Asianet Suvarna News Asianet Suvarna News

ರಾಕಿಂಗ್ ಸ್ಟಾರ್ ಯಶ್ ರಾಮಾಯಣದಲ್ಲಿ ಕುಂಭಕರ್ಣ ಜಮಾಲ್ ಕುಡು ಬಾಬಿ ಡಿಯೋಲ್!

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನ ಹತ್ತಿರವಾಗುತ್ತಿದ್ದಂತೆ ಬಾಲಿವುಡ್ ರಾಮಾಯಣ ಸಿನಿಮಾದ  ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ನಟ ಯಶ್ ಕೆಜಿಎಫ್  ಈ ಬಾಲಿವುಡ್ ರಾಮಾಯಣದಲ್ಲಿ ರಾವಣನಾಗೋ ಸುದ್ದಿ ಕೂಡ ವೈರಲ್ ಆಗಿತ್ತು. 

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನ ಹತ್ತಿರವಾಗುತ್ತಿದ್ದಂತೆ ಬಾಲಿವುಡ್ ರಾಮಾಯಣ ಸಿನಿಮಾದ  ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ನಟ ಯಶ್ ಕೆಜಿಎಫ್  ಈ ಬಾಲಿವುಡ್ ರಾಮಾಯಣದಲ್ಲಿ ರಾವಣನಾಗೋ ಸುದ್ದಿ ಕೂಡ ವೈರಲ್ ಆಗಿತ್ತು. ಈಗ  ನಟ ಬಾಬಿ ಡಿಯೋಲ್ ಕುಂಭಕರ್ಣನಾಗೋ ಸುದ್ದಿ ಎಲ್ಲೆಲ್ಲೂ ಹಬ್ಬಿದೆ. ‘ಅನಿಮಲ್’ ಸಿನಿಮಾ ಮೂಲಕ ಗೆಲುವಿನ ಟ್ರ್ಯಾಕ್ಗೆ ಮರಳಿರೊ ಬಾಬಿ ಕುಂಭಕರ್ಣಾನಾಗ್ತಿದ್ದಾರೆ.. ಈ ಮೂಲಕ ಯಶ್ ಬಾಬಿ ಅಣ್ತಮ್ಮಾಸ್ ಆಗಲಿದ್ದಾರೆ. ಬಾಬಿ ಮಾಡಿದ್ದ ಅಬ್ರಾರ್ ಹಖ್ ಪಾತ್ರ ತುಂಬ ಫೇಮಸ್ ಆಗಿದೆ. ಅವರ ಎಂಟ್ರಿ ಸೀನ್ ನೋಡಿ ಫ್ಯಾನ್ಸ್ ಖುಷಿ ಆಗಿದ್ದಾರೆ. 

ಈ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಬಾಬಿ ಡಿಯೋಲ್ ಅವರ ಬೇಡಿಕೆ ಹೆಚ್ಚಾಗಿದೆ. ದೊಡ್ಡ ದೊಡ್ಡ ಸಿನಿಮಾಗಳಿಂದ ಅವರಿಗೆ ಆಫರ್ ಬರುತ್ತಿದ್ದು ರಾಮಾಯಣದ ಕಥೆಯನ್ನು ಆಧರಿಸಿ ನಿರ್ದೇಶಕ ನಿತೇಶ್ ತಿವಾರಿ ಮಾಡಲಿರುವ ಸಿನಿಮಾದಲ್ಲಿ ಬಾಬಿ ಡಿಯೋಲ್ ಕುಂಭಕರ್ಣನ ‘ಪಾತ್ರ ಮಾಡಲಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ. ಅಂದಹಾಗೆ ಈಗಾಗಲೆ ಸುದ್ದಿಯಾಗಿರುವಂತೆ ರಣ್ಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ, ರಾವಣನಾಗಿ ಯಶ್ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನು ಇದೀಗ ಬಾಬಿ ಕುಂಭಕರ್ಣನ ಪಾತ್ರಕ್ಕೆ ಪಕ್ಕಾ ಸೂಟ್ ಆಗ್ತಾರೆ ಎನ್ನಲಾಗಿದೆ.  ಉಳಿದಂತೆ ನಟಿ ಲಾರಾ ದತ್ತ  ಕೈಕೇಯಿ ಪಾತ್ರ ,ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೂಡ ಕೆಲವು ಕಡೆ ಸುದ್ದಿ ಆಗಿದೆ. 

ಚಿತ್ರತಂಡದ ಕಡೆಯಿಂದ ಯಾವುದೂ ಅಧಿಕೃತವಾಗಿಲ್ಲ. ‘ದಂಗಲ್’ ಸಿನಿಮಾದಿಂದ ನಿರ್ದೇಶಕ ನಿತೇಶ್ ತಿವಾರಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈಗ ಅವರು ರಾಮಾಯಣ ಸಿನಿಮಾವನ್ನು ಯಾವ ರೀತಿ ಕಟ್ಟಿಕೊಡುತ್ತಾರೆ ಎಂಬುದನ್ನು ಕಾದುನೋಡಬೇಕು. ರಾಮಾಯಣದ ಒಂದೊಂದು ಪಾತ್ರವೂ ಒಂದೊಂದು ಮಹಾಣ್ ಶಕ್ತಿಯಂತೆ ಕಾಣುತ್ತಿದ್ದು ಆ ಪಾತ್ರಗಳಿಗೆ ಅಷ್ಟೆ ಜೀವ ತುಂಬ ಬಲ್ಲ ಪಾತ್ರಧಾರಿಗಳು ಇದ್ದರಷ್ಟೆ ಸಿನಿಮಾ ಅಧ್ಬುತವಾಘಿ ಮೂಡಿಬರಲಿದೆ ಎನ್ನುವುದು ಸಿನೀರಸಿಕರ ಅಬಿಪ್ರಾಯ. ಯಾವುದಕ್ಕೂ ವೈಟ್ ಮಾಡಿ .. ಅಧಿಕೃತ ಸುದ್ದಿ ಸದ್ಯದ್ರಲ್ಲೆ  ಹೊರಬೀಳಲಿದೆ.

Video Top Stories