Asianet Suvarna News Asianet Suvarna News

ಬೇರೆ ಸಿಮ್​ ತಗೋ...ನಿನ್​ ಜೊತೆ ನಾವಿದ್ದೇವೆ... ತಾಂಡವ್​ ಬೆಂಬಲಕ್ಕೆ ನಿಂತ ಅಭಿಮಾನಿಗಳು!

ಕುಸುಮಳ ಮಾತು ಕೇಳಿ ಅನಿವಾರ್ಯವಾಗಿ ಶ್ರೇಷ್ಠಾಳ ನಂಬರ್​ ಬ್ಲಾಕ್​ ಮಾಡಿದ್ದಾನೆ ತಾಂಡವ್​. ಇದೇ ಚಾನ್ಸ್​ ಎಂದು ತಾಂಡವ್​ನ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು!
 

Tandav inevitably blocked Shresthas number because of Kusuma in Bhagyalakshmi suc
Author
First Published Jul 25, 2024, 5:56 PM IST | Last Updated Jul 25, 2024, 5:56 PM IST

 ಸದ್ಯ ಶ್ರೇಷ್ಠಾ ಮತ್ತು ತಾಂಡವ್​ ಗ್ರಹಚಾರ ನೆಟ್ಟಗಿಲ್ಲ. ಶ್ರೇಷ್ಠಾ, ತಾಂಡವ್​ಗೆ ಕಾಲ್​  ಮಾಡಿದ್ದಾಳೆ. ಶ್ರೇಷ್ಠಾಳ ಹೆಸರು ನೋಡಿದ ಭಾಗ್ಯಳಿಗೆ ಉರಿ ಹತ್ತಿದೆ. ಫೋನ್​ ರಿಸೀವ್ ಮಾಡಿ ಹಲೋ ಹೇಳಲಿಲ್ಲ. ತಾಂಡವ್​ನೇ ಫೋನ್​ ರಿಸೀವ್​ ಮಾಡಿದ್ದು ಎಂದು ತಿಳಿದ ಶ್ರೇಷ್ಠಾ, ರೋಷಾವೇಷದಿಂದ ತಾಂಡವ್​ಗೆ ಬಯ್ಯುತ್ತಿದ್ದಾಳೆ. ತನ್ನ ಜಾತಕದಲ್ಲಿ ಏನೋ ದೋಷ ಇದೆ ಎಂದು ಅಪ್ಪ-ಅಮ್ಮ ಹೇಳಿದ್ದು, ಬಾಳೆಗಿಡಕ್ಕೆ ಮದುವೆ ಮಾಡಬೇಕು ಎಂದೆಲ್ಲಾ ಹೇಳ್ತಿದ್ದಾರೆ. ಇದೆಲ್ಲಾ ನನಗೆ ಆಗಿ ಬರಲ್ಲ. ನೀನು ನನ್ನ ಅಪ್ಪ-ಅಮ್ಮನ ಬಳಿ ಮಾತನಾಡು ಎಂದು ಹೇಳಿಬಿಟ್ಟಿದ್ದಾಳೆ. ಇಷ್ಟು ಕೇಳುತ್ತಿದ್ದಂತೆಯೇ ಭಾಗ್ಯಳ ಆವೇಷ ಉಕ್ಕಿ ಹರಿದಿದೆ. ಬಾಯಿಗೆ ಬಂದಂತೆ ಶ್ರೇಷ್ಠಾಳನ್ನು ಉಗಿದು ಉಪ್ಪಿನಕಾಯಿ ಹಾಕಿದ್ದಾಳೆ. ಅಷ್ಟೊತ್ತಿಗಾಗಲೇ ಫೋನ್​ ಹುಡುಕುತ್ತಾ ತಾಂಡವ್​ ಬಂದಿದ್ದಾನೆ. ತನ್ನ ಫೋನ್​ ಭಾಗ್ಯಳ ಕೈಯಲ್ಲಿ ನೋಡಿ ನಖಶಿಖಾಂತ ಉರಿದು ಹೋಗಿದೆ. 

