Asianet Suvarna News Asianet Suvarna News

ಗೌತಮ್​ ಹೊಟ್ಟೆಗೆ ಇಳಿದಿದೆ ಸೋಮರಸ... ಹಾಸಿಗೆ ಹಾಕ್ತಿರುವಾಗಲೇ ಕೊನೆಗೂ ಬಂತು ಆ ಮೊದಲ ಅಕ್ಷರ...

ಗೌತಮ್​ಗೆ ಪಾನೀಯದಲ್ಲಿ ಮದ್ಯ ಸೇವಿಸಿ ನೀಡಿದ್ದಾನೆ ಗೆಳೆಯ ಆನಂದ್. ಈಗಲಾದ್ರೂ ಭೂಮಿಕಾಗೆ ಪ್ರೀತಿ ನಿವೇದನೆ ಮಾಡಿಕೊಳ್ತಾನಾ ಗೌತಮ್​?
 

Anand mixed alcohol to Gautham in a drink Is he proposing to Bhoomika in Amrutadhare suc
Author
First Published May 18, 2024, 2:30 PM IST

ಇದುವರೆಗೂ ಮನಸ್ಸು ಬಿಚ್ಚಿ ಐ ಲವ್​ ಯೂ ಎಂದು ಹೇಳದ ಗೌತಮ್​ ಮತ್ತು ಭೂಮಿಕಾ ಜೋಡಿ ಸದ್ಯ ಹನಿಮೂನ್​ಗೆ ತೆರಳಿದೆ.  ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವನ್ನು ಅವರು ಸವಿಯುತ್ತಿದ್ದಾರೆ. ಸದಾ ಜಗಳವಾಡುತ್ತಲೇ ಮದುವೆಯಾಗಿ, ಇದೀಗ ಒಬ್ಬರನ್ನೊಬ್ಬರು ಸಕತ್​ ಲವ್​ ಮಾಡ್ತಿರೋ ಜೋಡಿ ಇದು.  ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ. ಇದೀಗ ಈ ಜೋಡಿ ಹನಿಮೂನ್​ಗೆ ಹೋಗಲು ರೆಡಿಯಾಗಿದೆ. ನಾಚಿಕೊಳ್ಳುತ್ತಲೇ ಮಧುಚಂದ್ರಕ್ಕೆ ಹೋಗಿದ್ದಾರೆ.  ಇದೇ ವೇಳೆ ಮದುವೆಯಾಗಿ ಇಷ್ಟು ದಿನವಾದರೂ, ಭೂಮಿಕಾರಿಗೆ ತಾನು ಏನೂ ಗಿಫ್ಟ್​ ಕೊಟ್ಟಿಲ್ಲ ಎಂದು ಅಜ್ಜಿಯ ಬಳಿ ಹೇಳಿಕೊಂಡ ಗೌತಮ್​, ಚಿಕ್ಕಮಗಳೂರಿನಲ್ಲಿರುವ ಎಸ್ಟೇಟ್​ ಅನ್ನು ಭೂಮಿಕಾ ಹೆಸರಿಗೆ ಬರೆದು ಕೊಟ್ಟಿದ್ದಾನೆ. 

