Asianet Suvarna News Asianet Suvarna News

ಮಗನನ್ನು ಗುಂಡು ಹಾರಿಸಿ ಕೊಂದ ಅಪ್ಪ..! ಕುಡಿಯೋದಕ್ಕೆ ದುಡ್ಡು ಕೊಡದೇ ಇದ್ದಿದ್ದೇ ತಪ್ಪಾಯ್ತಾ ?

ಮಗನ ಹೆಣ ಹಾಕಿದ ಮೇಲೆ ರಕ್ತ ಒರೆಸುತ್ತ ಕೂತಿದ್ದ..!
ಗುಂಡೇಟು ತಿಂದವನು ಸಹೋದರಿಗೆ ಕಾಲ್ ಮಾಡಿದ್ದ!
ಅಮ್ಮನಿಗಾಗಿ ಕೆಲಸ ಬಿಟ್ಟು ಮನೆಯಲ್ಲಿ ಕೂತಿದ್ದ..!

First Published Jan 28, 2024, 6:35 PM IST | Last Updated Jan 28, 2024, 6:35 PM IST

ಅದೊಂದು ಸುಂದರ ಕೂರ್ಗಿ ಕುಟುಂಬ.ದೂರದ ಊರಿನಿಂದ ಬಂದು ಬೆಂಗಳೂರಿನಲ್ಲಿ(Bengaluru) ಜೀವನ ಮಾಡ್ತಿತ್ತು. ಅಪ್ಪ, ಅಮ್ಮ ಮತ್ತು ಇಬ್ಬರು ಮಕ್ಕಳು. ಇದ್ದ ಮಗಳನ್ನ ಸರ್ಕಾರಿ ನೌಕರನಿಗೆ ಕೊಟ್ಟು ಮದುವೆ ಮಾಡಿದ್ರು. ಇನ್ನೂ ಆ ಹೆಣ್ಣು ಮಗಳೇ ತವರು ಮನೆಯ ಜವಬ್ದಾರಿ ಹೊತ್ತಿದ್ಳು. ಅಮ್ಮ ಹಾಸಿಗೆ ಹಿಡಿದ್ರಿಂದ ಮತ್ತೊಬ್ಬ ಮಗ ಆಕೆಯ ಶುಶ್ರೂಷೆ ಮಾಡ್ತಿದ್ದ. ಆದ್ರೆ ಹೀಗಿರುವಾಗ್ಲೇ ಆ ಮಗನಿಗೆ ಗುಂಡು ತಗುಲಿತ್ತು. ಹೆತ್ತ ಅಪ್ಪನೇ(Father) ಮಗನನ್ನ ಶೂಟ್ ಮಾಡಿ ಕೊಂದು ಮುಗಿಸಿದ್ದ. ಇನ್ನೂ 35 ವರ್ಷ. ಈ ವಯಸಿನಲ್ಲೂ ತಾಯಿಯ ಶುಶ್ರುಷೆಯಲ್ಲೇ ಸಮಯ ಕಳೆಯುತ್ತಿದ್ದ. ಇಂಥವನು ಗುಂಡೇಟು ತಿಂದು ಸತ್ತು ಹೋಗ್ತಾನೆ ಅಂದರೆ ಏನ್ ಹೆಳಬೇಕು. ಇನ್ನೂ ಆತನಿಗೆ ಗುಂಡು ಹಾರಿಸಿದ್ದು ಹುಟ್ಟಿಸಿದ ಅಪ್ಪನೇ ಅನ್ನೋದು ಶಾಕಿಂಗ್. ಆ ಮನೆಯ ಜವಬ್ದಾರಿಯನ್ನೆಲ್ಲಾ ಹೆಣ್ಣುಮಗಳೇ ಹೊತ್ತುಕೊಂಡಿದ್ದಳು. ಮಗನಿಗೆ(Son) ಅಮ್ಮನನ್ನ ನೋಡಿಕೊಳ್ಳದೇ ಕೆಲಸವಾದ್ರೆ ತಂದೆಗೆ ಕುಡಿತವೇ ಎಲ್ಲವಾಗಿತ್ತು. ಆದ್ರೆ ಕುಡಿಯೋದಕ್ಕೆ ದುಡ್ಡು ಬೇಕಲ್ಲ.. ಮಗಳನ್ನ ಕೇಳಿದ್ರೆ ಕುಡಿಯೋದಕ್ಕೆ ಕಾಸು ಕೊಡಲ್ಲ ಅಂದುಬಿಟ್ಟಳು. ಮಗನನ್ನ ಕೇಳೋಣ ಅಂದ್ರೆ ಆತ ಕೆಲಸಕ್ಕೆ ಹೋದ್ರೆ ತಾನೇ ಕೊಡೋದು. ಆದ್ರೂ ಮಗನನ್ನೇ ಕಾಸಿಗಾಗಿ ಪೀಡಿಸೋದಕ್ಕೆ ಶುರು ಮಾಡಿದ್ದ. ಇನ್ನೂ ನೋಡೊವರೆಗೆ ನೋಡಿದ ಮಗ ತಂದೆಯನ್ನ ರೂಮಿನಲ್ಲಿ ಕೂಡಿಹಾಕಿ ಲಾಕ್ ಮಾಡಿಬಿಟ್ಟ. ಇದ್ರಿಂದ ರೊಚ್ಚಿಗೆದ್ದ ತಂದೆ ತನ್ನ ಬಳಿ ಇದ್ದ ಗನ್(Gun) ತೆಗೆದು ಬಾಗಿಲಿಗೆ ಶೂಟ್ ಮಾಡೇ ಬಿಟ್ಟ. ಆದ್ರೆ ಬಾಗಲನ್ನೇ ತೂರಿಕೊಂಡು ಬಂದ ಗುಂಡು ಮಗನ ತೊಡೆ ಭಾಗಕ್ಕೆ ಹೋಗಿಬಿಟ್ಟಿತ್ತು. ಇನ್ನೂ ಮಗ ಹೆಣವಾದ್ರೆ ತಂದೆ ಮಗನ ರಕ್ತವನ್ನ ಕ್ಲೀನ್ ಮಾಡೋದ್ರಲ್ಲಿ  ಬ್ಯುಸಿಯಾಗಿಬಿಟ್ಟ. ಅಪ್ಪ ಜೈಲುಪಾಲಾದ. ಮಗ ಮಸಣ ಸೇರಿದ. ಈಗ ಅವರನ್ನೇ ನಂಬಿದ್ದ ಹಾಸಿಗೆ ಹಿಡಿದಿದ್ದ ತಾಯಿ ದಿಕ್ಕಿಲ್ಲದಂತಾಗಿದ್ದಾಳೆ.

ಇದನ್ನೂ ವೀಕ್ಷಿಸಿ:  ಬಲಾಡ್ಯರ ಕೈಯಲ್ಲಿ ಅಧಿಕಾರ ಇದ್ರೆ, ಶೋಷಿತರಿಗೆ ಮಾರಕವೆಂದು ಅಂಬೇಡ್ಕರ್ ಹೇಳಿದ್ರು: ಸಿದ್ದರಾಮಯ್ಯ

Video Top Stories