Asianet Suvarna News Asianet Suvarna News

400 ವರ್ಷದಿಂದ ಜೊತೆಗೇ ಬಾಳುತ್ತಿರುವ ಅವಿಭಕ್ತ ಕುಟುಂಬ

ತುಮಕೂರಿನಲ್ಲೊಂದು 400 ವರ್ಷ ಹಳೆಯ ಕುಟುಂಬ ವಾಸವಿದೆ. ಅದೂ ಅವಿಭಕ್ತ ಕಟುಂನ. ಸದಸ್ಯರ ಸಂಖ್ಯೆ ಬರೋಬ್ಬರಿ 150. ಇವರೆಲ್ಲರಿಗೂ ಒಂದೇ ಸೂರು, ಒಂದೇ ಅಡುಗೆ. ಇವರ ಕುಟುಂಬದ ಕುರಿತು ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯಲು ಈ ಸುದ್ದಿ ಓದಿ.

Joint family in tumakur living together from last 400 years
Author
Bangalore, First Published Oct 7, 2019, 2:04 PM IST

ತುಮಕೂರು(ಅ.07): ಕುಣಿಗಲ್ ಭಾರತದ ಪರಂಪರೆಯಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿದೆ. ಸಣ್ಣ ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ ಇದಕ್ಕೆ ವಿಭಿನ್ನವಾಗಿ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಸುಂದರ ಕುಪ್ಪೆ(ಸೂಳೆ ಕುಪ್ಪೆ ) ಗ್ರಾಮದಲ್ಲಿ ಕಳೆದ 7 ತಲೆಮಾರಿನ ಗುಂಡೇಗೌಡ ಎಂಬುವರ ಕುಟುಂಬ 400 ವರುಷಗಳಿಂದ ಈ ತಲೆಮಾರಿನವರೆಗೂ ಅವಿಭಕ್ತ ಕುಟುಂಬವಾಗಿ 150 ಮಂದಿ ಒಟ್ಟಾಗಿರುವುದು ವಿಶೇಷ.

ಆಧುನಿಕ ಯುಗದ ಭರಾಟೆಯಲ್ಲಿ ಏಕಾಂಗಿ ಜೀವನ ಬಯಸುವ ಯುವ ಜನತೆ ಈ ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಂಡು ಸಂತೋಷವಾಗಿ ಜೀವನ ಸಾಗಿಸುತ್ತಿರುವುದು ವಿಶೇಷ. ನೂರ ಐವತ್ತಕ್ಕಿಂತ ಹೆಚ್ಚು ಮಂದಿ ವಾಸಿಸುತ್ತಿದ್ದರು ಸಹ ಯಾವುದೇ ತಂಟೆ ತಕರಾರು ಸಮಸ್ಯೆಗಳು ಬಾರದೆ ಪ್ರತಿಯೊಬ್ಬರೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದಾರೆ.

ಮತ್ತೆ ಉಡಾಫೆ ಮಾತು: ಮಾಧುಸ್ವಾಮಿ ಮಂತ್ರಿ ಆದ್ಮೇಲೆ ಮಾತಿನ ವರಸೆ ಬದಲಾಯ್ತು ಅಲ್ವೇ..?

7 ತಲೆಮಾರುಗಳ ಹಿಂದೆ ಈ ಗ್ರಾಮದ ನಿವಾಸಿ ಗುಂಡೇಗೌಡ ಎಂಬುವರಿಗೆ ಮಕ್ಕಳು ಇಲ್ಲದ ಸಂದರ್ಭದಲ್ಲಿ ವೀರಣ್ಣ ಗೌಡ ಎಂಬ ಬಾಲಕನನ್ನು ದತ್ತು ಪಡೆದು ಸಾಕಲು ಪ್ರಾರಂಭಿಸಿದರು. ಆತನಿಗೆ ಜನಿಸಿದ ವೀರಭದ್ರಯ್ಯ ಮುದ್ದಪ್ಪ ಬೈರಮ್ಮ ಚನ್ನವೀರಪ್ಪ ಹಾಗೂ ಶಿವಣ್ಣ ಎಂಬುವರು ಎರಡನೇ ತಲೆಮಾರಿನ ವ್ಯಕ್ತಿಗಳಾಗಿದ್ದಾರೆ.

ತುಮಕೂರು: ದೇವೇಗೌಡರಿಂದ ಅಂತರ ಕಾಯ್ದುಕೊಂಡ ಮಾಜಿ ಸಚಿವ

ನಂತರ ಇವರ ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಪ್ರತಿ ಕುಟುಂಬದ ಸದಸ್ಯರು ಈ ಕುಟುಂಬದ ಒಡಲಲ್ಲಿ ಜನಿಸಿ ಇಲ್ಲಿ ಎಲ್ಲರ ಜೊತೆಯಲ್ಲಿ ಕಷ್ಟ ಸುಖಗಳನ್ನು ಈ ಮನೆಯಲ್ಲಿ ಕಳೆಯುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಹಿರಿಯರ ಮಾರ್ಗದರ್ಶನ:

ಈ ಒಟ್ಟು ಕುಟುಂಬದಲ್ಲಿ ಯಾವುದೇ ಸಂದರ್ಭದಲ್ಲೂ ಸರಿಯಾದ ತೀರ್ಮಾನ ತೆಗೆದುಕೊಳ್ಳುವುದು ಈ ಕುಟುಂಬದ ಹಿರಿಯ ವ್ಯಕ್ತಿಗಳು ಅದನ್ನು ಕಿರಿಯರು ಪಾಲಿಸುವುದು ತುಂಬಾ ವಿಶೇಷ. ಶಿಕ್ಷಣ ಮದುವೆ ಸೇರಿದಂತೆ ಹಲವಾರು ಶುಭ ಸಂದರ್ಭದಲ್ಲೂ ಕೂಡ ಹಿರಿಯರು ನೀಡುವ ಮಾರ್ಗ ಸೂಚಿಯನ್ನು ಕಿರಿಯರು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.

