ಮಕ್ಕಳ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್!
ಪೋಷಕರೇ ದೇವಸ್ಥಾನಕ್ಕೆ ಮಕ್ಕಳನ್ನು ಕರೆದೊಯ್ಯುವ ಮುನ್ನ ಎಚ್ಚರ! ಮಕ್ಕಳು ನಿಮ್ಮ ಕೈತಪ್ಪಿದರೆ ಮತ್ತೆ ಮೊದಲಿದ್ದಂತೆ ಸಿಗೋದು ಡೌಟು! ದೇವಾಲಯಗಳಲ್ಲಿ ದಿನೇ ದಿನೇ ಹೆಚ್ಚಾಗ್ತಿದ್ದಾರೆ ಖತರ್ನಾಕ್ ಕಳ್ಳಿಯರು! ಸ್ವಲ್ಪ ಯಾಮಾರಿದ್ರು ಮಕ್ಕಳನ್ನು ಹೊತ್ಯೊಯ್ದು ಚಿನ್ನಾಭರಣ ದೋಚ್ತಾರೆ!
ಬೆಂಗಳೂರು(ನ.21): ಬನಶಂಕರಿ ದೇವಾಲಯದಲ್ಲಿ ಮಕ್ಕಳನ್ನ ಎತ್ಯೊಯ್ದು ಚಿನ್ನ ಕದಿಯುತ್ತಿದ್ದ ಖತರ್ನಾಕ್ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಮಾ ಅಲಿಯಾಸ್ ನಾಗಮ್ಮಳನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ತಿಂಗಳಿಂದ ಬನಶಂಕರಿ ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತಿದ್ದ ಉಮಾಳನ್ನು, ಇಬ್ಬರು ಗರ್ಭಿಣಿ ಪೇದೆ ಸೇರಿ 6 ಮಹಿಳಾ ಪೇದೆಗಳ ಸಹಾಯದಿಂದ ಬಂಧಿಸಲಾಗಿದೆ. ದೇವಸ್ಥಾನದ ಸಿಸಿಟಿವಿಯಲ್ಲಿ ಉಮಾಳ ಕಳ್ಳತನ ಸೆರೆಯಾಗಿದ್ದು, ಮಕ್ಕಳನ್ನು ಹೊತ್ತೊಯ್ದು ಚಿನ್ನ ಕದಿಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.