ರಾಜ್ಯ ಸರ್ಕಾರದಿಂದ 36 ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ
ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 36 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಬೆಂಗಳೂರು : ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 36 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ತವರು ಜಿಲ್ಲೆಯ ಹಾಸನದ ಸಕಲೇಶಪುರಕ್ಕೆ ಹಿಂದೆ ವರ್ಗಾವಣೆ ಮಾಡಿದ್ದನ್ನು ತಡೆದು ಇದೀಗ ಎಸ್.ಎಚ್.ವಸಂತ್ ಎಂಬುವರನ್ನು ಸಕಲೇಶಪುರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಪಟ್ಟಿ: ವೀರೇಂದ್ರ ಪ್ರಸಾದ್- ಬ್ಯಾಟರಾಯನಪುರ, ಎಂ.ಬಿ.ರಾಮಕೃಷ್ಣ ರೆಡ್ಡಿ- ಯಲಹಂಕ, ಧರ್ಮಪ್ಪ- ಪೀಣ್ಯ ಸಂಚಾರ ಠಾಣೆ, ಸಿರಾಜುದ್ದೀನ್- ಹೈಗ್ರೌಂಡ್ಸ್, ಅನಿಲ್ ಕುಮಾರ್- ನೆಲಮಂಗಲ ವೃತ್ತ, ಎಚ್.ವಿ.ಸುದರ್ಶನ್ - ಚಿಕ್ಕಬಳ್ಳಾಪುರ ವೃತ್ತ, ಬಿ.ಜಿ.ಕುಮಾರ್- ವಿಜಯನಗರ (ಮೈಸೂರು ನಗರ), ಪ್ರಸನ್ನ ಕುಮಾರ್- ದೇವರಾಜ ಠಾಣೆ (ಮೈಸೂರು), ಮಹೇಶ್ ಪ್ರಸಾದ್- ಕಾಪು ವೃತ್ತ, ಅನೂಪ್ ಮಾಡಪ್ಪ.ಪಿ- ಮಡಿಕೇರಿ ಟೌನ್ ವೃತ್ತ, ಪ್ರಶಾಂತ್ ಎಸ್.ನಾಯಕ್-ಧಾರವಾಡ ಸಂಚಾರ, ಲೋಕೇಶ್-ಬೇಲೂರು ವೃತ್ತ (ಹಾಸನ), ಸಂದೀಪ್ ಸಿಂಗ್ ಪಿ.ಮುರುಗೋಡ- ಹೆಸ್ಕಾಂ (ಚಿಕ್ಕೋಡಿ), ಜಿ.ಕೆ.ಮಧುಸೂದನ್ - ತುಮಕೂರು ಗ್ರಾಮಾಂತರ ವೃತ್ತ, ಕೆ.ಎಂ.ಯೋಗೇಶ್- ಭದ್ರಾವತಿ ವೃತ್ತ (ಶಿವಮೊಗ್ಗ), ಧೀರಜ್ ಬಿ.ಶಿಂಧೆ- ಖಡೆ ಬಜಾರ್ (ಬೆಳಗಾವಿ ನಗರ), ಸಂಜೀವ್ ಎಸ್.ಬಳಿಗಾರ್- ಹುನಗುಂದ (ಬಾಗಲಕೋಟೆ), ಚಿದಾನಂದ- ಬ್ಯಾಡಗಿ ವೃತ್ತ (ಹಾವೇರಿ), ಮಲ್ಲಯ್ಯ ಜಿ.ಮಠಪತಿ- ಹೆಸ್ಕಾಂ (ವಿಜಯಪುರ), ಬಿ.ಎಸ್.ಲೋಕಾಪುರ್- ಹಳಿಯಾಳ ವೃತ್ತ (ಉತ್ತರ ಕನ್ನಡ), ರಮೇಶ್ ಎಸ್.ಹೂಗಾರ್- ಜೋಯಿಡಾ ವೃತ್ತ (ಉತ್ತರ ಕನ್ನಡ), ಎನ್.ಜಯಕುಮಾರ್- ಮೈಸೂರು ರೈಲ್ವೆ, ಸುರೇಶ್ ಸಗರಿ- ರಾಣೆಬೆನ್ನೂರು (ಹಾವೇರಿ), ರಮೇಶ್ ಚಂದ್ರಪ್ಪ ಮೇಟಿ- ರೋಜಾ (ಕಲ್ಬುರ್ಗಿ), ನೇಮಿರಾಜ್- ಮಂಡ್ಯ ಗ್ರಾಮಾಂತರ ವೃತ್ತ, ರಾಘವೇಂದ್ರ- ಕಲ್ಬುರ್ಗಿ ಗ್ರಾಮಾಂತರ ವೃತ್ತ, ಮಹಾಂತೇಶ್ ಬಿ.ಪಾಟೀಲ್- ಅಫ್ಜಲ್ಪುರ ವೃತ್ತ (ಕಲ್ಬುರ್ಗಿ), ಮಹಾದೇವಯ್ಯ- ಚೆಸ್ಕಾಂ (ಚಾಮರಾಜನಗರ) ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.