ಅಷ್ಟರಲ್ಲಿ ಕುಸುಮಾಳ ಎಂಟ್ರಿ ಆಗಿದೆ. ಶ್ರೇಷ್ಠಾಳ ಜೊತೆ ಭಾಗ್ಯ ಮಾತನಾಡುತ್ತಿದ್ದುದನ್ನು ಅವಳು ಕೇಳಿಸಿಕೊಂಡಿದ್ದಾಳೆ. ಇನ್ನು ಕೇಳಬೇಕೆ? ತಾಂಡವ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾಳೆ. ಇನ್ನು ಮುಂದೆ ಶ್ರೇಷ್ಠಾಳಿಂದ ಹತ್ತು ಅಡಿ ದೂರ ಇರುವಂತೆ ಹೇಳಿದ್ದಾಳೆ. ಯಾವುದೇ ಕಾರಣಕ್ಕೂ ಶ್ರೇಷ್ಠಾ ತಮ್ಮ ಮನೆಯ ಕಡೆ ತಲೆ ಹಾಕಬಾರದು, ಅವಳನ್ನು ಭೇಟಿಯಾಗಬಾರದು ಎಂದು ಷರತ್ತು ವಿಧಿಸಿದ್ದಾಳೆ. ಇದೇ ವೇಳೆ ಮೊಬೈಲ್​ನಿಂದ ಶ್ರೇಷ್ಠಾಳ ನಂಬರ್​ ಡಿಲೀಟ್​ ಮಾಡುವಂತೆ ಸಲಹೆ ಕೊಟ್ಟಿದ್ದಾಳೆ. ಮಧ್ಯ ಬಂದ ಮಗಳು ತನ್ವಿ, ಅಜ್ಜಿ ನಂಬರ್​ ಡಿಲೀಟ್​ ಮಾಡಿದ್ರೆ ಶ್ರೇಷ್ಠಾ ಆಂಟಿ ಕಾಲ್​ ಮಾಡ್ಬೋದು. ಅದಕ್ಕೆ ಡಿಲೀಟ್​ ಅಲ್ಲ, ನಂಬರ್​ ಬ್ಲಾಕ್​ ಮಾಡಿದ್ರೆ ಮತ್ತೆ ಕಾಲ್​ ಮಾಡೋಕೆ ಆಗಲ್ಲ ಎಂದಿದ್ದಾಳೆ. ಹಾಗೆ ಮಾಡುವಂತೆ ಕುಸುಮಾ ಹೇಳಿದ್ದಾಳೆ. ಬೇರೆ ದಾರಿ ಕಾಣದ ತಾಂಡವ್​ ನಂಬರ್​ ಬ್ಲಾಕ್ ಮಾಡಿದ್ದಾನೆ.

ಮನಿಷಾ ಜೊತೆ ಪ್ರೇಮದ ಕಿಚ್ಚು ಹೊತ್ತಿಸಿದ ಕಂಠಿ! ಸ್ನೇಹಾ ಕಥೆ ಏನು ಕೇಳ್ತಿದ್ದಾರೆ ಫ್ಯಾನ್ಸ್​...

ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ ತಾಂಡವ್​ ಅಭಿಮಾನಿಗಳು ಬೇರೆ ಸಿಮ್​ ತೆಗೆದುಕೊಳ್ಳುವಂತೆ ಸಲಹೆ ಕೊಡುತ್ತಿದ್ದಾರೆ. ಬೇರೆ ಸಿಮ್​ ತಗೊಂಡು ನಂಬರ್​ ಅನ್ನು ಶ್ರೇಷ್ಠಾಳಿಗೆ ಕೊಡು, ಆರಾಮಾಗಿರು, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ, ನಿನ್​ ಜೊತೆ ನಾವಿದ್ದೇವೆ ಎಂದು ತಮಾಷೆಯ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಇನ್ನು ಕೆಲವರು ಹತ್ತು ಅಡಿ ಅಂತಷ್ಟೇ ನಿನ್ನ ಅಮ್ಮ ಹೇಳಿದ್ದಾಳೆ ಅಲ್ವಾ? 11 ಅಡಿ ದೂರ ನಿಂತು ಮಾತಾಡಿದ್ರೆ ಆಯ್ತಪ್ಪ ಎನ್ನುತ್ತಿದ್ದಾರೆ. ಇನ್ನು ಭಾಗ್ಯ ಫ್ಯಾನ್ಸ್​ಗಂತೂ ಖುಷಿಯೋ ಖುಷಿ. ಬದಲಾದ ಭಾಗ್ಯಳನ್ನು ನೋಡಿ ಸೀರಿಯಲ್​ ಬಗ್ಗೆ ಜನರು ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದಾರೆ.

