Asianet Suvarna News Asianet Suvarna News

ತಿರುಗುಬಾಣವಾದ ಮಾತು; ಚೈತ್ರಾ ಕುಂದಾಪುರ ಬೆವರಿಳಿಸಿದ ಕಿಚ್ಚ ಸುದೀಪ್

ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ಮಾತಿಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುರುಷರನ್ನು ಗೌರವಿಸಬೇಕು ಎಂದು ಹೇಳುವ ಚೈತ್ರಾ, 'ಒಬ್ಬ ಅಪ್ಪನಿಗೆ ಹುಟ್ಟಿದ್ರೆ' ಎಂದು ಬೈಯ್ಯುವುದು ತಾಯಿಗೆ ಬೈದಂತೆ ಎಂದು ಸುದೀಪ್ ಪ್ರಶ್ನಿಸಿದ್ದಾರೆ.

Bigg Boss Kannada 11 Promo Sudeep take class to chaitra Kundapur mrq
Author
First Published Oct 20, 2024, 3:01 PM IST | Last Updated Oct 20, 2024, 3:02 PM IST

ಬೆಂಗಳೂರು: ಈ ಬಾರಿಯ ಕನ್ನಡ ಬಿಗ್‌ಬಾಸ್ ಮೊದಲ ದಿನಗಳಿಂದ ಸದ್ದು ಗದ್ದಲಗಳಿಂದಲೇ ಶುರುವಾಯ್ತು. ಇದನ್ನು ನೋಡಿದ ವೀಕ್ಷಕರು ಎಲ್ಲರೂ ಜಗಳ ಮಾಡೋದಕ್ಕೆ ರೆಡಿಯಾಗಿ ಬಂದಂತಿದೆ ಎಂದು ಕಮೆಂಟ್ ಮಾಡಲಾರಂಭಿಸಿದರು. ಮೂರನೇ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಇತ್ತ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗಾಯಕ, ಹಳ್ಳಿಹೈದ ಹನುಮಂತನ ಆಗಮನವಾಗಿದೆ. ಲಾಯರ್ ಜಗದೀಶ್ ಮನೆಯಿಂದ ಎಲಿಮಿನೇಟ್ ಆಗಿದ್ದಕ್ಕೆ ಬಿಗ್‌ಬಾಸ್ ಮನೆಯುಲ್ಲಿರುವ ಎಲ್ಲಾ ಸದಸ್ಯರು ಸಂತಸ ವ್ಯಕ್ತಪಡಿಸಿದ್ದರು. ಶನಿವಾರದ ಸಂಚಿಕೆಯಲ್ಲಿಯೂ ಸುದೀಪ್ ಅವರ ಮುಂದೆಯೂ ಜಗದೀಶ್ ಹೊರಗೆ ಹೋಗಿದ್ದರ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದರು. 

ಮಹಿಳೆಯರಿಗೆ ಗೌರವ ಕೊಡಲ್ಲ, ಅವಾಚ್ಯಪದಗಳನ್ನು ಬಳಸಿ ಕಮೆಂಟ್ ಮಾಡುತ್ತಾರೆ ಎಂದು ಮನೆಮಂದಿಯೆಲ್ಲಾ ಒಕ್ಕೊಲರಿನಿಂದ ಜಗದೀಶ್ ವಿರುದ್ಧ ಆರೋಪ ಮಾಡಿದ್ದರು. ಜಗದೀಶ್ ಮತ್ತು ಚೈತ್ರಾ ಕುಂದಾಪುರ ನಡುವೆ ಹಲವು ಬಾರಿ ಜಗಳ ಆಗಿರೋದನ್ನು ಬಿಗ್‌ಬಾಸ್ ವೀಕ್ಷಕರು ಗಮನಿಸಿದ್ದಾರೆ. ಈ ಸಮಯದಲ್ಲಿ ಚೈತ್ರಾ ಕುಂದಾಪುರ ಆಡಿದ ಮಾತುಗಳಿಗೆ ಸುದೀಪ್ ಬೇಸರದ ಜೊತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆಗೊಳಿಸಿದೆ. 

