Asianet Suvarna News Asianet Suvarna News

ಬೆಂಗಳೂರು ನಿರಾಳ, ಕಲಬುರಗಿ ಕೊತಕೊತ!

ಬೆಂಗಳೂರು ನಿರಾಳ, ಕಲಬುರಗಿ ಕೊತಕೊತ| ಪಾದರಾಯನಪುರ, ಹೊಂಗಸಂದ್ರದ ರಾರ‍ಯಂಡಮ್‌ ಪರೀಕ್ಷೆಯಲ್ಲಿ 1 ಬಿಟ್ಟು ಉಳಿದೆಲ್ಲವು ನೆಗೆಟಿವ್‌| ಸಮುದಾಯಕ್ಕೆ ಸೋಂಕು ಹಬ್ಬಿಲ್ಲವೆಂಬ ಸಮಾಧಾನ| ಕಲಬುರಗಿಯಲ್ಲಿ ಮತ್ತೆ 8 ಕೇಸ್‌, ಆತಂಕಕಾರಿ

When The Bangalore Become Tension Free 8 New Cases In kalaburagi Doubles The Fear
Author
Bangalore, First Published Apr 30, 2020, 7:49 AM IST

ಬೆಂಗಳೂರು(ಏ.30): ಹೊಂಗಸಂದ್ರ ಹಾಗೂ ಪಾದರಾಯನಪುರ ಸೋಂಕು ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣಗಳ ಸ್ಫೋಟದ ಆತಂಕದಲ್ಲಿದ್ದ ರಾಜಧಾನಿ ಬೆಂಗಳೂರು ತಕ್ಕಮಟ್ಟಿಗೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದೆ. ಕಳೆದ ಎರಡು ದಿನಗಳಲ್ಲಿ ಏಕಾಏಕಿ 14 ಸೋಂಕು ಪ್ರಕರಣಗಳನ್ನು ಕಂಡ ಕಲಬುರಗಿ ಇದೀಗ ಕೊರೋನಾತಂಕಕ್ಕೆ ಸಿಲುಕಿದೆ. ಒಟ್ಟು ಸೋಂಕಿತರ ಸಂಖ್ಯೆ 52 ಮುಟ್ಟುವ ಮೂಲಕ ಕಲಬುರಗಿ ಆತಂಕಕ್ಕೆ ಒಳಗಾಗಿದೆ.

ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ವರದಿಯಾಗಬಹುದು ಎಂಬ ಆತಂಕ ರಾಜ್ಯದಲ್ಲಿ ಮನೆ ಮಾಡಿತ್ತು. ಆದರೆ, ಕಳೆದ ನಾಲ್ಕು ದಿನಗಳಲ್ಲಿ ಬೆಂಗಳೂರಿನಲ್ಲಿ ಕೇವಲ ಎರಡು ಪ್ರಕರಣ ಮಾತ್ರ ದೃಢಪಟ್ಟಿವೆ. ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ರಾರ‍ಯಂಡಮ್‌ ಪರೀಕ್ಷೆ ನಡೆಸಿದರೂ ಒಂದೇ ಒಂದು ಪ್ರಕರಣ ಮಾತ್ರ ದೃಢಪಟ್ಟಿದೆ. ಬುಧವಾರವೂ ಬೆಂಗಳೂರಿನಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಈ ಮೂಲಕ ಉದ್ಯಾನನಗರಿ ನಿಟ್ಟಿಸಿರು ಬಿಟ್ಟಿದೆ.

ಆದರೆ, ದೇಶದಲ್ಲೇ ಕೊರೋನಾ ಸೋಂಕಿಗೆ ಮೊದಲ ಬಲಿ ಪಡೆದ ಕಲುಬುರಗಿಯಲ್ಲಿ ಕೊರೋನಾ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಬುಧವಾರ ಎಂಟು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಕಲಬುರಗಿ ಸೋಂಕಿತರ ಸಂಖ್ಯೆ ಅರ್ಧ ಶತಕದ ಗಡಿ ದಾಟಿದ್ದು, 52 ಸೋಂಕು ದಾಖಲಾಗಿದೆ. ಅಲ್ಲದೆ, ಕಳೆದ ವಾರ ಜಿಲ್ಲಾವಾರು ಸೋಂಕಿತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಕಲಬುರಗಿ 4ನೇ ಸ್ಥಾನಕ್ಕೆ ಜಿಗಿದಿದ್ದು, ಸಕ್ರಿಯ ಪ್ರಕರಣಗಳಲ್ಲಿ (40) ವಿಜಯಪುರವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ತಲುಪಿದೆ. ಈ ಬುಧವಾರ ಸೋಂಕು ದೃಢಪಟ್ಟ8 ಪ್ರಕರಣದಲ್ಲಿ ನಾಲ್ಕು ಮಂದಿ ಮಕ್ಕಳೇ ಇರುವುದು ಹಾಗೂ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಏ.25 ರಂದು ಹತ್ತು ಮಂದಿಗೆ ಬೆಂಗಳೂರಿನಲ್ಲಿ ಸೋಂಕು ದೃಢಪಟ್ಟಿತ್ತು. ಬಿಹಾರಿ ಸೋಂಕಿತನಿಂದ ಹೊಂಗಸಂದ್ರದ 30 ಮಂದಿಗೆ ಸೋಂಕು ಹರಡಿತ್ತು. ಅಲ್ಲದೆ ಪಾದರಾಯನಪುರ ವಾರ್ಡ್‌ನಲ್ಲಿ 25 ಮಂದಿಗೆ ಸೋಂಕು ಹರಡಿತ್ತು. ಈ ಎರಡೂ ಕಡೆ ಸಮುದಾಯಕ್ಕೆ ಹರಡಿರುವ ಆತಂಕದ ಹಿನ್ನೆಲೆಯಲ್ಲಿ ಎರಡೂ ವಾರ್ಡ್‌ಗಳಲ್ಲಿ ರಾರ‍ಯಂಡಮ್‌ ಪರೀಕ್ಷೆ ನಡೆಸಲಾಗಿತ್ತು. ಆದರೆ ಪರೀಕ್ಷೆಯಲ್ಲಿ ಒಬ್ಬರಿಗೆ ಮಾತ್ರ ಸೋಂಕು ದೃಢಪಟ್ಟು ಬೆಂಗಳೂರು ನಿರಾಳವಾಗಿದೆ.

Follow Us:
Download App:
  • android
  • ios