Asianet Suvarna News Asianet Suvarna News

‘ಗುಂಟೂರು ಖಾರಂ’ಗೂ ‘ಬಳ್ಳಾರಿ ನಾಗ’ನಿಗೆ ಇದೆಯಾ ಲಿಂಕ್?: ನಟ ವಿಷ್ಣುವರ್ಧನ್ ಸಿನಿಮಾ, ಮಹೇಶ್ ಬಾಬು ಕಾಪಿ?

ಮಹೇಶ್‌ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದ ಕಥೆಗೂ ಕನ್ನಡದ ದಿ. ವಿಷ್ಣುವರ್ಧನ್‌ ನಟನೆಯ ಬಳ್ಳಾರಿ ನಾಗ ಸಿನಿಮಾಕ್ಕೂ ಏನಾದರೂ ಸಂಬಂಧವಿದೆಯೇ? ಬಳ್ಳಾರಿ ನಾಗ ಸಿನಿಮಾವು ಮಮ್ಮುಟ್ಟಿ ನಟನೆಯ ರಾಜಮಾಣಿಕ್ಯಂನ ರಿಮೇಕ್‌ ಆಗಿತ್ತು.
 

ಮಹೇಶ್‌ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದ ಕಥೆಗೂ ಕನ್ನಡದ ದಿ. ವಿಷ್ಣುವರ್ಧನ್‌ ನಟನೆಯ ಬಳ್ಳಾರಿ ನಾಗ ಸಿನಿಮಾಕ್ಕೂ ಏನಾದರೂ ಸಂಬಂಧವಿದೆಯೇ? ಬಳ್ಳಾರಿ ನಾಗ ಸಿನಿಮಾವು ಮಮ್ಮುಟ್ಟಿ ನಟನೆಯ ರಾಜಮಾಣಿಕ್ಯಂನ ರಿಮೇಕ್‌ ಆಗಿತ್ತು. ಇದೇ ಸಿನಿಮಾದಿಂದ ಸ್ಪೂರ್ತಿ ಪಡೆದು ಈಗ ಗುಂಟೂರು ಖಾರಂ ಸಿನಿಮಾ ನಿರ್ಮಿಸಲಾಗಿದೆಯೇ? ಇಂತಹ ಗುಸುಗುಸು ಈಗ ಕೇಳಿಬರುತ್ತಿದೆ. ಗುಂಟೂರು ಖಾರಂ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದ ಚಿತ್ರ. ಮಹೇಶ್‌ ಬಾಬು, ಶ್ರೀಲೀಲಾ, ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣನ್‌, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನವರಿ 8ರಂದು ಗುಂಟೂರು ಬಾಬು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿತ್ತು. 

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಈ ಚಿತ್ರ ರಿಮೇಕಾ? ಇತರೆ ಸಿನೆಮಾಗಳಿಂದ ಸ್ಪೂರ್ತಿ ಪಡೆದಿರುವುದಾ? ಅಥವಾ ಕಾದಂಬರಿ ಆಧರಿತವಾಗಿರುವುದೇ? ಎಂಬ ಕುರಿತು ಚರ್ಚೆಯಾಗುತ್ತಿದೆ. ಇದು ತೆಲುಗಿನ ಖ್ಯಾತ ಬರಹಗಾರ್ತಿ ಯದ್ದನಪುಡಿ ಸುಲೋಚನಾರಾಣಿ ಬರೆದ ಕೀರ್ತಿ ಕಿರೀಟಲು ಎಂಬ ಕಾದಂಬರಿಯಿಂದ ಸ್ಪೂರ್ತಿ ಪಡೆದ ಕಥೆಯೇ ಎಂಬ ಚರ್ಚೆ ಆರಂಭವಾಗಿದೆ. ಈ ಕಾದಂಬರಿಯು ಸುಂದರವಾದ ನಾಯಕಿ ಪಾತ್ರವನ್ನು ಹೊಂದಿದೆ. ಆ ನಾಯಕಿ ಒಳ್ಳೆಯ ಡ್ಯಾನ್ಸರ್‌. ಆಕೆ ಒಂದು ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಕಥೆಗೂ ಗುಂಟೂರು ಖಾರಂಗೂ ಸಾಮ್ಯತೆ ಇರುವುದೇ? ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಥವಾ ಇತರೆ ಯಾವುದೋ ಹಳೆಯ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಈ ಸಿನಿಮಾ ನಿರ್ಮಾಣವಾಗಿರುವುದೇ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories