ಧಾರವಾಡ ಕಟ್ಟಡ ದುರಂತ ಮಾಸುವ ಮುನ್ನ ಮತ್ತೊಂದು ಅವಘಢ| ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ| ಪಕ್ಕದ ಮನೆ ಮೇಲೆ ಕುಸಿದು ಬಿದ್ದ ಕಟ್ಟಡದ ಗೋಢೆ| ನಗರದ ಕೇಶ್ವಾಪೂರ ಬಳಿ ಸಂಭವಿಸಿದ ಅವಘಢ| ಮನೆಯಲ್ಲಿ ಯಾರೂ ಇರದ ಕಾರಣ ತಪ್ಪಿದ ಭಾರೀ ಅನಾಹುತ|

ಹುಬ್ಬಳ್ಳಿ(ಮಾ.26): ಧಾರವಾಡ ಕಟ್ಟಡ ದುರಂತದ ಬೆನ್ನಲ್ಲೇ, ಹುಬ್ಬಳ್ಳಿಯಲ್ಲೂ ನಿರ್ಮಾಣ ಹಂತದ ಕಟ್ಟಡದ ಗೋಡೆಯೊಂದು ಕುಸಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಕೇಶ್ವಾಪೂರ ಬಳಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಪಕ್ಕದ ಮನೆಯ ಮೇಲೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಘಟನೆ ನಡೆದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಇಲ್ಲಿನ ಮೊಹಮ್ಮದ್ ಅಲಿ ಮಕಾಂದಾರ್ ಎಂಬುವವರಿಗೆ ಸೇರಿದ ಮನೆ ಮೇಲೆ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದಿದೆ. ಘಟನೆಗೆ ಬಿಲ್ಡರ್ ರಾಹು ಹಿರೇಮಠ ಅವರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.