Asianet Suvarna News Asianet Suvarna News

ಅಪ್ರಾಪ್ತೆಯ ಹಿಂದೆ ಬಿದ್ದ ಪಾಗಲ್​​ ಪ್ರೇಮಿ: ತಮ್ಮನ ತಪ್ಪಿಗೆ ಅಣ್ಣನೂ ಪ್ರಾಣ ಬಿಟ್ಟ..!

ಊರಿಗೆ ಬೇಡವಾಗಿದ್ದ ಮಕ್ಕಳಾಗಿದ್ದರು. ಪರಿಣಾಮ ಇವತ್ತು ಈ ದಾರಿ ತಪ್ಪಿದ ಮಕ್ಕಳು ಬೀದಿ ಹೆಣವಾಗಿದ್ದಾರೆ. ಅಣ್ಣ-ತಮ್ಮನನ್ನ ನಡುರಸ್ತೆಯಲ್ಲೇ ಕೊಂದು ಹಾಕಿದ್ದ ಹಂತಕ. ಅಷ್ಟಕ್ಕೂ ಸಹೋದರರನ್ನ ಕೊಂದಿದ್ದು ಯಾರು..?

ಅವರಿಬ್ಬರೂ ತಾಯಿ ಇಲ್ಲದ ತಬ್ಬಲಿಗಳು. ಆದ್ರೆ ತಂದೆ ಮಕ್ಕಳಿಗೆ ಅಮ್ಮ ಇಲ್ಲ ಅನ್ನೋ ಕೊರಗು ಬಾರದಂತೆ ನೋಡಿಕೊಂಡಿದ್ದ.. ಕೂಲಿ ಮಾಡಿ ಮಕ್ಕಳಿಗೆ ಏನೂ ಕೊರತೆ ಆಗದಂತೆ ಸಲುಹಿದ್ದ. ಆದ್ರೆ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸದಲ್ಲಿ ತೊಡಗಬೇಕಿದ್ದ ಈ ಮಕ್ಕಳಿಬ್ಬರೂ ತಪ್ಪು ದಾರಿ ಹಿಡಿದಿದ್ದರು. ಊರಿಗೆ ಬೇಡವಾಗಿದ್ದ ಮಕ್ಕಳಾಗಿದ್ದರು. ಪರಿಣಾಮ ಇವತ್ತು ಈ ದಾರಿ ತಪ್ಪಿದ ಮಕ್ಕಳು ಬೀದಿ ಹೆಣವಾಗಿದ್ದಾರೆ. ಅಣ್ಣ-ತಮ್ಮನನ್ನ ನಡುರಸ್ತೆಯಲ್ಲೇ ಕೊಂದು ಹಾಕಿದ್ದ ಹಂತಕ. ಅಷ್ಟಕ್ಕೂ ಸಹೋದರರನ್ನ ಕೊಂದಿದ್ದು ಯಾರು..? ಇಬ್ಬರನ್ನೂ ಮುಗಿಸಲು ಕಾರಣವೇನು..? 

ಬೆಳಗಾವಿಯಲ್ಲಿ ನಡೆದ ಜೋಡಿ ಕೊಲೆಯ ಇನ್​ಸೈಡ್​​ ಸ್ಟೋರಿಯೇ ಇವತ್ತಿನ ಎಫ್​.ಐ.ಆರ್​​. ಎಷ್ಟೇ ಹೇಳಿದ್ರೂ.. ಮಗಳ ವಿಷಯಕ್ಕೆ ಬರಬೇಡ ಅಂತ ಹೇಳಿದ್ರೂ ಮಾಯಪ್ಪ ಕೇಳದಿದ್ದಾಗ ಅವನನ್ನೇ ಮುಗಿಸೋ ನಿರ್ಧಾರ ಮಾಡಿಬಿಟ್ಟ ಫಕೀರಪ್ಪ.. ಹಾಗಾದ್ರೆ ಮಾಯಪ್ಪ ಏನೋ ತಪ್ಪು ಮಾಡಿದಕ್ಕೆ ಮಚ್ಚಿನೇಟು ತಿಂದ ಆದ್ರೆ ಆತನ ಸಹೋದರನನ್ನ ಫಕೀರಪ್ಪ ಕೊಂದಿದ್ದೇಕೆ..? ಆವತ್ತು ಫಕೀರಪ್ಪ ಓಟ್​​ ಮಾಡಿ ಮನೆ ಕಡೆ ಬರ್ತಿದ್ದ.. ಆದ್ರೆ ಇದೇ ಟೈಂನಲ್ಲಿ ಮತ್ತೆ ಮಾಯಪ್ಪ ಅವನ ಎದುರು ಬಂದಿದ್ದಾನೆ.. ಈ ವೇಳೆ ಫಕೀರಪ್ಪ ಅವನಿಗೆ ಮತ್ತೆ ವಾರ್ನ್​ ಮಾಡಿದ್ದಾನೆ.

ಆದ್ರೆ ಕೇಳುವಷ್ಟು ಕೇಳಿದ ಮಾಯಪ್ಪ ಕೊನೆಗೆ ಫಕೀರಪ್ಪನಿಗೇ ಆವಾಜ್​ ಹಾಕಲು ಶುರು ಮಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತೆ. ಆದ್ರೆ ನೋಡುವಷ್ಟು ನೋಡಿದ ಫಕೀರಪ್ಪ ಸೀದಾ ಮಾಯಪ್ಪನಿಗೆ ಮಚ್ಚು ಹಾಕೇಬಿಡ್ತಾನೆ.. ಇನ್ನೂ ಸೋದರನ ಮೇಲೆ ಹಲ್ಲೆಯಾಗ್ತಿದ್ದಂತೆ ಆತನ ಅಣ್ಣ ಯಲ್ಲಪ್ಪ ತಡೆಯಲು ಬರ್ತಾನೆ.  ಆದ್ರೆ ಫಕೀರಪ್ಪ ಯಲ್ಲಪ್ಪನಿಗೂ ಮಚ್ಚು ಬೀಸಿ ಕೊಂದು ಬಿಡ್ತಾನೆ. ತಾಯಿ ಇಲ್ಲದ ತಬ್ಬಲಿಗಳು ಬೀದಿ ಹೆಣವಾಗಿದ್ದರೆ ಪತ್ನಿ-ಮಕ್ಕಳಿಬ್ಬರನ್ನು ಕಳೆದುಕೊಂಡು ಸೋಮಪ್ಪ ಈಗ ಅನಾಥವಾಗಿದ್ದಾನೆ. ಇನ್ನೂ ಮಗಳ ತಂಟೆಗೆ ಬಂದ ಅಂತ ಫಕೀರಪ್ಪ ಮಾಯಪ್ಪ ಮತ್ತು ಅವನ ಸಹೋದರ ಇಬ್ಬರನ್ನೂ ಕೊಂದು ಜೈಲು ಪಾಲಾಗಿದ್ದಾನೆ.

Video Top Stories