'ಸೀತಾರಾಮ' ಖ್ಯಾತಿಯ ನಟ ಗಗನ್ ಚಿನ್ನಪ್ಪ ಅವರು ಕೋಪ ನಿಯಂತ್ರಣಕ್ಕಾಗಿ ಯೋಗ ಮಾಡಲು ಹೋಗಿ ಪೇಚಿಗೆ ಸಿಲುಕಿದ ತಮಾಷೆಯ ವಿಡಿಯೋ ಹಂಚಿಕೊಂಡಿದ್ದಾರೆ. ಯೋಗ ಮ್ಯಾಟ್ ಸರಿಪಡಿಸಲಾಗದೆ ಕೋಪಗೊಂಡು ಒದ್ದಿರುವ ಈ ವಿಡಿಯೋ ವೈರಲ್ ಆಗಿದೆ. ಈ ಲೇಖನವು ಅವರ ನಟನಾ ವೃತ್ತಿಜೀವನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
ಸೀತಾರಾಮ ಸೀರಿಯಲ್ (Seetha Rama Serial) ಮುಗಿದು ಹಲವು ತಿಂಗಳುಗಳೇ ಕಳೆದರೂ, ರಾಮ್ ಪಾತ್ರಧಾರಿಯಾಗಿರುವ ಗಗನ್ ಚಿನ್ನಪ್ಪ ಅವರು ಇಂದಿಗೂ ರಾಮ್ ಎಂದೇ ಜನರು ಗುರುತಿಸುತ್ತಿದ್ದಾರೆ. ಅತ್ತ ಸೀತಾ ಪಾತ್ರಧಾರಿಯಾಗಿರುವ ವೈಷ್ಣವಿ ಗೌಡ ಅವರು ಮದುವೆಯಾಗಿ ಲೈಫ್ ಎಂಜಾಯ್ ಮಾಡುತ್ತಿದ್ದರೆ, ಇತ್ತ ರಾಮ್ ಪಾತ್ರಧಾರಿ ಗಗನ್ ಅವರು ವಿವಿಧ ರೀತಿಯ ರೀಲ್ಸ್ ಮಾಡುತ್ತಾ, ಜನರನ್ನು ನಕ್ಕು ನಗಿಸುತ್ತಿದ್ದಾರೆ. ಈ ಹಿಂದೆಯೂ ಹಲವು ರೀತಿಯ ರೀಲ್ಸ್ ಮಾಡಿ ತಮಾಷೆ ಮಾಡಿದ್ದರು ಗಗನ್.
ಕೋಪ ನಿಯಂತ್ರಣ
ಈಗ ಅವರು ಕೋಪ ನಿಯಂತ್ರಣಕ್ಕೆಂದು ಯೋಗಾಭ್ಯಾಸ ಮಾಡಲು ತಯಾರಿ ನಡೆಸಿರುವ ತಯಾರಿಯ ಬಗ್ಗೆ ತಮಾಷೆಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಟಿವಿಯಲ್ಲಿ ಯೋಗಾಭ್ಯಾಸದ ತರಬೇತಿ ಇರುವ ದೃಶ್ಯವನ್ನು ಕಾಣಬಹುದು. ಬಳಿಕ ಗಗನ್ ಅವರು ಯೋಗದ ಮ್ಯಾಟ್ ತಂದು ರೆಡಿಯಾಗಲು ಹೊರಟಿದ್ದಾರೆ. ಆದರೆ ಆ ಮ್ಯಾಟ್ ಸುರುಳಿಯಾಗಿರುವ ಇರುವ ಕಾರಣ, ಏನು ಮಾಡಿದ್ರೂ ಸರಿಯಾಗಿ ಫಿಕ್ಸ್ ಆಗಲಿಲ್ಲ. ಹಲವು ಬಾರಿ ಪ್ರಯತ್ನಪಟ್ಟರೂ ಅದು ಸಾಧ್ಯವಾಗದಿದ್ದ ಕಾರಣ, ಕೋಪ ತಡೆದುಕೊಳ್ಳಲಾಗದೇ ಅದನ್ನು ಝಾಡಿಸಿ ಒದ್ದಿದ್ದಾರೆ ಗಗನ್. ಹೀಗೆ ಕೋಪ ನಿಯಂತ್ರಣಕ್ಕೆ ಯೋಗದ ಪ್ರಾಕ್ಟೀಸ್ ಮಾಡುವ ಪೂರ್ವದಲ್ಲಿಯೇ ಹೀಗೆ ಆಯ್ತು ಎಂದು ಹೇಳಿದ್ದಾರೆ.
ನಟನ ಕುರಿತು...
ಇನ್ನು ರಾಮ್ ಪಾತ್ರಧಾರಿ ಗಗನ್ ಚಿನ್ನಪ್ಪ ಕುರಿತು ಹೇಳುವುದಾದರೆ, ಕೊಡಗು ಮೂಲದ ಗಗನ್, ಬಣ್ಣ ಲೋಕಕ್ಕೆ ಎಂಟ್ರಿ ಕೊಡುವ ಮೊದಲದು ಎರಡು ವರ್ಷ ಓಮನ್ ದೇಶದಲ್ಲಿ ಅದಾದ ಬಳಿಕ ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದ್ದವರು. ವಿದೇಶಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರ ಒಂದು ಫೋಟೋಶೂಟ್ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತು. 2014 ರಲ್ಲಿ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಆಗ ಅವರಿಗೆ ಚಿತ್ರವೊಂದಕ್ಕೆ ಆಫರ್ ಬಂದಿತ್ತು. ಬಣ್ಣದ ಲೋಕದ ಸೆಳೆತದಿಂದ ಅಬುದಾಬಿ ಬಿಟ್ಟು ಬೆಂಗಳೂರಿಗೆ ಬಂದರು.
ರಿಲೀಸ್ ಆಗದ ಚಿತ್ರ
ಚಿತ್ರದಲ್ಲಿ ನಟಿಸಿದರೂ ಅದು ರಿಲೀಸ್ ಆಗಲೇ ಇಲ್ಲ. ಸೀರಿಯಲ್ಗಳಲ್ಲಿ ಆಡಿಷನ್ ಕೊಟ್ಟರೂ ಭಾಷೆ ಸರಿಯಿಲ್ಲವೆಂದು ರಿಜೆಸ್ಟ್ ಆಗುತ್ತಿದ್ದಂತೆ. ನಂತರ ಬಣ್ಣದ ಲೋಕ ಬೇಡ ಎಂದು ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಶುರು ಮಾಡಿದರು. ಆದರೆ ಬಣ್ಣದ ಲೋಕದ ಸೆಳೆತ ಇದ್ದೇ ಇದ್ದು. ಮಂಗಳಗೌರಿ ಮದುವೆ ಸೀರಿಯಲ್ನಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್ಗೂ ಎಂಟ್ರಿ ಕೊಟ್ಟು ಈಗ ಸೀತಾರಾಮ ಸೀರಿಯಲ್ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ. ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್ ಅವರು, ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