ಇತ್ತ ಈ ಜೋಡಿ ಹೀಗೆ ಪ್ರೀತಿಯ ವಿಷಯ ಹೇಳುವುದೇ ಇಲ್ಲ ಎಂದು ತಿಳಿದಿರುವ ಆನಂದ್​ ದಂಪತಿ ಗೌತಮ್​ಗೆ ಪಾನೀಯದಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾರೆ. ಇದಾಗಲೇ ಇದೇ ರೀತಿಯ ಪ್ರಯೋಗ ಭೂಮಿಕಾ ಮೇಲೆ ಮಾಡಿಯಾಗಿತ್ತು. ಆಗ ಭೂಮಿಕಾ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಳು. ಇಷ್ಟಾದರೂ ಗೌತಮ್​ಗೆ ಅದರ ಅರಿವೇ ಇರಲಿಲ್ಲ. ಆದರೆ ಈಗ ಕಾಲ ಸ್ವಲ್ಪ ಡಿಫರೆಂಟ್​ ಆಗಿದೆ. ಪತ್ನಿಯ ಮೇಲೆ ಅವನಿಗೂ ಪ್ರೀತಿ ಮೊಳಗಿದೆ, ಆದರೆ ಹೇಳಿಕೊಳ್ಳೋ ಧೈರ್ಯ ಇಲ್ಲವಷ್ಟೇ. ಇದೇ ಕಾರಣಕ್ಕೆ ಆನಂದ್​ ದಂಪತಿ ಮದ್ಯ ಬೆರೆಸಿದ ಪಾನೀಯ ಕೊಟ್ಟಿದ್ದು, ಅದನ್ನು ಗೌತಮ್​ ಕುಡಿದಿದ್ದಾನೆ.

ಹನಿಮೂನೋ, ಆಫೀಸ್​ ಟೂರೋ? ಮಧುಚಂದ್ರಕ್ಕೂ ಸೂಟು ಬೂಟು ಬೇಕಾ? ಗೌತಮ್​ ಕಾಲೆಳೆದ ಫ್ಯಾನ್ಸ್​

ಮಾಮೂಲಿನಂತೆ ಇಬ್ಬರೂ ಬೇರೆ ಬೇರೆ ಮಲಗಲು ಹೋಗಿದ್ದಾರೆ. ಭೂಮಿಕಾ ತಾನು ಕೆಳಗೆ ಮಲಗುವುದಾಗಿ ಹೇಳಿದ್ದಾಳೆ. ಅಷ್ಟರಲ್ಲಿ ಮದ್ಯದ ಅಮಲಿನಲ್ಲಿ ಪ್ರೀತಿಯ ಅಮಲೂ ಸೇರಿರೋ ಗೌತಮ್​, ಭೂಮಿಕಾಗೆ ಐ ಅಷ್ಟೇ ಹೇಳಿದ್ದಾನೆ. ಮುಂದೆ ಹೇಳಲಿಲ್ಲ. ಅಷ್ಟಕ್ಕೇ ಭೂಮಿಕಾ ನಾಚಿ ನೀರಾಗಿದ್ದಾಳೆ. ಮುಂದಿನ ಎರಡು ಶಬ್ದಗಳೂ ಹೇಳಿ ಬೇಗ ಅಂತಿದ್ದಾರೆ ಅಭಿಮಾನಿಗಳು.

ಅದೇ ಇನ್ನೊಂದೆಡೆ,  ಗೌತಮ್​ ಚಿಕ್ಕಮ್ಮ ಈ ಜೋಡಿಯ ಕೊಲೆ ಮಾಡಿಸುವ ಪ್ಲ್ಯಾನ್​ ಮಾಡಿದ್ದರಿಂದ ಇನ್ನೇನು ಆಗಬಹುದು ಎನ್ನುವ ಆತಂಕವೂ ಅಮೃತಧಾರೆ ಅಭಿಮಾನಿಗಳನ್ನು ಕಾಡುತ್ತಿದೆ.  ಮಗ ಗೌತಮ್​ ಮತ್ತು ಸೊಸೆ ಭೂಮಿಕಾ ಎಂದಿಗೂ ಒಂದಾಗಬಾರದು ಎಂದು ಬಯಸ್ತಿರೋ, ಸದಾ ಕುತಂತ್ರ ರೂಪಿಸುತ್ತಿರುವ ಅತ್ತೆ ಶಕುಂತಲಾ ದೇವಿ ಈಗ ಇಬ್ಬರನ್ನೂ ಹನಿಮೂನ್​ಗೆ ಕಳಿಸುವ ಪ್ಲ್ಯಾನ್​ ಮಾಡಿದ್ದಾಳೆ.   ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಬಂದು ಧಮ್ಕಿ ಹಾಕಿ ಹೋಗಿದ್ದಾರೆ. ಆ ಜಮೀನು ಇರುವುದು ಚಿಕ್ಕಮಗಳೂರಿನಲ್ಲಿ. ಆ ಜಮೀನಿನ ವಿವಾದದ ಬಗ್ಗೆ ಗೌತಮ್​ಗೆ ಯಾವುದೇ ಮಾಹಿತಿ ಇಲ್ಲ. ಇದನ್ನು ತಿಳಿಸದಂತೆ ಭೂಮಿಕಾಗೂ ಮನೆಯವರು ಹೇಳಿದ್ದಾರೆ. ಇದನ್ನೇ ದಾಳವಾಗಿಸಿಕೊಂಡ ಶಕುಂತಲಾ ಇಬ್ಬರನ್ನೂ ಹನಿಮೂನ್​ ನೆಪದಲ್ಲಿ ಚಿಕ್ಕಮಗಳೂರಿಗೆ ಕಳಿಸುವ ಪ್ಲ್ಯಾನ್​ ಮಾಡಿದ್ದಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. 

