Asianet Suvarna News Asianet Suvarna News

ಬೈಕ್ ಮುಟ್ಟಿ ಮೈಲಿಗೆಯಾಯ್ತಂತೆ: ದಲಿತ ಯುವಕನ ಮೇಲೆ ಸರ್ವಣೀಯರಿಂದ ನೀಚ ಕೃತ್ಯ..!

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿಯಲ್ಲಿ ಅಮಾನವೀಯ ಕೃತ್ಯ ನಡೆದಿದೆ. 20 ಮಂದಿಯ ಸವರ್ಣೀಯರ ಗುಂಪು ಕಾಶಿನಾಥ ತಳವಾರ ಎನ್ನುವ ದಲಿತ ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ವಿಯಯಪುರ(ಜು.20): ದಲಿತ ಯುವಕನೊಬ್ಬ ಬೈಕ್ ಮುಟ್ಟಿ ಮೈಲಿಗೆ ಮಾಡಿದನೆಂದು ಆರೋಪಿಸಿ ಸವರ್ಣೀಯ ಹಿಂದುಗಳು ಚಪ್ಪಲಿ ಹಾಗೂ ದೊಣ್ಣೆಗಳಿಂದ ಮನಬಂದಂತೆ ದಂಡಿಸಿದ್ದಾರೆ. 

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿಯಲ್ಲಿ ಅಮಾನವೀಯ ಕೃತ್ಯ ನಡೆದಿದೆ. 20 ಮಂದಿಯ ಸವರ್ಣೀಯರ ಗುಂಪು ಕಾಶಿನಾಥ ತಳವಾರ ಎನ್ನುವ ದಲಿತ ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಲಾಕ್‌ಡೌನ್‌ ನಿಯಮ ಉಲ್ಲಂಘನೆ: ರಾಯಚೂರಲ್ಲಿ ಲೇಡಿ ಪಿಎಸ್‌ಐ ಲಾಠಿಚಾರ್ಜ್‌..!

ಚಪ್ಪಲಿಯಿಂದ ಯುವಕನ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅದೇ ಮಾರ್ಗದಲ್ಲಿ ಪೊಲೀಸ್ ಬರುತ್ತಿದ್ದರು. ಪೊಲೀಸರು ಬರುತ್ತಿದ್ದುದನ್ನು ನೋಡಿ ಸವರ್ಣೀಯ ಹಲ್ಲೆಕೋರರು ಕಾಲ್ಕಿತ್ತಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಯುವಕನನ್ನು ಮುದ್ದೆಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನೀಚ ಕೃತ್ಯವೆಸಗಿದ ರಣಹೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories