Asianet Suvarna News Asianet Suvarna News

ಸುವರ್ಣ FIR: ಭೀಮಾ ತೀರದಲ್ಲಿ ಖಡಕ್ ವಾರ್ನಿಂಗ್ ಕೊಟ್ಟ SP

ಅವರು ಶುರುಮಾಡಿದ್ದಾರೆ ನಾವು ಕ್ಲೋಸ್ ಮಾಡುತ್ತೇವೆ ಎಂದಿದ್ದಾರೆ ವಿಜಯಪುರ ಎಸ್ಪಿ ಅನುಪಮ್ ಅಗರ್‌ವಾಲ್. ಭೀಮಾ ತೀರದಲ್ಲಿ ಈಗ ಆಗುತ್ತಿರುವುದು ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಂದಿನ ಸುವರ್ಣ ಎಫ್‌ಐಆರ್‌ನಲ್ಲಿ.

ವಿಜಯಪುರ(ಜು.25): ಭೀಮಾ ತೀರದ ಮಹದೇವ ಸಾಹುಕಾರನಿಗೆ ಮತ್ತೆ ಕಂಠಕ ಶುರುವಾಗಿದೆ. ಅದ್ಯಾವುದೋ ವಸೂಲಿ ಕೇಸ್‌ನಲ್ಲಿ ಮಹದೇವ ಸಾಹುಕಾರ್ ಆರೆಸ್ಟ್ ಆಗಿದ್ದಾನೆ. ಗ್ರಾಚಾರ ಹೇಗಿದೆ ಅಂದ್ರೆ ಸಾಹುಕಾರನಿಗೀಗ ಕೊರೋನಾ ಸೋಂಕು ದೃಢಪಟ್ಟಿದೆ.

ಇದು ಸಾಹುಕಾರನ ಕಥೆಯಾದರೆ, ಮತ್ತೊಂದೆಡೆ ಭಾಗಪ್ಪ ಹರಿಜನ ಎಲ್ಲಾ ಕೆಟ್ಟ ಕೆಲಸಗಳನ್ನು ಬಿಟ್ಟೆ ಎಂದು ಹೇಳುತ್ತಲೇ ಕಂಡ ಕಂಡವರ ಹಣೆಗೆ ಬಂದೂಕಿಟ್ಟು ಹಣದ ಬೇಡಿಕೆ ಇಡಲು ಶುರುಮಾಡಿದ್ದಾನೆ. ಭೀಮಾ ತೀರದಲ್ಲಿ ಮತ್ತೆ ಗುಂಡುಗಳ ಮೊರೆತ ಕೇಳುವ ಸಾಧ್ಯತೆಯಿದೆ.

ಶಿವಮೊಗ್ಗದಲ್ಲಿ ಗಾಂಜಾ ಮಾರಾಟ: ಮೂವರು ಆರೋಪಿಗಳು ಅಂದರ್

ಇವೆಲ್ಲವುಗಳ ನಡುವೆ ಗಟ್ಟಿಗುಂಡಿಗೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಗುಂಡು ಹೊಡೆದಂತಹ ಮಾತು ಭೀಮಾ ತೀರದಲ್ಲಿ ಸಂಚಲನ ಮೂಡಿಸಿದೆ. ಅವರು ಶುರುಮಾಡಿದ್ದಾರೆ ನಾವು ಕ್ಲೋಸ್ ಮಾಡುತ್ತೇವೆ ಎಂದಿದ್ದಾರೆ ವಿಜಯಪುರ ಎಸ್ಪಿ ಅನುಪಮ್ ಅಗರ್‌ವಾಲ್. ಭೀಮಾ ತೀರದಲ್ಲಿ ಈಗ ಆಗುತ್ತಿರುವುದು ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಂದಿನ ಸುವರ್ಣ ಎಫ್‌ಐಆರ್‌ನಲ್ಲಿ.

Video Top Stories