Asianet Suvarna News Asianet Suvarna News

ರಾಮ್​ನನ್ನು ಬಿಟ್ಟುಬಿಡು ಎಂದ ಚಾಂದನಿಗೆ ಮಾತಿನಿಂದಲೇ ಚಾಟಿ ಏಟು ಕೊಟ್ಟ ಸೀತಾ: ಭೇಷ್​ ಎಂದ ಫ್ಯಾನ್ಸ್​...

ರಾಮ್ ನನ್ನವನು, ಅವ​ನನ್ನು ಬಿಟ್ಟುಬಿಡು ಎಂದ ಚಾಂದನಿಗೆ ಮಾತಿನಿಂದಲೇ ಚಾಟಿ ಏಟು ಕೊಟ್ಟಿದ್ದಾಳೆ ಸೀತಾ. ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದ ಸಂಭಾಷಣೆ ಏನು? 
 

Seeta verbally slapped Chandani saying that she and ram both loves each other suc
Author
First Published Mar 29, 2024, 12:09 PM IST

ಒಂದು ಕಡೆ ಚಾಂದನಿ, ಇನ್ನೊಂದು ಕಡೆ ಸೀತಾ. ಇವರಿಬ್ಬರೂ ಈಗ ರಾಮ್​ ಬಾಳಿಗೆ ಬಂದಾಗಿದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಚಾಂದನಿ ರಾಮ್​ಗೆ ಮೋಸ ಮಾಡಿ ತಿರಸ್ಕರಿಸಿ ಹಣದ ಹಿಂದೆ ಹೋದಾಕೆ. ಆಕೆಯ ನೆನಪಿನಲ್ಲಿಯೇ ಕೊರಗಿ ಹೋಗಿದ್ದ ರಾಮ್​ಗೆ ಪ್ರೀತಿಯನ್ನು ಉಣಬಡಿಸಿದವಳು ಸೀತಾ. ಸಿಹಿಯ ಕಾರಣದಿಂದ ಸೀತಾಳ ಮೇಲೆ ರಾಮ್​ಗೆ ಪ್ರೀತಿ ಹುಟ್ಟಿದೆ. ಸೀತಾಳನ್ನು ಪಡೆಯಲು ಒಂದು ರೀತಿಯಲ್ಲಿ ಹರಸಾಹಸವನ್ನೇ ಮಾಡಿದ್ದಾನೆ. ಕಷ್ಟಪಟ್ಟು ಚಾಂದನಿಯನ್ನು ಮರೆಯಬೇಕು ಎನ್ನುವಾಗಲೇ ಚಾಂದನಿಯ ಎಂಟ್ರಿ ಆಗಿದೆ. ಏನೋ ದುರುದ್ದೇಶ ಇಟ್ಟುಕೊಂಡು ವಾಪಸ್​ ಆಗಿದ್ದಾಳೆ. ಅವಳಿಗೆ ಬೇರೆ ರಾಮ್​ನ ಕುತಂತ್ರಿ ಚಿಕ್ಕಮ್ಮನ ಸಾಥ್​. ಚಿಕ್ಕಮ್ಮನಿಗೆ ಹೇಗಾದರೂ ಮಾಡಿ ರಾಮ್​ ಮತ್ತು ಸೀತಾರನ್ನು ದೂರ ಮಾಡುವ ಆಸೆ. ರಾಮ್​ ನೆಮ್ಮದಿಯಿಂದ  ಇರುವುದನ್ನು ನೋಡಲು ಅವಳಿಗೆ ಸಾಧ್ಯವಿಲ್ಲ.

ಹೀಗಿರುವಾಗಲೇ ಚಾಂದನಿಯ ಸೀತಾ ಮತ್ತು ರಾಮ್​ ಲವ್​ ವಿಷಯ ತಿಳಿದಿದೆ. ರಾಮ್​ನನ್ನು ಬಿಟ್ಟುಬಿಡು ಎಂದು ಸೀತಾಳಿಗೆ ಬುದ್ಧಿ ಹೇಳಿದ್ದಾಳೆ. ಪ್ರೀತಿ ಎಂದರೆ ತ್ಯಾಗ, ಅದಕ್ಕಾಗಿ ನೀನು ರಾಮ್​ನನ್ನು ನನಗೆ ಕೊಡು. ನಾವಿಬ್ಬರೂ ತುಂಬಾ ಲವ್​ ಮಾಡುತ್ತಿದ್ದೇವೆ ಎಂದಿದ್ದಾಳೆ. ಆದರೆ ಸೀತಾಳಿಗೆ ಚಾಂದನಿಯ ಪೂರ್ವಪರ ಎಲ್ಲವೂ ಚೆನ್ನಾಗಿ ಗೊತ್ತಿದೆ. ಅವಳು ರಾಮ್​ಗೆ ಹೇಗೆ ಮೋಸ ಮಾಡಿದ್ದಾಳೆ ಎನ್ನುವುದೂ ಗೊತ್ತಿದೆ. ಮಾತ್ರವಲ್ಲದೇ ರಾಮ್​ ಮನಸ್ಸಿನಲ್ಲಿ ಆಕೆಯ ಮೇಲೆ ಎಳ್ಳಷ್ಟೂ ಪ್ರೀತಿ ಇಲ್ಲ ಎನ್ನುವ ಸತ್ಯವೂ ತಿಳಿದಿದೆ. ಇದೇ ಕಾರಣಕ್ಕೆ ಅವಳು ಚಾಂದನಿಗೆ ಮಾತಿನಿಂದಲೇ ಚಾಟಿ ಏಟು ನೀಡಿದ್ದಾಳೆ. ತ್ಯಾಗ ಮಾಡಬೇಕು ಎನ್ನುವುದು ಸರಿಯೇ. ಆದರೆ ರಾಮ್​ ನಿಮ್ಮನ್ನು ಪ್ರೀತಿಸುತ್ತಲೇ ಇಲ್ಲವಲ್ಲ, ಇನ್ನೆಲ್ಲಿಯ ತ್ಯಾಗ ಎಂದು ಪ್ರಶ್ನಿಸಿದ್ದಾಳೆ. ರಾಮ್​  ನನ್ನನ್ನು ಮತ್ತುನಾನ್​ ರಾಮ್​ನನ್ನು ಪ್ರೀತಿಸುತ್ತಿದ್ದೇವೆ. ಅವರ ಮನಸ್ಸಿನಲ್ಲಿ ನಿಮಗೆ ಜಾಗವೇ ಇಲ್ಲವೆಂದ ಮೇಲೆ ಇನ್ನೇನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವೀಕ್ಷಕರು ಭೇಷ್​ ಭೇಷ್​ ಎನ್ನುತ್ತಿದ್ದಾರೆ. 

