ಟೀವಿ ರಾಮಾಯಣದ ರಾಮ ಬಿಜೆಪಿ ಸೇರ್ಪಡೆ: ದೀದಿ ವಿರುದ್ಧ 100 ರಾರಯಲಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜೈ ಶ್ರೀ ರಾಮ ಘೋಷಣೆಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ರಾಮಾಯಣದ ಟೀವಿ ಧಾರವಾಹಿಯಲ್ಲಿ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಕಿರುತೆರೆ ನಟ ಅರುಣ್ ಗೋವಿಲ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ನವದೆಹಲಿ(ಮಾ.19): ಹಿರಿಯ ಬಿಜೆಪಿ ಮುಖಂಡ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಗುರುವಾರ ಅರುಣ್ ಗೋವಿಲ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಅಲ್ಲದೆ ಬಂಗಾಳದಲ್ಲಿ ದೀದಿ ಆಡಳಿತಕ್ಕೆ ಕೊನೇ ಆಡಲು ಯತ್ನಿಸುತ್ತಿರುವ ಬಿಜೆಪಿ ಪರವಾಗಿ ಗೋವಿಲ್ ಅವರು 100 ರಾರಯಲಿಗಳಲ್ಲಿ ಭಾಗಿಯಾಗಿ, ಮತದಾರರನ್ನು ಸೆಳೆಯಲಿದ್ದಾರೆ ಎನ್ನಲಾಗಿದೆ.
ಮಮತಾ ಆಟಕ್ಕೆ ಅಂತಿಮ ದಿನಾಂಕ ಫಿಕ್ಸ್ ಮಾಡಿದ ಮೋದಿ
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ನಟ ಅರುಣ್ ಗೋವಿಲ್, ‘ನನಗೆ ಮೊದಲಿಂದಲೂ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮತ್ತು ಜೈ ಶ್ರೀ ರಾಮ್ ಘೋಷಣೆಗೆ ಮಮತಾ ಬ್ಯಾನರ್ಜಿ ಅವರ ಆಕ್ಷೇಪ ವಿಚಾರಗಳು ನನ್ನನ್ನು ರಾಜಕೀಯದತ್ತ ಸೆಳೆದವು. ಜೈ ಶ್ರೀ ರಾಮ್ ಘೋಷಣೆಯು ರಾಜಕೀಯ ಘೋಷವಾಕ್ಯವಲ್ಲ. ಬದಲಿಗೆ ಇದೊಂದು ಜೀವನ ಪದ್ಧತಿಯಾಗಿದ್ದು, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.