ಅಮಾಯಕನ ವೇಷ ಹಾಕ್ಕೊಂಡು ಪ್ರತಾಪ್ ಬೂದಿ ಎರೆಚ್ತಾನೆ: ವಿನಯ್- ಡ್ರೋನ್ ಮಾತಿನ ಚಕಮಕಿ!
ಡ್ರೋನ್ ಪ್ರತಾಪ್ ಮತ್ತು ವಿನಯ್ ನಡುವೆ ಭಾರಿ ಜಗಳಕ್ಕೆ ಸಾಕ್ಷಿಯಾದ ಬಿಗ್ಬಾಸ್. ಮುಂದೇನಾಯ್ತು? ಪ್ರೊಮೋ ರಿಲೀಸ್
![Bigg Boss witnessed a huge fight between Drone Pratap and Vinay suc Bigg Boss witnessed a huge fight between Drone Pratap and Vinay suc](https://static-ai.asianetnews.com/images/01hkm4jb3138nvcs1119h58d66/bigg-boss-fighting_363x203xt.jpg)
ಬಿಗ್ಬಾಸ್ ಮನೆಯಲ್ಲಿ ಇರುವ ಹಾಲಿ ಸ್ಪರ್ಧಿಗಳ ಪೈಕಿ ಪ್ರಬಲ ಸ್ಪರ್ಧಿ ಎಂದೇ ಬಿಂಬಿಸಲಾಗುತ್ತಿರುವ ಡ್ರೋನ್ ಪ್ರತಾಪ್ ಮೊನ್ನೆ ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದು ಆತ್ಮಹತ್ಯೆಗೆ ಪ್ರಯತ್ನ ಎಂದೂ ಭಾರಿ ಸದ್ದು ಮಾಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿನ ವೈದ್ಯರು ಅನಾರೋಗ್ಯದ ಕಾರಣ ಕೊಟ್ಟು, ಇದು ಆತ್ಮಹತ್ಯೆಗೆ ಪ್ರಯತ್ನವೇನೂ ಅಲ್ಲ, ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್ ಪಾಯ್ಸನ್ ಆಗಿದೆ ಅಷ್ಟೇ ಎಂದು ಸ್ಪಷ್ಟನೆ ಕೊಟ್ಟರು. ಆದರೂ ಇವರಿಗೆ ಏನಾಯಿತು ಎನ್ನುವ ಬಗ್ಗೆ ಅಭಿಮಾನಿಗಳಿಗೆ ಇನ್ನೂ ಗೊಂದಲವಿದ್ದೇ ಇದೆ. ಕೆಲವರು ಆತ್ಮಹತ್ಯೆ ಎಂದರು, ಇನ್ನು ಕೆಲವರು ಫುಡ್ ಪಾಯಿಸನ್ ಎಂದರು, ಮತ್ತೆ ಕೆಲವರು ಉಳಿದ ಸ್ಪರ್ಧಿಗಳು ಇವರನ್ನು ಕಡೆಗಣಿಸಿದ್ದಕ್ಕೆ ಬೇಸರವಾಗಿತ್ತು ಎಂದರೆ, ಇನ್ನೂ ಕೆಲವರು ಪಾಲಕರಿಂದ ದೂರ ಇರುವಂತೆ ಸ್ವಾಮೀಜಿ ಹೇಳಿದ ಕಾರಣ ಮನನೊಂದುಕೊಂಡಿದ್ದರೆ ಪ್ರತಾಪ್ ಅಸ್ವಸ್ಥಗೊಂಡರು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳೂ ಶುರುವಾದವು.
ಅದಾದ ಬಳಿಕ ಫುಡ್ ಪಾಯಿಸನ್ನಿಂದ ತಾವು ಅಸ್ವಸ್ಥರಾಗಿರುವುದಾಗಿ ಪ್ರತಾಪ್ ಹೇಳಿಕೊಂಡರು. ಇದೀಗ ಅವರ ಬಿಗ್ಬಾಸ್ ಮನೆಗೆ ವಾಪಸಾಗಿದ್ದಾರೆ. ಅವರು ಮನೆಗೆ ವಾಪಸಾಗುತ್ತಿದ್ದಂತೆಯೇ ಉಳಿದ ಸ್ಪರ್ಧಿಗಳು ಅವರನ್ನು ಖುಷಿಯಿಂದಲೇ ಬರಮಾಡಿಕೊಂಡರು. ಆದರೆ ಇದೀಗ ಬಿಗ್ಬಾಸ್ ಮನೆಯಲ್ಲಿ ವಿನಯ್ ಮತ್ತು ಡ್ರೋನ್ ಪ್ರತಾಪ್ ಮಾತಿನ ಚಕಮಕಿ ನಡೆದಿದೆ. ಸ್ಪರ್ಧಿಗಳು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಈ ಚಕಮಕಿ ಶುರುವಾಗಿದೆ.
