಹಗುರವಾಗಿಸುವ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ. ಸಂಗೀತ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಕರ್ನಾಟಕದಲ್ಲಿ 'ಎದೆ ತುಂಬಿ ಹಾಡುವೆನು' ಎಂದಾಕ್ಷಣ ನೆನಪಾಗುವುದು ಎಸ್ಪಿ ಬಾಲಸುಬ್ರಹ್ಮಣ್ಯಂ. ಅವರನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ. ಅವರ ನೆನಪಿಗಾಗಿ ಇದೀಗ ಮತ್ತೆ 'ಎದೆ ತುಂಬಿ ಹಾಡುವೆನು' ಸಂಗೀತ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಜನರ ಮನವನ್ನು ಗೆದ್ದಿದೆ. ಆ ಕಾರ್ಯಕ್ರಮದ ಸ್ಪರ್ಧಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಗಾನ ಸುಧೆಯನ್ನು ಹರಿಸಿದ್ದಾರೆ. ಕಿವಿಯಾಗೋಣ ಬನ್ನಿ.