Asianet Suvarna News Asianet Suvarna News

ಮಂಡ್ಯ ಬಸ್​ ದುರಂತ: ಸಾವು ಗೆದ್ದು ಬಂದ ಬಾಲಕ ಬಿಚ್ಚಿಟ್ಟ ಭಯಾನಕ ಸತ್ಯ

ಮಂಡ್ಯದಲ್ಲಿ ಘನಘೋರ ಬಸ್ ದುರಂತದಲ್ಲಿ ಇಡೀ ಬಸ್ ಜಲಸಮಾಧಿಯಾಗಿದೆ. ಈ ದುರ್ಘಟನೆಯಲ್ಲಿ ಒಬ್ಬ ಬಾಲಕ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿತ್ತು. ಆದ್ರೆ ಒಬ್ಬರಲ್ಲ, ಇಬ್ಬರು ಎಂದು ತಿಳಿದುಬಂದಿದ್ದು, ಸಾವು ಗೆದ್ದ ಬಂದ  ಬಾಲಕ​ ಬಿಚ್ಚಿಟ್ಟ ಭಯಾನಕ ಸತ್ಯವಿದು.

Two Boys escapes from Mandya bus accident
Author
Bengaluru, First Published Nov 24, 2018, 2:55 PM IST

ಮಂಡ್ಯ, [ನ.24]: ಇಂದು [ಶನಿವಾರ] ಮಂಡ್ಯದಲ್ಲಿ ಘನಘೋರ ದುರಂತವೊಂದು ನಡೆದುಹೋಗಿದೆ. ಮಂಡ್ಯದ ಕಣಗಾನಮರಡಿ ಬಳಿ ಇರುವ ವಿಸಿ ನಾಲೆಗೆ ಬಸ್​ ಉರುಳಿ ಸುಮಾರು ಈಗಾಗಲೇ 23 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. 

ಈ ಘಟನೆಯಲ್ಲಿ  7ನೇ ತರಗತಿ  ವಿದ್ಯಾರ್ಥಿ ರೋಹಿತ್ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿತ್ತು. ಆದ್ರೆ ಈ ದುರಂತದಲ್ಲಿ ಬದುಕಿ ಬಂದಿದ್ದು ಒಬ್ಬರಲ್ಲ, ಇಬ್ಬರು ಎಂದು ತಿಳಿದುಬಂದಿದೆ. ರೋಹಿತ್ ಜೊತೆಗೆ ಗಿರೀಶ್​ ಎನ್ನುವ ಬಾಲಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಸಾವು!

ಇನ್ನು ಸಾವನ್ನ ಗೆದ್ದು ಬಂದ ಗಿರೀಶ್​  ಘಟನೆ ಬಗ್ಗೆ ವಿವರಿಸಿದ್ದು ಹೀಗೆ.

 ಬಸ್​​ನಲ್ಲಿ ನಾನು ಹಿಂದೆ ಕುಳಿತಿದ್ದೆ. ಬಸ್​​ ನಾಲೆಗೆ ಉರುಳಿದ ನಂತರ ಒಳಗೆ ನೀರು ನುಗ್ಗಲು ಶುರುವಾಯ್ತು. ಗಾಬರಿಯಲ್ಲಿ ನಾನು ಕಿಟಕಿ ಗ್ಲಾಸ್​​ ಒಡೆದು ಹೊರಬಂದೆ. 

ಬಸ್​​ನಲ್ಲಿ ಇದ್ದವರೆಲ್ಲರೂ ಕಿರುಚಾಡುತ್ತಿದ್ದರು. ಈ ವೇಳೆ ಮತ್ತೊಬ್ಬ ಹುಡುಗ ಕೂಡ ಮೇಲೆ ಬರುತ್ತಿದ್ದ. ಅವನನ್ನ ಮೇಲೆತ್ತಿ,  ಈಜಿಕೊಂಡು ದಡಕ್ಕೆ ಬಂದೆವು. ಕೂಗಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಜನ ಓಡಿಬಂದರು ಎಂದು ಗಿರೀಶ್ ತಿಳಿಸಿದ್ದಾನೆ.

Follow Us:
Download App:
  • android
  • ios