ಪ್ರತಾಪ್ ನಿಜಕ್ಕೂ ಆತ್ಮಹತ್ಯೆಗೆ ಯತ್ನಿಸಿದ್ರಾ? ಅಂದು ಏನಾಗಿತ್ತೆಂದು ಸಂಪೂರ್ಣ ಮಾಹಿತಿ ನೀಡಿದ ಡ್ರೋನ್
ಮೊದಲಿನಿಂದಲೂ ಸ್ವಲ್ಪ ಒರಟು ಸ್ವಭಾವದವರು ಎಂದೇ ಬಿಗ್ಬಾಸ್ ವೀಕ್ಷಕರಿಂದ ಆರೋಪ ಹೊತ್ತಿರುವ ವಿನಯ್ ಅವರು, ಪ್ರತಾಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರೆಚಿಕೊಂಡು ಇರುವುದೆಂದರೆ ಅದು ಪ್ರತಾಪ್’ ಎಂದು ಆವೇಷ ಭರಿತವಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ಸುಮ್ಮನೆ ಇದ್ದ ಪ್ರತಾಪ್ ಇದನ್ನು ಕೇಳುತ್ತಲೇ ವಿನಯ್ ವಿರುದ್ಧ ಕಿಡಿ ಕಾರಿದರು. ನೀವು ಅನ್ನುವ ಹಾಗೆ ಅನ್ನಿಸಿಕೊಳ್ಳಲು ಆಗುವುದಿಲ್ಲ, ಪರಿಣಾಮನೂ ನೆಟ್ಟಗಿರಲ್ಲ ಎಂದಿದ್ದಾರೆ.
ಆಗ ಅದಕ್ಕೆ ಮತ್ತೆ ತಿರುಗೇಟು ನೀಡಿದ ವಿನಯ್ ಅವರು, ಏನ್ ಮಾಡ್ತಿಯಾ ನೀನು ಅಂದಿದ್ದಾರೆ. ಆಗ ಪ್ರತಾಪ್, ಎದುರಿಗೆ ಬಂದು ಆವೇಷಭರಿತರಾಗಿ ಮೊದಲು ನೀಟಾಗಿ ಮಾತಾಡುವುದನ್ನು ಕಲಿತುಕೊಳ್ಳಿ. ನಾನು ಮಾತುಗಳ ಮುಖಾಂತರ ಉತ್ತರ ಕೊಡ್ತೀನಿ ಎಂದಾಗ ಮತ್ತಷ್ಟು ರೊಚ್ಚಿಗೆದ್ದ ವಿನಯ್, ‘ನೀನು ನನಗೆ ಹೇಳಿಕೊಡಬೇಕಾಗಿಲ್ಲ. ಹೋಗಲೇ’ ಎಂದಿದ್ದಾರೆ. ಈ ಸಂದರ್ಭದಲ್ಲಿ ತುಕಾಲಿ ಸಂತೋಷ್ ಮತ್ತು ಸಂಗೀತಾ ಸೇರಿಕೊಂಡು ಜಗಳ ತಪ್ಪಿಸಲು ಯತ್ನಿಸಿದ್ದಾರೆ. ಇದರ ಪ್ರಮೋ ರಿಲೀಸ್ ಆಗಿದೆ. ಈ ಜಗಳ ಯಾಕೆ ಶುರುವಾಯ್ತು, ಹೇಗೆ ಶುರುವಾಯ್ತು ಎನ್ನುವ ಕುತೂಹಲ ತಣಿಯಲು ಬಿಗ್ಬಾಸ್ ನೋಡಬೇಕಿದೆ.
ಆಸ್ಪತ್ರೆಯಿಂದ ಬಿಗ್ಬಾಸ್ ಮನೆಗೆ ಮರಳಿದ ಪ್ರತಾಪ್ಗೆ ಅದ್ಧೂರಿ ಸ್ವಾಗತ: ಡ್ರೋನ್ ಮೊಗದಲ್ಲಿ ನೋವು!