ಸೀತಾಳಿಗೆ ಬಂತು ಮತ್ತೊಂದು ಮೆಸೇಜ್! ಬ್ಲ್ಯಾಕ್ಮೇಲ್ ಮಾಡ್ತಿರೋರು ಸಿಕ್ಕಿಬೀಳೋ ಟೈಂ ಬಂದೇ ಬಿಡ್ತಾ?
ಸೀತಾಳನ್ನು ಪಾರ್ಕ್ನಲ್ಲಿ ಸಿಗುವುದಾಗಿ ಬ್ಲ್ಯಾಕ್ಮೇಲ್ ಮಾಡುತ್ತಿರುವವನು ಮೆಸೇಜ್ ಮಾಡಿದ್ದಾನೆ. ರಾಮ್ ಸೀತಾಳ ಜೊತೆ ಹೋಗಲು ನಿರ್ಧರಿಸಿದ್ದಾನೆ. ಮುಂದೇನಾಗುತ್ತೆ?
ಸೀತಾಳ ಇತಿಹಾಸ ಇಲ್ಲಿಯವರೆಗೆ ಮುಚ್ಚಿಡಲಾಗಿದೆ. ರಾಮ್ನನ್ನು ತಾನು ಪ್ರೀತಿಸುತ್ತೇನೆ ಎಂದು ತಿಳಿದಾಗಲೇ ಸೀತಾಗೆ ಹಿಂದಿನ ಜೀವನದ ಬಗ್ಗೆ ಟೆನ್ಷನ್ ಶುರುವಾಗಿತ್ತು. ನಾನು ಇದನ್ನು ಮುಚ್ಚಿಡಬಾರದು ಎಂದುಕೊಂಡಿದ್ದಳು. ಸಂಪೂರ್ಣ ಕಥೆ ಕೇಳಿದ ಮೇಲೆ ರಾಮ್ ನನ್ನನ್ನು ಒಪ್ಪಿಕೊಳ್ತಾನಾ ಎನ್ನುವುದೂ ಆಕೆಗೆ ಸಂದೇಹ ಶುರುವಾಗಿತ್ತು, ಅಷ್ಟಕ್ಕೂ ಸೀತಾಳ ಹಿಂದಿನ ಕಥೆಯೇನು? ಅವಳದ್ದು ನಿಜವಾಗಿಯೂ ಮದ್ವೆಯಾಗಿದ್ಯಾ? ಗಂಡ ಬಿಟ್ಟಿದ್ದಾಳಾ ಅಥ್ವಾ ಗಂಡನೇ ಇಲ್ವಾ? ಸಿಹಿ ಸೀತಾಳ ಸ್ವಂತ ಮಗಳು ಹೌದಾ? ಎಷ್ಟೊಂದು ಪ್ರಶ್ನೆಗಳು ವೀಕ್ಷರನ್ನು ಕಾಡುತ್ತಿವೆ. ಅತ್ತ ಭಾರ್ಗವಿಗೂ ಸೀತಾ ಒಂದು ಮಗುವಿನ ತಾಯಿ ಎಂದು ತಿಳಿದಿದ್ದು, ಅವಳ ಇತಿಹಾಸ ಕೆದಕಲು ರುದ್ರಪ್ರತಾಪ್ನನ್ನು ಬಿಟ್ಟಿದ್ದಾಳೆ.
ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಸೀತಾ ಹೇಳಲು ಹೋದಾಗ ರಾಮ್ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್ನಲ್ಲಿ ಬಿದ್ದಿದ್ದಾರೆ. ಇದರ ಮಧ್ಯೆಯೇ, ಕೆಲ ಎಪಿಸೋಡ್ ಹಿಂದೆ ಬೈಕ್ನಲ್ಲಿ ಬಂದಾತನೊಬ್ಬ ಸಿಹಿಯನ್ನು ಕಿಡ್ನಾಪ್ ಮಾಡಿದ್ದ. ಸೀತಾಳ ಮೇಲೆ ದಾಳಿ ಮಾಡಲು ನೋಡಿದ್ದ. ರಾಮ್ನನ್ನು ಇರಿದಿದ್ದ. ಹಾಗಿದ್ದರೆ ಅವನಿಗೂ ಸೀತಾಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಸೀತಾರಾಮ ಸೀರಿಯಲ್ ಫ್ಯಾನ್ಗಳನ್ನು ಕಾಡುತ್ತಿದೆ.
