Asianet Suvarna News Asianet Suvarna News

ಮಕ್ಕಳ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್!

ಪೋಷಕರೇ ದೇವಸ್ಥಾನಕ್ಕೆ ಮಕ್ಕಳನ್ನು ಕರೆದೊಯ್ಯುವ ಮುನ್ನ ಎಚ್ಚರ! ಮಕ್ಕಳು ನಿಮ್ಮ ಕೈತಪ್ಪಿದರೆ ಮತ್ತೆ ಮೊದಲಿದ್ದಂತೆ ಸಿಗೋದು ಡೌಟು! ದೇವಾಲಯಗಳಲ್ಲಿ ದಿನೇ ದಿನೇ ಹೆಚ್ಚಾಗ್ತಿದ್ದಾರೆ ಖತರ್ನಾಕ್​ ಕಳ್ಳಿಯರು! ಸ್ವಲ್ಪ ಯಾಮಾರಿದ್ರು ಮಕ್ಕಳನ್ನು ಹೊತ್ಯೊಯ್ದು ಚಿನ್ನಾಭರಣ ದೋಚ್ತಾರೆ! 

ಬೆಂಗಳೂರು(ನ.21): ಬನಶಂಕರಿ ದೇವಾಲಯದಲ್ಲಿ ಮಕ್ಕಳನ್ನ ಎತ್ಯೊಯ್ದು ಚಿನ್ನ ಕದಿಯುತ್ತಿದ್ದ ಖತರ್ನಾಕ್​ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಮಾ ಅಲಿಯಾಸ್‌ ನಾಗಮ್ಮಳನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್​ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ತಿಂಗಳಿಂದ ಬನಶಂಕರಿ ದೇವಸ್ಥಾನದಲ್ಲಿ‌‌ ಕಳ್ಳತನ ಮಾಡುತ್ತಿದ್ದ ಉಮಾಳನ್ನು, ಇಬ್ಬರು ಗರ್ಭಿಣಿ ಪೇದೆ ಸೇರಿ 6 ಮಹಿಳಾ ಪೇದೆಗಳ ಸಹಾಯದಿಂದ ಬಂಧಿಸಲಾಗಿದೆ. ದೇವಸ್ಥಾನದ‌ ಸಿಸಿಟಿವಿಯಲ್ಲಿ ಉಮಾಳ ಕಳ್ಳತನ ಸೆರೆಯಾಗಿದ್ದು, ಮಕ್ಕಳನ್ನು ಹೊತ್ತೊಯ್ದು ಚಿನ್ನ ಕದಿಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Video Top Stories