Asianet Suvarna News Asianet Suvarna News

ಅಖಿಲೇಶ್‌ ವಿರುದ್ಧ ಸಂಸದ ತೇಜಸ್ಚಿ ಸೂಯ್ ಕಿಡಿ

ಸಾರ್ವ​ಜ​ನಿ​ಕ​ರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಬೇಜವಾ​ಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ | ಅಖಿಲೇಶ್‌ ಯಾದವ್‌ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿ

Tejasvi Surya slams Akhilesh Yadav for his statement over corona vaccination dpl
Author
Bangalore, First Published Jan 6, 2021, 10:15 AM IST

ಬೆಂಗಳೂರು(ಜ.06): ಕೋವಿಡ್‌ ಲಸಿಕೆಗೆ ಬಿಜೆಪಿ ಲಸಿಕೆ ಎಂದು ಬೇಜವಾ​ಬ್ದಾರಿ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್‌ ಲಸಿಕೆ ವಿತರಣೆ ಕುರಿತ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಂಗಳವಾರ ಪೂರ್ವ ಸಿದ್ಧತೆ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಲಸಿಕೆ ಬರು​ವು​ದ​ರಿಂದ ಲಕ್ಷಾಂತರ ಜನರ ಜೀವ ಉಳಿ​ಯ​ಲಿದೆ. ಹಲವು ಹಂತದ ಸಂಶೋ​ಧ​ನೆ​ಗಳ ನಂತ​ರ​ವಷ್ಟೇ ಲಸಿಕೆ ಮಾರು​ಕ​ಟ್ಟೆಗೆ ಮುಕ್ತ​ವಾ​ಗ​ಲಿದೆ.

ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಬಗ್ಗೆ ಮಾಹಿತಿ ಪಡೆದ ಸಂಸದ ತೇಜಸ್ವಿ ಸೂರ್ಯ

ಆದರೆ, ಕೋವಿಡ್‌ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಹೇಳು​ವುದು ಹಾಗೂ ಲಸಿಕೆಯ ಬಗ್ಗೆ ಸಾರ್ವ​ಜ​ನಿ​ಕ​ರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಬೇಜವಾ​ಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಉತ್ತರ ಪ್ರದೇ​ಶ ರಾಜ​ಕಾ​ರ​ಣಿ ಅಖಿಲೇಶ್‌ ಯಾದವ್‌ ಸೇರಿದಂತೆ ಮತ್ತಿತರರು ಈ ರೀತಿ ಮಾತನಾಡಿದ್ದಾರೆ. ಆದರೆ, ಈ ವಿಚಾರದಲ್ಲಿ ರಾಜ್ಯದ ಯಾವ ಪಕ್ಷದ ನಾಯಕರು ಹಗು​ರ​ವಾಗಿ ಮಾತ​ನಾ​ಡಿಲ್ಲ ಎಂದರು.

ಲಸಿಕೆ ತೆಗೆದು​ಕೊ​ಳ್ಳು​ವು​ದ​ರಿಂದ ನಿಶಕ್ತಿ ಉಂಟಾಗಲಿದೆ, ಮಕ್ಕಳಾಗುವುದಿಲ್ಲ ಎಂದು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ, ಲಸಿಕೆಯಿಂದ ಯಾವುದೇ ಸಮಸ್ಯೆ ಆಗು​ವು​ದಿಲ್ಲ ಎಂದು ಭರವಸೆ ನೀಡಿದರು.

Follow Us:
Download App:
  • android
  • ios