ಬರ್ತ್ಡೇ ಸಂಭ್ರಮದಲ್ಲಿ ಅಮುಲ್ ಬೇಬಿ: ಸತ್ಯ ಸೀರಿಯಲ್ ಭರ್ಜರಿ ಪಾರ್ಟಿ ಹೀಗಿದೆ ನೋಡಿ...
ಸತ್ಯ ಸೀರಿಯಲ್ನಲ್ಲಿ ಕಾರ್ತಿಕ್ ಪಾತ್ರಧಾರಿಯಾಗಿರುವ ಸಾಗರ್ ಬಿಳಿಗೌಡ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸತ್ಯ ಸೀರಿಯಲ್ ತಂಡ ಹೇಗೆ ಅವರ ಬರ್ತ್ಡೇ ಆಚರಿಸಿದೆ ನೋಡಿ.
ಜೀ ಕನ್ನಡ ಚಾನೆಲ್ನಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್ ಧಾರಾವಾಹಿಯಲ್ಲಿನ ಅಮುಲ್ ಬೇಬಿಯ (Amul Baby) ಮುಗ್ಧತೆ ಬಗ್ಗೆ ಹೇಳಬೇಕಾಗಿಲ್ಲ. ಮುಗ್ಧ ಹುಡುಗನಾಗಿ, ಅಮ್ಮನ ಮುದ್ದಿನ ಮಗನಾಗಿ ಅಭಿನಯಿಸುತ್ತಿದ್ದಾರೆ. ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗ್ತಿರೋ ಕಾರ್ತಿಕ್ ಕ್ಯೂಟ್ ನಗು ಎಂದರೆ ಎಲ್ಲರಿಗೂ ಬಹಳ ಇಷ್ಟ ಎಂದೇ ಹೇಳಬೇಕು. ಚಿಕ್ಕಮಕ್ಕಳಂತೆ ಮುದ್ದು ಮುದ್ದಾಗಿ ನಗುತ್ತಾ ಧಾರಾವಾಹಿಯಲ್ಲಿ ಎಲ್ಲರನ್ನೂ ಮರಳುಗೊಳಿಸುತ್ತಾರೆ ಇವರು. ಪತ್ನಿ ಸತ್ಯ ಬಾಯಲ್ಲಿ ಕಾರ್ತಿಕ್ ಪ್ರೀತಿಯ ಹೆಸರು ಅಮುಲ್ ಬೇಬಿ. ಈ ಪಾತ್ರಕ್ಕೆ ತಕ್ಕಂತೆ ಮುಗ್ಧ ಮುಖ ಹೊಂದಿರೋ ಕಾರ್ತಿಕ್ ನಿಜವಾದ ಹೆಸರು ಸಾಗರ್ ಬಿಳಿಗೌಡ. ಅಂದಹಾಗೆ ಕಾರ್ತಿಕ್ ಅವರು ಸಾಫ್ಟವೇರ್ (Software) ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಬಳಿಕ ಕೆಲಸ ಬಿಟ್ಟು ಧಾರಾವಾಹಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಸತ್ಯ ಧಾರಾವಾಹಿಗೂ ಮೊದಲು ಅವರು, 'ಕಿನ್ನರಿ', 'ಮನಸಾರೆ'ಯಲ್ಲಿಯೂ ನಟಿಸಿದ್ದಾರೆ.
ಕಾರ್ತಿಕ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಳೆದ ಜನವರಿ 20ರಂದು ಸಾಗರ್ ಅವರು ಸಿರಿ ಎನ್ನುವವರ ಜೊತೆ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬಳಿಕ ಇದು ಇವರ ಮೊದಲ ಹುಟ್ಟುಹಬ್ಬ ಕೂಡ. ಇವರ ಬರ್ತ್ಡೇಗೆ ಸತ್ಯ ಸೀರಿಯಲ್ ತಂಡ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದೆ. ಸತ್ಯ ಸೀರಿಯಲ್ನ ಕೆಲವೊಂದು ದೃಶ್ಯಗಳನ್ನು ಜೋಡಿಸಿ ಕಾರ್ತಿಕ್ ಅವರ ಹುಟ್ಟುಹಬ್ಬದ ಉಡುಗೊರೆ ನೀಡಲಾಗಿದೆ. ಜೊತೆಗೆ ಸತ್ಯ ಸೀರಿಯಲ್ ತಂಡವು ಇವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದೆ. ಸೀರಿಯಲ್ನಲ್ಲಿ ನಾಯಕಿಯಾಗಿರುವ ಸತ್ಯಳಿಗೂ ಅಮುಲ್ ಬೇಬಿ ಕೇಕ್ ತಿನ್ನಿಸಿದ್ದು, ಇವರ ಫ್ಯಾನ್ಸ್ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
Bigg Boss ಮನೆಗೆ ಸ್ಪರ್ಧಿಯಾಗಿ ಚಾರ್ಲಿ! ಖುಷಿಯಿಂದ ಕುಣಿದ ನಾಯಿಗಳು ಏನ್ ಹೇಳಿದ್ವು ಕೇಳಿ...