ಓ ಕಾಸುಗಳೆ ನಿಮ್ಮ ನೋಡಿದಾಗ... ಹಳೆ ಕಾಲದ ನಾಣ್ಯ ನೋಡಿ ನೆನಪಿನಂಗಳಕ್ಕೆ ಜಾರಿಗೆ ಜಗ್ಗೇಶ್
ಅಷ್ಟಕ್ಕೂ, ಪ್ರೀತಿಸೋದು ಸುಲಭ. ಏಕೆಂದರೆ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ಆದರೆ ಪ್ರೀತಿಸಿದವರು ಸಿಗುವುದು ಅಷ್ಟು ಸುಲಭನಾ? ಅದೂ ಒಬ್ಬ ಅವಿವಾಹಿತನಿಗೆ ಒಂದು ಮಗುವಿನ ತಾಯಿ ಪತ್ನಿಯಾಗಿ ಬರುವುದು ಎಂದರೆ..? ಸಮಾಜ, ಕುಟುಂಬ, ಹಿನ್ನೆಲೆ... ಹೀಗೆ ನೂರೆಂಟು ವಿಘ್ನ. ಅದೇ ರೀತಿ ಇದೀಗ ಸೀತಾ ಬಾಳಲ್ಲೂ ಆಗಿದೆ. ಸೀತಾ ಮತ್ತು ರಾಮ್ ಮನಸ್ಸು ಒಂದಾಗಿದೆ. ಇದಕ್ಕೆ ಪುಟಾಣಿ ಸಿಹಿಯ ಮುದ್ರಯೂ ಬಿದ್ದಿದೆ. ಇನ್ನೇನು ಇಬ್ಬರೂ ಮದುವೆಯಾಗುವುದು ಒಂದೇ ಬಾಕಿ. ನಿಜ ಜೀವನದಲ್ಲಿಯೇ ಇಂಥ ಘಟನೆ ಕಷ್ಟಸಾಧ್ಯ ಎನ್ನಿಸಬೇಕಾದರೆ, ಸೀರಿಯಲ್ಗಳಲ್ಲಿ ಇದೇ ಮುಖ್ಯವಾಗಿರುವಾಗ ಅದು ಅಷ್ಟು ಬೇಗ ನಡೆದುಬಿಡುತ್ತಾ? ಸಾಧ್ಯವೇ ಇಲ್ಲ. ಇನ್ನೇನು ಎಲ್ಲವೂ ಒಂದು ಹಂತಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿಯೇ ಸೀತಾ ಮೊಬೈಲ್ಗೆ ಬಂದ ಮೆಸೇಜ್ ಆಕೆಯ ಮೂರ್ಛೆ ತಪ್ಪುವಂತೆ ಮಾಡಿತ್ತು. ಪ್ರಿಯಾ ಮತ್ತು ಅಶೋಕ್ ಮದುವೆಗೆ ಬಟ್ಟೆ ಖರೀದಿಗೆ ಹೋಗಿರೋ ಸೀತಾ-ರಾಮ್ ಮತ್ತು ಸೀತಾ ಎಲ್ಲರೂ ಬಟ್ಟೆ ಖರೀದಿಸಿ ವಾಪಸಾಗುತ್ತಿದ್ದ ಸಮಯದಲ್ಲಿ ಬಂದ ಮೆಸೇಜ್ ಇದು. ಅದರಲ್ಲಿ, ಅಷ್ಟು ಸುಲಭಕ್ಕೆ ಎಲ್ಲಾ ಮರೆತು ಇಷ್ಟೊಂದು ಮುಂದುವರೆದಿದ್ದಿಯಾ? ಅದು ಹೇಗೆ ನಿನ್ನ ಇತಿಹಾಸ ಮರೆತುಬಿಟ್ಟೆ ಸೀತಾ ಎಂದು ಕೇಳಲಾಗಿತ್ತು. ಇದನ್ನು ನೋಡಿ ಸೀತಾ ಮೂರ್ಛೆ ಹೋಗಿದ್ದಳು.
ಇದೀಗ ವಿಷಯ ರಾಮ್ಗೂ ಗೊತ್ತಾಗಿ ಸೀತಾಳಿಗೆ ಧೈರ್ಯ ತುಂಬುತ್ತಿದ್ದಾನೆ. ಬಂದಿರುವ ನಂಬರ್ಗೆ ಕರೆ ಮಾಡಿ ಲೌಡ್ ಸ್ಪೀಕರ್ನಲ್ಲಿ ಇಡುವಂತೆ ಹೇಳಿದ್ದಾನೆ. ಹೀಗೆ ಮಾಡ್ತಿದ್ದಂತೆಯೇ ಕರೆ ಕಟ್ಟಾಗಿದೆ. ಕೂಡಲೇ ಇನ್ನೊಂದು ಮೆಸೇಜ್ ಬಂದಿದೆ. ಐ ಲೈಕ್ ಇಟ್ ಸೀತಾ, ಸಂಜೆ ಐದು ಗಂಟೆಗೆ ನಿಮ್ಮ ಮನೆಯ ಬಳಿ ಇರುವ ಪಾರ್ಕ್ಗೆ ಬರುತ್ತೇನೆ ಎಂದಿದ್ದಾನೆ. ಆಗ ರಾಮ್, ಹೆದರಿಕೊಳ್ಳಬೇಡಿ. ನಾನು ನಿಮ್ಮ ಜೊತೆ ಬರುತ್ತೇನೆ. ಯಾರು ಎಂದು ನೋಡೋಣ. ನಿಮ್ಮ ಜೊತೆ ಸದಾ ಇರುತ್ತೇನೆ. ಹೆದರಬೇಡಿ ಎಂದಿದ್ದಾನೆ. ಈಗ ಬ್ಲ್ಯಾಕ್ಮೇಲ್ ಮಾಡುವವ ಸಿಕ್ಕಿಬೀಳ್ತಾನಾ ಅಥವಾ ಸೀತಾ ಜೊತೆ ರಾಮ್ ಬಂದಿರುವುದು ತಿಳಿದು ಮತ್ತೇನಾದ್ರೂ ಕಿತಾಪತಿ ಮಾಡ್ತಾನಾ ನೋಡಬೇಕಿದೆ.