ಪುನೀತ್ ನಾಮಫಲಕ ಮತ್ತು ಕನ್ನಡ ಬಾವುಟ ಕಿತ್ತೆಸೆದ ಕಿಡಿಗೇಡಿಗಳು; ಅಭಿಮಾನಿಗಳ ಆಕ್ರೋಶ
ಪುನೀತ್ ರಾಜ್ ಕುಮಾರ್ ನಾಮಫಲಕ ಹಾಗೂ ಕನ್ನಡ ಬಾವುಟವನ್ನು ಕಿಡಗೇಡಿಗಳು ಕಿತ್ತು ಬಿಸಾಡಿರುವ ಘಟನೆ ಕೊಪ್ಪಳ ತಾಲೂಕಿನ ಹುವಿನಾಳ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಈ ಕೃತ್ಯ ಜರುಗಿದ್ದು ನಾಮಫಲಕವನ್ನು ಕೆರೆಯಲ್ಲಿ ಬೀಸಾಕಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಖಂಡಿಸಿ ಹೂವಿನಾಳ ಗ್ರಾಮದಲ್ಲಿ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಪುನೀತ್ ನಾಮಫಲಕ ಕಿತ್ತು ಹಾಕಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯಲ್ಲಿ ಗ್ರಾ ಪಂ ಸದಸ್ಯ ಪತ್ರಯ್ಯ ಶಾಂತವೀರಯ್ಯ ಸೇರಿ ಇಬ್ಬರನ್ನು ಪೊಲೀಸರ ಬಂಧಿಸಿದ್ದಾರೆ. ಪುನೀತ್ ಹುಟ್ಟುಹಬ್ಬದ ದಿನ ನಾಮಫಲಕ ಅಳವಡಿಸಲಾಗಿತ್ತು.
ಪುನೀತ್ ರಾಜ್ ಕುಮಾರ್ ನಾಮಫಲಕ ಹಾಗೂ ಕನ್ನಡ ಬಾವುಟವನ್ನು ಕಿಡಗೇಡಿಗಳು ಕಿತ್ತು ಬಿಸಾಡಿರುವ ಘಟನೆ ಕೊಪ್ಪಳ ತಾಲೂಕಿನ ಹುವಿನಾಳ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಈ ಕೃತ್ಯ ಜರುಗಿದ್ದು ನಾಮಫಲಕವನ್ನು ಕೆರೆಯಲ್ಲಿ ಬೀಸಾಕಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಖಂಡಿಸಿ ಹೂವಿನಾಳ ಗ್ರಾಮದಲ್ಲಿ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಪುನೀತ್ ನಾಮಫಲಕ ಕಿತ್ತು ಹಾಕಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯಲ್ಲಿ ಗ್ರಾ ಪಂ ಸದಸ್ಯ ಪತ್ರಯ್ಯ ಶಾಂತವೀರಯ್ಯ ಸೇರಿ ಇಬ್ಬರನ್ನು ಪೊಲೀಸರ ಬಂಧಿಸಿದ್ದಾರೆ. ಪುನೀತ್ ಹುಟ್ಟುಹಬ್ಬದ ದಿನ ನಾಮಫಲಕ ಅಳವಡಿಸಲಾಗಿತ್ತು.