Asianet Suvarna News Asianet Suvarna News

ಎಲ್ಲಾ ಇದ್ದು ಅನಾಥವಾಗಿತ್ತು ಅವಳ ಮಗು..! ಅವಳದ್ದು ಆತ್ಮಹತ್ಯೆನಾ..? ಕೊಲೆಯಾ..?

ಅವನಿಗಾಗಿ ಅವಳು ಗಂಡನನ್ನೇ ಬೇಡ ಅಂದಿದ್ಲು..!
ಮನೆಗೆ ಬಂದ ಟೀಚರ್‌ಗೆ ಸಾವಿನ ವಾಸನೆ ಬಡೆದಿತ್ತು..!
ಎಲ್ಲಾ ಇದ್ದು ಅನಾಥವಾಗಿತ್ತು ಅವಳ ಮಗು..! 

ಅವಳು ವಿಧವೆ.. 2 ವರ್ಷ ಗಂಡನಿಲ್ಲದೇ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಳು. ಇದ್ದ ಮಗುವಿಗೆ ಒಳ್ಳೆ ಭವಿಷ್ಯ ರೂಪಿಸುವ ಕನಸು ಕಂಡಿದ್ಲು. ಆದರೆ ಆವತ್ತೊಂದು ದಿನ.. ಆಕೆ ತನ್ನದೇ ಮನೆಯಲ್ಲಿ ಹೆಣವಾಗಿ ಹೋಗಿದ್ಲು. ಆಕೆ ಸತ್ತು ಮೂರ್ನಾಲಕ್ಕು ದಿವಸವಾದ್ರೂ ಆಕೆ ಸತ್ತಿರೋ ವಿಷಯ ಹೊರ ಪ್ರಪಂಚಕ್ಕೆ ಗೊತ್ತೇ ಆಗಿರಲಿಲ್ಲ. ಇನ್ನೂ ವಿಷಯ ಗೊತ್ತಾಗಿ ಸ್ಪಾಟ್‌ಗೆ ಬಂದ ಪೊಲೀಸರಿ(Police) ಆಕೆ ಹೇಗೆ ಸತ್ತಳು ಅನ್ನೋದು ಗೊತ್ತಾಗಲಿಲ್ಲ. ಅಷ್ಟೇ ಅಲ್ಲ ಆಕೆಯ ಜೊತೆಗೇ ಇದ್ದ ಮಗಳು ಏನಾದಳು ಅನ್ನೋ ಚಿಂತೆ ಶುರುವಾಗಿತ್ತು. ಅಪ್ಸ್ಕಾಂಡ್ ಆಗಿದ್ದಾನೆ ಅಂದ ಮೇಲೆ ರೇಖಾ ಸಾವಿಗೂ ಆನಂದನಿಗೂ ಏನೋ ಸಂಬಂಧ ಇದೆ ಅಂತಾನೇ ಅರ್ಥ. ಅಷ್ಟೇ ಅಲ್ಲ ಪೊಲೀಸರಿಗೆ ರೇಖಾ ಸಾವಿನ ಸುದ್ದಿ ತಿಯೋ ಹೊತ್ತಿಗೆ ಆನಂದ ಎಸ್ಕೆಪ್ ಆಗಿದ್ದಾನೆ ಅಂದ್ರೆ ಆ ಮನೆಯಲ್ಲಿ ಏನೋ ನಡೆಯಬಾರದ ಘಟನೆ ನಡೆದಿದೆ ಅನ್ನೋದಂತೂ ಕನ್ಫರ್ಮ್. ತನ್ನ ಪಾಡಿಗೆ ತಾನು ಗಂಡ ಮಗು ಅಂತಿದ್ದ ರೇಖಾಳ ತಲೆ ಕೆಡಸಿದ್ದ ಈ ಆನಂದ. ಆಕೆಯೊಂದಿಗೆ ಪ್ರೀತಿಯ ನಾಟಕವಾಡಿ ಗಂಡನಿಗೆ(Husband) ಡಿವೋರ್ಸ್ ಕೊಡಲು ಸಹ ಈತ ಪೀಡಿಸಿದ್ದ. ಈತನ ಪ್ರೇಮ(Love) ಪಾಶಕ್ಕೆ ಸಿಲುಕಿದ್ದ ರೇಖಾ ಆತ ಹೇಳಿದಂತೆಲ್ಲಾ ಕೇಳೋದಕ್ಕೆ ಶುರು ಮಾಡಿದ್ಲು. ಇನ್ನೂ ಹೆಂಡತಿಯ ಈ ವರ್ತನೆಯಿಂದ ಆಕೆಯ ಗಂಡ ಕೂಡ ಸತ್ತು ಹೋದ. ಇದಾದ ನಂತರ ರೇಖಾ ಆನಂದನ ಪಾಲಾಗಿಬಿಟ್ಟಳು. ಆದ್ರೆ ಆತನಿಗೆ ರೇಖಾ ಬೇಕಾಗಿತ್ತೇ ಹೊರೆತು ಆಕೆಯ ಮಗು ಬೇಕಿರಲಿಲ್ಲ. ಇದೇ ಕಾರಣಕ್ಕೆ ಆಗ್ಗಾಗೆ ಮಗುವಿಗೆ ಹಲ್ಲೆ ಮಾಡ್ತಿದ್ದ. ಈ ಮುಗುವಿನ ಮಾತುಗಳನ್ನ ಕೆಳ್ತಿದ್ರೆ ನಿಜಕ್ಕೂ ಬೇಸರವಾಗುತ್ತೆ. ಸದ್ಯ 302 ಕೇಸ್ ರಿಜಿಸ್ಟರ್ ಮಾಡ್ಕೊಂಡಿರುವ ಪೊಲೀಸರು ಆರೋಪಿ ನಾಗೇಂದ್ರನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ನಾಗೇಂದ್ರನನ್ನ ನಂಬಿಕೊಂಡು ಹೋದ ರೇಖಾ ಹೆಣವಾಗಿದ್ದಾಳೆ. ಇತ್ತ ಏನು ತಪ್ಪು ಮಾಡದ ಮಗು ಅಪ್ಪ ಅಮ್ಮನನ್ನ ಕಳ್ಕೊಂಡು ಅನಾಥವಾಗಿದೆ.

ಇದನ್ನೂ ವೀಕ್ಷಿಸಿ:  ಕಮಲ+ದಳ.. ವಿಜಯೇಂದ್ರ+ಎಚ್.ಡಿ.ಕೆ.. ಹೇಗಿದೆ ಮೈತ್ರಿವ್ಯೂಹ..?

Video Top Stories