ಮತ್ತೊಂದೆಡೆ,  ಗೌತಮ್​ ಮತ್ತು ಭೂಮಿಕಾ ಇಲ್ಲದ ವೇಳೆ ಏನೋ ಪ್ಲ್ಯಾನ್​ ಮಾಡಿದ್ದಾನೆ ಜೈದೇವ್​. ತನ್ನನ್ನು ಅಪಹರಿಸಿರುವಂತೆ ನಾಟಕವಾಡಿ, ಅದನ್ನು ಪತ್ನಿಯ ಮೊಬೈಲ್​ಗೆ ವಿಡಿಯೋ ಕಳಿಸಿದ್ದಾನೆ. ಇದನ್ನು ನೋಡಿ ಮಲ್ಲಿ ಗಾಬರಿಯಾಗಿದ್ದಾಳೆ. ಕೊನೆಗೆ ಜೈದೇವ್​ ಕಪಾಟಿನಲ್ಲಿ ಇಟ್ಟಿರೋ ಫೈಲ್​ ಒಂದನ್ನು ತಂದುಕೊಡುವಂತೆ  ಮಲ್ಲಿಗೆ ಹೇಳಿದ್ದಾರೆ. ಇದು ಮೋಸದಾಟ ಎಂದು ಅರಿಯದ ಮಲ್ಲಿ ಫೈಲ್​ ತೆಗೆದಿದ್ದಾಳೆ. ಅದೇ ವೇಳೆ ಭೂಮಿಕಾ ಹೇಳಿದಮಾತು ಅವಳಿಗೆ ನೆನಪಾಗಿದೆ. ಹನಿಮೂನ್​ಗೆ ಹೋಗುವ ಸಂದರ್ಭದಲ್ಲಿ ಭೂಮಿಕಾ ಮಲ್ಲಿಗೆ, ನೀನು ತುಂಬಾ ಎಚ್ಚರದಿಂದ ಇರು. ಏನೇ ಒಂದು ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನನ್ನನ್ನು ಒಂದು ಮಾತು ಕೇಳು ಎಂದಿರುತ್ತಾಳೆ. ಅದು ನೆನಪಾಗಿದೆ.
ಮನೆ ಎರಡು ಭಾಗವಾಗಿದ್ಯಲ್ಲಾ... ಟಾಯ್ಲೆಟ್​ ಹೇಗೆ ಯೂಸ್​ ಮಾಡ್ತೀರಾ? ಸೃಜನ್​ ಪ್ರಶ್ನೆಗೆ ಭಾಗ್ಯ ಹೇಳಿದ್ದೇನು?

Latest Videos
Follow Us:
Download App:
  • android
  • ios