ಠಾಣೆ ಮೆಟ್ಟಿಲೇರದ ಕುಟುಂಬ:

ಈ ಕುಟುಂಬದಲ್ಲಿ ಉಂಟಾಗುವ ಸಣ್ಣಪುಟ್ಟ ಜಗಳಗಳನ್ನು ಇಲ್ಲಿಯ ಕುಟುಂಬದ ಮುಖ್ಯಸ್ಥರು ತಮ್ಮ ಮನೆಯಲ್ಲಿಯೇ ಕುಳಿತು ಬಗೆಹರಿಸಿಕೊಳ್ಳುತ್ತಾರೆ. ಇದುವರೆವಿಗೂ ಪೊಲೀಸ್ ಠಾಣೆಗೆ ಯಾವುದೇ ಪ್ರಕರಣಗಳು ದಾಖಲಾಗಿ ನ್ಯಾಯಾಲಯ ತಲುಪಿಲ್ಲ.

ಹಿರಿಯರಿಗೆ ಗೌರವ:

ಈ ಕುಟುಂಬದಲ್ಲಿ ಹಲವಾರು ಉನ್ನತ ಅಧಿಕಾರಿಗಳು ಎಂಜಿನಿಯರ್, ಡಾಕ್ಟರ್ ಸೇರಿದಂತೆ ವಿವಿಧ ಪದವೀಧರರು ಕೂಡ ಇದ್ದಾರೆ. ಅವರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ತೀರ್ಮಾ ನಗಳನ್ನು ಈ ಕುಟುಂಬದ ಹಿರಿಯ ಜೀವವೇ ತೆಗೆದು ಕೊಳ್ಳುತ್ತದೆ. ಉದ್ಯೋಗ ಮತ್ತು ಶಿಕ್ಷಣದ ನಿಮಿತ್ತ ಪಕ್ಕದ ಬೆಂಗಳೂರು, ತುಮಕೂರು, ಚೆನ್ನೈ ಸೇರಿದಂತೆ ವಿದೇಶದಲ್ಲಿ ಜೀವನ ನಡೆಸುತ್ತಿದ್ದರೂ ಮದುವೆ, ಹಬ್ಬ, ಸೇರಿದಂತೆ ಶುಭ ಸಮಾರಂಭದಲ್ಲಿ ಎಲ್ಲರೂ ಕೂಡ ಈ ಮನೆಗೆ ಬಂದು ಸೇರಿ ಎಲ್ಲರೊಟ್ಟಿಗೆ ಸಂತೋಷವನ್ನು ಹಂಚಿಕೊಂಡು ಸಂಭ್ರಮಿಸುತ್ತಾರೆ.

ಪಾಲಾಗದ ಭೂಮಿ:

ಕುಟುಂಬದ ಆಸ್ತಿಯನ್ನು ಇದು ವರೆವಿಗೂ ಪಾಲು ಮಾಡಿಲ್ಲ. ಅವರು ಸ್ವಂತ ಹಣದಲ್ಲಿ ಬೇರೆ ಬೇರೆ ಸ್ಥಳದಲ್ಲಿ ಮನೆ ಹಾಗೂ ಆಸ್ತಿಗಳನ್ನು ಸಂಪಾದನೆ ಮಾಡಿ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದು, ಈ ಆಸ್ತಿಯಲ್ಲಿ ಯಾರೂ ಕೂಡ ಪಾಲು ಬೇಕು ಎಂದು ಕೇಳಿಲ್ಲ. ಇಲ್ಲಿಗೆ ಬಂದಾಗ ಅವರು ಕೂಡ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ಗ್ರಾಮದಲ್ಲಿ ಇರುವ ಕುಟುಂಬಕ್ಕೆ ಸಹಕಾರ ನೀಡುತ್ತಾರೆ.

ತುಮಕೂರು: ಫಲಿತಾಂಶದಿಂದ ಕುಂದಿಲ್ಲ ಎಂದ್ರು ದೇವೇ ಗೌಡ

ಗ್ರಾಮದಲ್ಲಿ ವಾಸವಿರುವ ರಾಜಶೇಖರ್ ಸುಂದರ ಕುಪ್ಪೆ ಮನೆಯನ್ನು ನಿರ್ವಹಣೆ ಮಾಡುತ್ತಾ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರೂ ದಿವಂಗತ ಜಯಣ್ಣ ಅವರ ಪತ್ನಿ ನಂಜಮ್ಮ ಅವರ ಹೆಸರಿನಲ್ಲಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿದೆ. ಈ ಕುಟುಂಬ ಎಲ್ಲರನ್ನೂ ಕೂಡ ಸಮಾನತೆಯಿಂದ ತೆಗೆದುಕೊಂಡು ಮಾದರಿಯಾಗಿದೆ.  

-ಎನ್.ಎಸ್.ವಸಂತ್ ಕುಮಾರ್

Follow Us:
Download App:
  • android
  • ios