ನಾಟಕದಲ್ಲಿ ದುರ್ಯೋಧನನಾಗಿ ಮಿಂಚಿದ ತುಮಕೂರು ಎಸ್ ಪಿ
ತುಮಕೂರು ಪೊಲೀಸ್ ಆಯುಕ್ತರಾದ ಕೋನ ವಂಶಿಕೃಷ್ಣ ಮಹಾಭಾರತ ನಾಟಕದಲ್ಲಿ ಅಭಿನಯಿಸಿ ಜನಮನ ಸೆಳೆದಿದ್ದಾರೆ.
ತುಮಕೂರು (ಅ.28): ತುಮಕೂರು ಎಸ್ ಪಿ ಕೋನ ವಂಶಿಕೃಷ್ಣ ನಾಟಕ ಒಂದರಲ್ಲಿ ಪಾತ್ರ ಮಾಡಿ ಮಿಂಚಿದ್ದಾರೆ.
ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಕುರುಕ್ಷೇತ್ರ ನಾಟದಲ್ಲಿ ದುರ್ಯೋಧನನಾಗಿ ನಟಿಸಿ ಎಸ್ ಪಿ ಕೋನ ವಂಶಿ ಕೃಷ್ಣ ಮಿಂಚಿದ್ದಾರೆ.
ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದಲೇ ತುಮಕೂರಿನಲ್ಲಿ ನಡೆದ ನಾಟಕದಲ್ಲಿ ಅಭಿನಯಿಸಿದ್ದು, ಪೊಲೀಸ್ ಅಧಿಕಾರಿ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ 6 ತಿಂಗಳಿನಿಂದ ಪೊಲೀಸ್ ಇಲಾಖೆಯಿಂದ ನಾಟಕಾಭಿನಯ ಅಭ್ಯಾಸ ಮಾಡಿ ಪ್ರದರ್ಶಿಸಲಾಗಿದೆ. ಇಲಾಖೆಯ ಅನೇಕ ಸಿಬ್ಬಂದಿಯು ನಾಟಕದಲ್ಲಿ ಅಭಿನಯಿಸಿ ಜನ ಮನ ಸೆಳೆದಿದ್ದಾರೆ.