ಇನ್ನು ಸಾಗರ್ ಅವರ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ, ಕಳೆದ ಜನವರಿ 20ರಂದು ಸಾಗರ್ ಅವರು ಸಿರಿ ಎನ್ನುವವರ ಜೊತೆ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಮದುವೆಗೆ ಕೆಲ ದಿನಗಳ ಮುಂಚೆಯಷ್ಟೇ ಫೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದ್ದರು. ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಹಸೆಮಣೆ ಏರಿದೆ. ಸಿರಿ ರಾಜು ಕೂಡ ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಇನ್ನು ಕೆಲವು ವೆಬ್ ಸೀರೀಸ್ ಗಳಲ್ಲೂ ನಟಿಸಿದ್ದಾರೆ.
ಧಾರಾವಾಹಿಯಲ್ಲಿ ನಟರಾಗಲು ಬಂದು ಬೇಸರದಿಂದ ಖಿನ್ನತೆಗೆ ಜಾರುವ ಯುವಕರ ಬಗ್ಗೆ ಮಾತನಾಡಿದ್ದ ಸಾಗರ್ ಅವರು, ನಟನಾಗುವ ಕನಸು ಹೊತ್ತು ತುಂಬಾ ಮಂದಿ ಆಡಿಷನ್ಗೆ ಹೋಗುತ್ತಾರೆ. ಅಲ್ಲಿ ಸೆಲೆಕ್ಟ್ ಆಗಿಲ್ಲ ಎಂದರೆ ಬೇಸರಪಟ್ಟುಕೊಳ್ಳುತ್ತಾರೆ. ಆದರೆ ಇದು ಸರಿಯಲ್ಲ. ಆ್ಯಕ್ಟರ್ ಆಗುವ ಆಸೆ ಹೊಂದಿರುವವರು ಮೊದಲು ಆ್ಯಕ್ಟಿಂಗ್ ಮಾಡುವುದನ್ನು ಕಲಿಯಬೇಕು. ಅವಕಾಶಗಳು ತುಂಬಾ ಇರುತ್ತವೆ. ಎಲ್ಲಿಯಾದರೂ ಅವಕಾಶ ಸಿಕ್ಕೇ ಸಿಗುತ್ತದೆ ಎಂದಿದ್ದರು. ಇದೇ ವೇಳೆ ಸತ್ಯ ಸೀರಿಯಲ್ನಲ್ಲಿ ತಾವು ಕ್ಯೂಟ್ ಆಗಿ ನಗಲು ಪಟ್ಟ ಶ್ರಮದ ಬಗ್ಗೆಯೂ ಮಾಹಿತಿ ಶೇರ್ ಮಾಡಿಕೊಂಡಿದ್ದರು. ನಿರ್ದೇಶಕರು ಕ್ಯೂಟ್ ಆಗಿ ನಗಲು ಹೇಳಿದ್ದಂತೆ. ಆದರೆ ಕ್ಯೂಟ್ ಹೇಗೆ ಎನ್ನುವುದೇ ತಮಗೆ ತಿಳಿದಿಲ್ಲ ಎಂದು ಸಾಗರ್ ಹೇಳಿದ್ದರು. ತಾವು ಹೇಗೆಲ್ಲಾ ನಕ್ಕು ತೋರಿಸಿದ್ರೂ ಅದು ಕ್ಯೂಟ್ ಎನಿಸಿರಲಿಲ್ಲ. ಆಮೇಲೆ ಕ್ಯೂಟ್ ಆಗಿ ನಗೋದು ಹೇಗೆ ಅಂತಾನೇ ಗೊತ್ತಾಗ್ತಿಲ್ಲ ಎಂದೆ. ನಂತರ ನಿರ್ದೇಶಕರು ಮಗುವನ್ನು ನೋಡಿ, ಅದಕ್ಕೆ ತಾನು ಯಾಕೆ ನಗ್ತೇನೆ ಅಂತಾನೇ ಗೊತ್ತಿರಲಿಲ್ಲ. ಅದರಲ್ಲಿ ಮುಗ್ಧತೆ, ಕ್ಯೂಟ್ನೆಸ್ ಇರುತ್ತದೆ. ಅದನ್ನು ನೋಡಿ ಹಾಗೆಯೇ ನಗಬೇಕು ಎಂದಾಗ ನಾನು ಪ್ರಾಕ್ಟೀಸ್ ಮಾಡಿಕೊಂಡೆ ಎಂದಿದ್ದರು.
ಸಿಎಂ ಸಿದ್ದರಾಮಯ್ಯನವ್ರು ಹೆಂಡ್ತಿಗೆ ಹೆದರ್ತಾರಾ? ಇದಕ್ಕೆ ಖುದ್ದು ಅವ್ರೇ ಕೊಟ್ಟ ಉತ್ರ ಏನು ನೋಡಿ