ಶೆಟ್ರ 'ಕಾಂತಾರ' ಬಗ್ಗೆ ಬಿಜೆಪಿ ನಾಯಕರ ವಿಮರ್ಶೆ
ಕಾಂತಾರ ಸಿನಿಮಾ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದು,ದೈವದ ಕಥೆ ಸ್ಯಾಂಡಲ್ವುಡ್ ಸಿನಿಮಾ ರಂಗದ ದಿಕ್ಕನ್ನು ಬದಲಿಸಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.ಪಂಜುರ್ಲಿ , ಗುಳಿಗ ದೈವದ ಕಥೆಯನ್ನು ಒಳಗೊಂಡ ಕಾಂತಾರ ಕನ್ನಡ ಸಿನಿಮಾ ರಂಗಕ್ಕೆ ಮತ್ತಷ್ಟು ಹೆಸರು ತಂದು ಕೊಟ್ಟಿದ್ದು, ಈ ಸಿನಿಮಾ ತಮಿಳು, ಮಲೆಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಇನ್ನು ಕಾಂತಾರ ಸಿನಿಮಾವನ್ನು ಬಿಜೆಪಿ ನಾಯಕರು ವೀಕ್ಷಿಸಿದ್ದು,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಡಿ.ವಿ ಸದಾನಂದ ಗೌಡ , ಆರ್ ಅಶೋಕ್ ಸೇರಿದಂತೆ ಅಶ್ವಥ್ ನಾರಾಯಣ್ ಬೆಂಗಳೂರಿನ ಒರಿಯನ್ ಮಾಲ್ನಲ್ಲಿ ಕಾಂತಾರ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.