ನಾನು ನಂದಿನಿ, ಬ್ಲ್ಯಾಕ್​ಮೇಲ್​ ಮಾಡ್ತೀನಿ... ಎನ್ನುತ್ತಲೇ ಭಾಗ್ಯಳ ಭರ್ಜರಿ ಎಂಟ್ರಿ! 'ಕಳ್ಳಿ' ಕನ್ನಿಕಾ ಮಿಸ್​ ಸುಸ್ತೋ ಸುಸ್ತು..

ಸೀತಾ- ರಾಮ ಕಲ್ಯಾಣ ಇನ್ನೇನು ಆಗುತ್ತಿದೆ ಎಂದು ಪ್ರೇಕ್ಷಕರು ಖುಷಿ ಪಡುವ ಹೊತ್ತಿನಲ್ಲಿಯೇ ಏನೇನೋ ಸಮಸ್ಯೆಗಳು ನಡೆಯುತ್ತಲೇ ಇವೆ. ಅತ್ತ ರಾಮ್​ನ ಚಿಕ್ಕಮ್ಮ ತಾತನ ಎದುರು ಚಾಂದನಿ ಮತ್ತು ರಾಮ್​ನ ಮದುವೆಯ ಬಗ್ಗೆ ಮಾತನಾಡಿದ್ದಾಳೆ. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪ ಹುಡುಕುವುದು ಯಾಕೆ ಎಂದು ಪ್ರಶ್ನಿಸಿದ್ದಾಳೆ. ತಾತನೂ ಅದಕ್ಕೆ ಸಮ್ಮತಿ ಸೂಚಿಸಿದಂತೆ ತೋರುತ್ತಿದೆ. ಚಿಕ್ಕಮ್ಮಗೆ ಸೀತಾ ಮತ್ತು ರಾಮ್​ ಪ್ರೀತಿ ಮಾಡುತ್ತಿರುವ ವಿಷಯ ತಿಳಿದಿದ್ದರೂ, ಅದನ್ನು ತಪ್ಪಿಸುವುದಕ್ಕಾಗಿ ಕುತಂತ್ರ ರೂಪಿಸುತ್ತಿದ್ದಾಳೆ. ಆದರೆ ಸೀತಾ-ರಾಮರ ಲವ್​ ಸ್ಟೋರಿ ಏನೋ ಶುರುವಾಗಿಬಿಟ್ಟಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್​ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್​ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್​ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ.  

 

ಇದೀಗ, ಸಿಹಿ ಕೂಡ ನನ್ನ ಮಗಳೇ ಎಂದು ರಾಮ್​ ಹೇಳಿದ್ದಾನೆ. ಆದರೆ ಸಿಹಿಯ ಹುಟ್ಟಿನ ರಹಸ್ಯದ ಬಗ್ಗೆ ನಿಮಗೆ ಹೇಳಲೇಬೇಕು ಎಂದು ಸೀತಾ ಹಠ ಮಾಡಿದ್ದಾಳೆ. ರೆಸ್ಟೋರೆಂಟ್​ ಒಂದರಲ್ಲಿ ಹಿಂದಿನ ಘಟನೆಗಳ ಕುರಿತು ಸೀತಾ ಹೇಳುತ್ತಿರುವಾಗಲೇ, ಇವರಿಬ್ಬರೂ ಹೋಗಿದ್ದನ್ನು ನೋಡಿ ಹಿಂಬಾಲಿಸಿಕೊಂಡು ಬಂದಿರುವ ಚಾಂದನಿ ಅಷ್ಟರಲ್ಲಿಯೇ ಎಂಟ್ರಿ ಕೊಟ್ಟಿದ್ದಾಳೆ. ರಾಮ್​ನನ್ನು ಬಿಟ್ಟುಬಿಡುವಂತೆ ಹೇಳಿದ್ದಾಳೆ. ಇವೆಲ್ಲವುಗಳ ನಡುವೆ ರಾಮ್​  ಮತ್ತು ಸೀತಾ ಒಂದಾಗುತ್ತಾರಾ ಎನ್ನುವುದು ಈಗಿರುವ ಪ್ರಶ್ನೆ. 

'ದರ್ಶನ್'​ ನಟಿ ನವನೀತ್​ ಕೌರ್​ಗೆ ಬಿಜೆಪಿಯಿಂದ ಟಿಕೆಟ್​: ಹನುಮಾನ್​ ಚಾಲೀಸಾದಿಂದ ಸುದ್ದಿಯಾಗಿದ್ದ ಸಂಸದೆ
 

Follow Us:
Download App:
  • android
  • ios