Asianet Suvarna News Asianet Suvarna News

ಮುಖ್ಯಮಂತ್ರಿ ಮನೇಲಿ ಜಗಳ ಆಗುತ್ತಾ ? ತಮ್ಮ ಉತ್ತರಗಳಿಂದ ನಕ್ಕು ನಗಿಸ್ತಾರೆ ಸಿಎಂ ಬೊಮ್ಮಾಯಿ

  • ಸಿಎಂ ಬೊಮ್ಮಾಯಿ ಮನೆಯಲ್ಲಿ ಜಗಳಗಳಾಗುತ್ತಾ ?
  • ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ಮುಖ್ಯಮಂತ್ರಿ ಏನ್ ಹೇಳಿದ್ರು ಕೇಳಿ
Karnataka CM Basavaraj Bommai open up about fight at home in Colors Kannada Anubandha Awards 2021 dpl
Author
Bangalore, First Published Oct 18, 2021, 6:26 PM IST

ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್‌ ಸಖತ್ ಸೌಂಡ್ ಮಾಡಿದೆ. ಅವಾರ್ಡ್‌ಗಳ ಅಬ್ಬರ ಒಂದೆಡೆಯಾದರೆ ಟಾಪ್ ಸ್ಟಾರ್, ಸೆಲೆಬ್ರಿಟಿಗಳಿಂದ ವೇದಿಕೆಗೆ ರಂಗು ತುಂಬಿದೆ. ನಗಿಸಿ ಸುಸ್ತಾಗಿಸೋ ಜೋಕ್‌ಗಳು, ಡ್ಯಾನ್ಸ್‌ಗಳು, ಕಾಮೆಡಿ, ಗೇಮ್ಸ್‌ಗಳು ಪ್ರೇಕ್ಷಕರ ಮನಸು ಸೆಳೆದಿವೆ. ಈ ಬಾರಿಯ ಅನುಬಂಧ ಅವಾರ್ಡ್ಸ್‌ನಲ್ಲಿ (Anubandha Awards)ಸ್ಪೆಷಲ್ ಇದೆ. ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai)ಅನುಬಂಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಸಖತ್ ಫನ್ನಿಯಾಗಿದ್ದ, ಕುತೂಹಲಕಾರಿಯಾಗಿದ್ದ ಎಪಿಸೋಡ್‌ನಲ್ಲಿ ಸಿಎಂ ಬಹಳಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಶೇರ್ ಮಾಡಿದ್ದಾರೆ. ಏನೇನ್ ಹೇಳಿದ್ದಾರೆ ? ಸಿಎಂ ಕೊಟ್ಟ ಉತ್ತರಗಳ ಪ್ರೇಕ್ಷಕರನ್ನು ನಗಿಸಿದ ಪರಿ ಸುಂದರವಾಗಿ ಮೂಡಿ ಬಂದಿದೆ.

ಬಾಯ್‌ಫ್ರೆಂಡ್ ಏನ್ ಗಿಫ್ಟ್ ಕೊಟ್ರೆ ಖುಷಿಯಾಗುತ್ತೆ ? ಸಾರಾ ಹೇಳಿದ್ದಿಷ್ಟು

ಮಿಡಲ್ ಕ್ಲಾಸ್ ಮನೆಗಳಲ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗುತ್ತದೆ. ನಲ್ಲಿ ರಿಪೇರಿಯಂತಹ ಬಹಳಷ್ಟು ವಿಚಾರಗಳಿಗೆ ಜಗಳ ಆಗುತ್ತಿರುತ್ತದೆ, ಮುಖ್ಯಮಂತ್ರಿಗಳ ಮನೆಯಲ್ಲೂ ಹಾಗೆಯೇ ಜಗಳ ಆಗುತ್ತಿರುತ್ತಾ ? ಏನಕ್ಕಾದರೂ ಜಗಳವಾಗುತ್ತದಾ ಎಂದು ಪ್ರಶ್ನಿಸಿದ್ದಾರೆ ನಿರೂಪಕ.

ನಮ್ಮದೂ ಸಾಮಾನ್ಯ ಜನರ ಮನೆಯ ಹಾಗೆಯೇ. ನಲ್ಲಿ, ಎಲೆಕ್ರ್ಟಿಸಿಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಎಂದು ಅವುಗಳೇನೂ ಬದಲಾಗುವುದಿಲ್ಲ ಎಂದಿದ್ದಾರೆ ಸಿಎಂ.

ಸೃಜನ್‌ಗೆ ಮೈಸೂರ್ ಭಾಷೆ ಬೈಗುಳ ಹೇಳ್ಕೊಟ್ಟ ನಿವೇದಿತಾ

ನಿಮ್ಮ ಹೆಂಡತಿ ನಿಮ್ಮ ಜೊತೆ ಜಗಳವಾಗುತ್ತಿರುತ್ತಾ ? ಎಂದು ಕೇಳಿದಾಗ ಸಮಾನ್ಯ ಜೀವನ ಹೇಗಿದೆ ? ನಿಮ್ಮ ಮನೆಯಲ್ಲಿ ಹೇಗೆ ಗದರುತ್ತಾರೋ ಹಾಗೆಯೇ ನಮ್ಮನೆಯಲ್ಲೂ ಗದರುತ್ತಾರೆ ಎಂದು ಜೋರಾಗಿ ನಕ್ಕಿದ್ದಾರೆ ಸಿಎಂ

Follow Us:
Download App:
  • android
  • ios