ಹೆಣ್ಮಕ್ಕಳು, ಹೆಣ್ಣು ಮಕ್ಕಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಎಂದು ಹೇಳಿದ್ದೀರಿ ಅಲ್ಲವಾ ಮೇಡಮ್ ಎಂದು ಚೈತ್ರಾ ಅವರನ್ನು ಸುದೀಪ್ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಹೌದು ಎಂಬಂತೆ ಚೈತ್ರಾ ಕುಂದಾಪುರ ತಲೆಯಾಡಿಸುತ್ತಾರೆ. ಮುಂದುವರಿದ ಮಾತನಾಡುವ ಸುದೀಪ್, ನಿಮ್ಮ ಮಾತನ್ನು ನಾನು ಸಹ ಗೌರವಿಸುತ್ತೇನೆ. ಹಾಗೆ ಪುರುಷರನ್ನು ಸಹ ಮಹಿಳೆಯರು ಗೌರವಿಸಬೇಕು ಅಲ್ವೇ? ಓಕೆ, ಹಾಗಾದ್ರೆ, ನೀವು ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ ಎಂಬ ಮಾತನ್ನು ನೀವು ಹೇಳುತ್ತೀರಿ ಅಲ್ಲವೆ? ಈಗ ನೀವು ಅವರ ತಾಯಿಗೆ ತಾನೇ ಬೈದಿದ್ದು ಅಲ್ಲವಾ ಎಂದು ಸುದೀಪ್ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಮತ್ತೆ ಚೈತ್ರಾ ತಲೆಯಾಡಿಸುತ್ತಾರೆ. ಇತ್ತ ಹೊರಗೆ ಕುಳಿತಿದ್ದ ವೀಕ್ಷಕರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ. 

ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ್‌ಗೆ ಬರುತ್ತಲೇ ಖುಲಾಯಿಸಿದ ಅದೃಷ್ಟ

ಒಬ್ಬ ಅಪ್ಪನಿಗೆ ಹುಟ್ಟಿದ್ದೀಯಾ ಎಂದು ಯಾರೂ ಪುರುಷರಿಗೆ ಬೈಯ್ಯತ್ತಿಲ್ಲ. ಒಬ್ಬ ಅಪ್ಪಂಗೆ ಹುಟ್ಟಿದ್ರೆ ಅವರ ತಾಯಿಗೆ ಬೈದಂತೆ ಆಗುತ್ತದೆ. ಈ ರೀತಿ ಬೈಯ್ಯುವ ನೀವು ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಎಂದು ಕೇಳುತ್ತೀರಿ. ಇದು ಹೇಗೆ ಸಾಧ್ಯ ಎಂದು ಚೈತ್ರಾ ಕುಂದಾಪುರ ಅವರನ್ನು ಸುದೀಪ್ ಪ್ರಶ್ನೆ ಮಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಪ್ರೋಮೋಗೆ ಶೋ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಸುದೀಪ್ ಸರ್ ಮುಂದೆ ಮಾತಾಡೋಕೆ ಮೀಟರ್ ಬೇಕು. ಚೈತ್ರಾಗೆ ಚಳಿ ಬಿಡ್ಸೋದು ನೋಡಿ ಪಕ್ಕದವರು ಶಾಕ್ ಅಗಿದ್ದಾರೆ. ಹಾಗೆ ಪಕ್ಕದಲ್ಲಿರುವ ಭವ್ಯಾ ಗೌಡಗೂ ಕ್ಲಾಸ್ ತೆಗೆದುಕೊಳ್ಳಿ. ಚೈತ್ರಾಗೆ ಮಂಗಳಾರತಿ ಆಯ್ತು. ಈಗ ಭವ್ಯಾ ಮತ್ತು ಮಾನಸಾಗೆ ಬಾಕಿ ಇದೆ. ಶನಿವಾರ ಹಂಸಾಗೆ ಕ್ಲಾಸ್ ಆಗಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Breaking: ಲಾಯರ್ ಜಗದೀಶ್ ಎಕ್ಸ್‌ಕ್ಲೂಸಿವ್ ಸಂದರ್ಶನ: ಬಿಗ್ ಬಾಸ್ ಸ್ಪರ್ಧೆ ಬಗ್ಗೆ ಉಲ್ಟಾ ಹೊಡೆದ ವಕೀಲ!

Latest Videos
Follow Us:
Download App:
  • android
  • ios