ಪಂಚಲಿಂಗದ ನಿಧಿಗೆ ಸರ್ಪಕಾವಲು... ಇದು ಕೋಲಾರದ ನಾಗರ ಲೀಲೆ!
ಈಜಾಗದಲ್ಲಿ ನಂಬಿಕೊಂಡಿದ್ದು ಆಗುತ್ತೆ/ ಲಿಂಗಗಳ ಮೇಲೆ ಬಿದ್ದಿದೆ ನಿಧಿಗಳ್ಳರ ಕಣ್ಣು/ ಶಿವಲಿಂಗಕ್ಕೆ ಸರ್ಪ ಕಾಲವಲು/ ಕೋಲಾರ ಜಿಲ್ಲೆಯ ಈ ಗ್ರಾಮದ ಕತೆ ಇಂದಿನ ಕವರ್ ಸ್ಟೋರಿ
ಕೋಲಾರ(ಫೆ. 25) ಇವರು ಹೆಸರು ನರಸಿಂಹಪ್ಪ.. ಇವರ ಹೆಂಡತಿ ಗರ್ಭಿಣಿ ಇದ್ದಾಗ ಮಗು ತಿರುಗಿದೆ ಎಂದು ಹೇಳಲಾಗಿತ್ತು. ಆ ಸಂದರ್ಭದಲ್ಲಿ ಅವರು ಬಂದಿದ್ದು ಇಲ್ಲಿಗೆ. ಕೆಲಸದಲ್ಲಿ ಸಮಸ್ಯೆಯಾಗಿ, ಹಣಕಾಸು ಮುಗ್ಗಟ್ಟು ಎದುರಾಗಿ ಸಂಕಷ್ಟಕ್ಕೆ ಸಿಲುಕಿದವರು ಬಂದಿದ್ದು ಇಲ್ಲಿಗೆ.
ಕೋಲಾರ ಜಿಲ್ಲೆಯಿಂದ 25 ಕಿಮೀ ಪ್ರಯಾಣ ಮಾಡಿದರೆ ನಂಬಿಹಳ್ಳಿ ಎಂಬ ಊರು ಸಿಗುತ್ತದೆ. ಅಲ್ಲಿ ವಿಶೇಷ ಶಕ್ತಿ ಹೊಂದಿರುವ 5 ಲಿಂಗಗಳಿವೆ. ಆದರೆ ಇಲ್ಲಿ ನಿಧಿಕಳ್ಳರ ಹಾವಳಿಯೂ ಹೆಚ್ಚಾಗಿದೆ. ಏನಿದು ಸರ್ಪ ಲಿಂಗ?