Asianet Suvarna News Asianet Suvarna News

ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ಪ್ರೇಮಿಗಳ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

* ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮ ಬಳಿ ನಡೆದ ಘಟನೆ
* ಪ್ರೇಮಿಗಳ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಯುವತಿಯ ತಂದೆ
* ಮಗಳು ಬೇರೆ ಕೋಮಿನ ಯುವಕನನ್ನ ಲವ್‌ ಮಾಡಿದ್ದಕ್ಕೆ ಮರ್ಡರ್‌
 

ವಿಜಯಪುರ(ಜೂ.23): ಯುವತಿಯ ತಂದೆಯಿಂದಲೇ ಪ್ರೇಮಿಗಳ ಕೊಲೆಯಾದ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮ ಬಳಿ ನಡೆದಿದೆ. ಪ್ರೇಮಿಗಳ ಮೇಲೆ ಯುವತಿಯ ತಂದೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಮಗಳು ಬೇರೆ ಕೋಮಿನ ಯುವಕನನ್ನ ಪ್ರೀತಿ ಮಾಡಿರುವುದಕ್ಕೆ ಈ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಸವರಾಜ್ ಮಡಿವಾಳಪ್ಪ ಬಡಿಗೇರಿ (19), ದಾವಲಬಿ ಬಂದಗಿಸಾಬ್ ತಂಬದ (18) ಕೊಲೆಯಾದ ಪ್ರೇಮಿಗಳಾಗಿದ್ದಾರೆ.  

'ಕೈ' ಪಾಳಯದಲ್ಲಿ ಮುಖ್ಯಮಂತ್ರಿ ವಾರ್, ಶಿಸ್ತು ಮೀರಿ ಹೇಳಿಕೆ ನೀಡುತ್ತಿರುವವರಿಗೆ ನೊಟೀಸ್