ಇನ್ನು, ಶ್ರೇಷ್ಠಾ ತನ್ನ ಗಂಡನ ಜೊತೆಗೆ ಮದುವೆಯಾಗಲು ಸಕಲ ಸಿದ್ಧತೆ ನಡೆಸುತ್ತಿದ್ದಾಳೆ ಎನ್ನುವುದು ಭಾಗ್ಯಳಿಗಾಗಲೇ ಮನೆವರಿಗಾಗಲೀ ಗೊತ್ತಿಲ್ಲ. ಆದರೆ ಎಲ್ಲರಿಗೂ ಶ್ರೇಷ್ಠಾಳ ದುರ್ಬುದ್ಧಿ ಗೊತ್ತಾಗಿದೆ. ಇದೇ ಕಾರಣಕ್ಕೆ ಸಿಕ್ಕ ಸಿಕ್ಕಲ್ಲೆಲ್ಲಾ ಶ್ರೇಷ್ಠಾಳಿಗೆ ಅವಮರ್ಯಾದೆ ಮಾಡುತ್ತಿದ್ದಾಳೆ ಭಾಗ್ಯ. ಬಟ್ಟೆ ಅಂಗಡಿಗೆ ಭಾವಿ ಗಂಡ ತಾಂಡವ್​ ಜೊತೆ ಹೋಗಿದ್ದ ಶ್ರೇಷ್ಠಾಳಿಗೆ ಬೆಂಡೆತ್ತಿದ್ದಾಳೆ ಭಾಗ್ಯ. ಎಲ್ಲರ ಎದುರು ಅವಮಾನ ಮಾಡಿದ್ದಾಳೆ. ಅದೇ  ಇನ್ನೊಂದೆಡೆ ಯಾವುದೇ ಕಾರಣಕ್ಕೂ ನಾನು ಡಿವೋರ್ಸ್​ ಕೊಡಲ್ಲ ಎಂದು ತಾಂಡವ್​ಗೆ ಖಡಾಖಂಡಿತವಾಗಿ ಹೇಳಿದ್ದಾಳೆ. ಈಗ ತಾಂಡವ್​ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಇತ್ತ ಭಾಗ್ಯಳನ್ನು ಬಿಡುವ ಹಾಗೂ ಇಲ್ಲ, ಅತ್ತ ಶ್ರೇಷ್ಠಾಳ ಜೊತೆ ಮದುವೆ ನಿಲ್ಲಿಸುವ ಹಾಗೂ ಇಲ್ಲ. ಇದೀಗ ತರಕಾರಿ ಖರೀದಿಗೆ ಹೋಗಿರುವ ಭಾಗ್ಯ, ಅಲ್ಲಿ ತರಕಾರಿಯನ್ನು ಖರೀದಿಸುವ ಪಾಠ ಮಾಡಿದ್ದಾಳೆ ತಾಂಡವ್​ಗೆ. ಕೊನೆಗೆ ಪೂಜಾ ಅಷ್ಟೂ ತರಕಾರಿಗಳನ್ನು ತಾಂಡವ್​ ಕೈಯಲ್ಲಿ ಟಾಂಗ್​ ಕೊಡುತ್ತಲೇ ಹೊರಿಸಿದ್ದಾಳೆ. ಸದ್ಯ ಭಾಗ್ಯಳ ಪಾಲಿಗೆ ಅದೃಷ್ಟ ಒಲಿದಿದೆ. ಮುಂದೇನು ಎನ್ನುವ ಕಾತರ ಅಭಿಮಾನಿಗಳಲ್ಲಿದೆ. 

ರಾಜಾ ರಾಣಿ ಷೋನಲ್ಲಿ ದಿಢೀರ್​ ಕೆಳಕ್ಕೆ ಬಿದ್ದ ಸ್ಪರ್ಧಿ: ದಿಗ್ಭ್ರಮೆಯಿಂದ ಕೂಗಿಕೊಂಡ ತೀರ್ಪುಗಾರರು

Latest Videos
Follow Us:
Download App:
  • android
  • ios