ನಾಳೆ ಬೆಂಗಳೂರು-ಹುಬ್ಬಳ್ಳಿ ರೈಲು ಸಂಚಾರದಲ್ಲಿ ವ್ಯತ್ಯಯ
ದೇವರಗುಡ್ಡ - ಬ್ಯಾಡಗಿ ಮಾರ್ಗದಲ್ಲಿ ಲೈನ್ ಬ್ಲಾಕ್ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೆಎಸ್ಆರ್ ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ರೈಲನ್ನು ಹರಿಹರದಿಂದ ಹುಬ್ಬಳ್ಳಿವರೆಗೂ ಸ್ಥಗಿತಗೊಳಿಸಲಾಗಿದ್ದು, ಬೆಂಗಳೂರಿನಿಂದ ಹರಿಹರವರೆಗೂ ಮಾತ್ರ ಸಂಚಾರ
ಬೆಂಗಳೂರು(ಅ.29): ರೈಲ್ವೆ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ (ಅ.30) ಜನಶತಾಬ್ದಿ ರೈಲು ಸೇರಿದಂತೆ ಬೆಂಗಳೂರು - ಹುಬ್ಬಳ್ಳಿ ಮಾರ್ಗದ ರೈಲುಗಳ ಓಡಾಟ ಭಾಗಶಃ ವ್ಯತ್ಯಯ ಉಂಟಾಗಲಿದೆ.
ದೇವರಗುಡ್ಡ - ಬ್ಯಾಡಗಿ ಮಾರ್ಗದಲ್ಲಿ ಲೈನ್ ಬ್ಲಾಕ್ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೆಎಸ್ಆರ್ ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ರೈಲನ್ನು ಹರಿಹರದಿಂದ ಹುಬ್ಬಳ್ಳಿವರೆಗೂ ಸ್ಥಗಿತಗೊಳಿಸಲಾಗಿದ್ದು, ಬೆಂಗಳೂರಿನಿಂದ ಹರಿಹರವರೆಗೂ ಮಾತ್ರ ಸಂಚರಿಸಲಿದೆ. ಈ ರೈಲು ಹರಿಹರದಿಂದ ಬೆಂಗಳೂರಿಗೆ ಹಿಂದಿರುಗಲಿದೆ. ಬೆಳಗಾವಿ ಮೈಸೂರು ವಿಶ್ವಮಾನವ ಎಕ್ಸ್ಪ್ರೆಸ್ ಬೆಳಗಾವಿಯಿಂದ ರಾಣೆಬೆನ್ನೂರು ನಿಲ್ದಾಣವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಅರಸಿಕೆರೆ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಅರಸಿಕೆರೆ - ಹಾವೇರಿ ನಿಲ್ದಾಣದ ನಡುವೆ ಸ್ಥಗಿತಗೊಳಿಸಲಾಗಿದೆ. ಈ ಎಲ್ಲಾ ರೈಲುಗಳ ಸಂಚರಿಸುವ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಹುಬ್ಬಳ್ಳಿ ಚಿತ್ರದುರ್ಗ ಎಕ್ಸ್ಪ್ರೆಸ್ ಓಡಾಟ ಪೂರ್ಣಪ್ರಮಾಣದಲ್ಲಿ ರದ್ದಾಗಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ನಿಮ್ಮ ಸೇವೆಯಲ್ಲಿ ಭಾರತೀಯ ರೈಲ್ವೆ.. ಪ್ರಯಾಣಿಕರಿಗೆ ಉಚಿತ ಸ್ನಾನ..!
ಬೆಂಗಳೂರು-ಮೈಸೂರು ರೈಲುಗಳ ವೇಗ ಹೆಚ್ಚಳ
ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಎಂಟು ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳಾಗಿ ಮರು ವಿನ್ಯಾಸಗೊಳಸಲಾಗಿದೆ. ಜತೆಗೆ ಈ ಮಾರ್ಗದ ಹಲವು ರೈಲುಗಳ ವೇಗವನ್ನು ಕೂಡಾ ಹೆಚ್ಚಿಸಲಾಗಿದೆ.
ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನೈಋುತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಮೈಸೂರು ರಾಜ್ಯ ರಾಣಿ ಎಕ್ಸಪ್ರೆಸ್, ಮಾಲ್ಗುಡಿ ಎಕ್ಸ್ಪ್ರೆಸ್, ಮೈಸೂರು-ಮೈಲಾಡುತುರೈ ಎಕ್ಸ್ಪ್ರೆಸ್, ಮೈಸೂರು ಸಾಯಿ ನಗರ ಶಿರಡಿ ಎಕ್ಸ್ಪ್ರೆಸ್ ಸೇರಿ ಎಂಟು ಎಕ್ಸ್ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳಾಗಿ ಮರು ವಿನ್ಯಾಸಗೊಸಲಾಗಿದೆ.
ಜತೆಗೆ ಹೌರಾ-ಮೈಸೂರು ಸಾಪ್ತಾಹಿಕ ಸೂಪರ್ಫಾಸ್ವ್ ಎಕ್ಸ್ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಸೂಪರ್ಫಾಸ್ವ್ ಎಕ್ಸ್ಪ್ರೆಸ್, ಹುಬ್ಬಳ್ಳಿ-ಮೈಸೂರು ಎಕ್ಸ್ಪ್ರೆಸ್, ಕೊಚುವೇಲಿ-ಮೈಸೂರು ಎಕ್ಸ್ಪ್ರೆಸ್, ಅಜ್ಮಿರ್ -ಮೈಸೂರು ಪಾಕ್ಷಿಕ ಎಕ್ಸ್ಪ್ರೆಸ್, ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್, ಚಾಮರಾಜ ನಗರ-ತುಮಕೂರು ದೈನಂದಿನ ಪ್ಯಾಸೆಂಜರ್, ಮೈಸೂರು ಯಶವಂತಪುರ ಎಕ್ಸ್ಪ್ರೆಸ್ಗಳ ವೇಗ ಹೆಚ್ಚಸಲಾಗಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.