ಭಾರತ ಪಾಕಿಸ್ತಾನ ಸಂಘರ್ಷದಲ್ಲಿ ಕದನ ವಿರಾಮ ನಿಮ್ಮಿಂದ ಆಯ್ತಾ ಬಹಳ ಸಂತೋಷ. ಆದರೆ ಅದನ್ನ ಡೊನಾಲ್ಡ್ ನನ್ನಿಂದ ಆಗಿದೆ ಅಂತಾ ಹೇಳ್ತಾರೆ. ಅವರ ಹೇಳಿಕೆಗೂ ನಿಮ್ಮ ಹೇಳಿಕೆಗೂ ವ್ಯತ್ಯಾಸ ಏಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.

ಬೆಂಗಳೂರು (ಮೇ.18): ಭಾರತ ಪಾಕಿಸ್ತಾನ ಸಂಘರ್ಷದಲ್ಲಿ ಕದನ ವಿರಾಮ ನಿಮ್ಮಿಂದ ಆಯ್ತಾ ಬಹಳ ಸಂತೋಷ. ಆದರೆ ಅದನ್ನ ಡೊನಾಲ್ಡ್ ನನ್ನಿಂದ ಆಗಿದೆ ಅಂತಾ ಹೇಳ್ತಾರೆ. ಅವರ ಹೇಳಿಕೆಗೂ ನಿಮ್ಮ ಹೇಳಿಕೆಗೂ ವ್ಯತ್ಯಾಸ ಏಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.

Add Asianetnews Kannada as a Preferred SourcegooglePreferred

ಇಂದು ಸದಾಶಿವನಗರದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಆಪರೇಷನ್ ಸಿಂದೂರ್ ಮತ್ತು ಭಾರತ-ಪಾಕಿಸ್ತಾನ ಕದನ ವಿರಾಮದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ

ಕದನ ವಿರಾಮ ಘೋಷಿಸಲು ಟ್ರಂಪ್ ಯಾರು?
ಬಿಜೆಪಿ ನಾಯಕರು, ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಿದವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ನಿರ್ಧಾರಗಳ ಬಗ್ಗೆ ಸ್ಪಷ್ಟ ಪ್ರಶ್ನೆಗಳನ್ನು ಎತ್ತಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ನಿರ್ಧಾರದಲ್ಲಿ ತಾವು ಕೇಂದ್ರ ಸರ್ಕಾರದ ಜೊತೆ ಇದ್ದೇವೆ ಎಂದು ಖರ್ಗೆ ಸ್ಪಷ್ಟಪಡಿಸಿದರು. ಆದರೆ, ಕದನ ವಿರಾಮದ ಘೋಷಣೆಯನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾಕೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಭಾರತದ ವಿದೇಶಾಂಗ ನೀತಿಯನ್ನು ನಿರ್ಧರಿಸುವವರು ಪ್ರಧಾನಿ ನರೇಂದ್ರ ಮೋದಿಯವರಾ, ಇಲ್ಲವೇ ಟ್ರಂಪ್‌ರವರಾ ಎಂದು ಖರ್ಗೆ ಕೇಳಿದರು.

ಇದನ್ನೂ ಓದಿ:  ವಿಶ್ವಗುರು ಮೋದಿಗೆ ಅಮೆರಿಕ, ಚೀನಾ ಬಾಯ್ಕಟ್ ಮಾಡುವ ಧೈರ್ಯ ಇದೆಯಾ? ಸಚಿವ ಖರ್ಗೆ ತೀವ್ರ ವಾಗ್ದಾಳಿ!

ಡೊನಾಲ್ಡ್ ಟ್ರಂಪ್ ಅವರ ಪ್ರೆಸ್ ಸೆಕ್ರೆಟರಿ, ಕದನ ವಿರಾಮದ ಕ್ರೆಡಿಟ್ ಟ್ರಂಪ್‌ಗೆ ಸಿಗುತ್ತಿಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಟ್ರಂಪ್ ತಾವೇ ಏಳನೇ ಬಾರಿ ಕದನ ವಿರಾಮ ಮಾಡಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆಗಳಿಗೆ ಯಾರು ಉತ್ತರ ಕೊಡಬೇಕು? ಬಿಜೆಪಿಯ ವಿಜಯೇಂದ್ರ? ಅಶೋಕ್‌ ಅವರಾ? ಇಲ್ಲವೇ ಪ್ರಧಾನಿ ಮೋದಿಯವರಾ ಎಂದು ಖರ್ಗೆ ಪ್ರಶ್ನಿಸಿದರು. ಆಪರೇಷನ್ ಸಿಂದೂರ್‌ನಲ್ಲಿ ಸೇನಾ ಪಡೆಗಳ ದಾಖಲೆಯ ಬಗ್ಗೆ ಮಾತನಾಡದೆ, ಸೈನಿಕರಿಗೆ ಅಗೌರವ ತೋರುವಂತೆ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಟ್ರಂಪ್ ತೆರಿಗೆಶೂನ್ಯ ಹೇಳಿಕೆಗೆ ಪ್ರಧಾನಿ ಪ್ರತಿಕ್ರಿಯೆ ಏನು?

ಮಧ್ಯಪ್ರದೇಶದ ಸಚಿವರು ಸೋಫಿಯಾ ಕುರೇಶಿಯವರ ಬಗ್ಗೆ ಮಾಡಿರುವ ಹೇಳಿಕೆಯನ್ನು ಉಲ್ಲೇಖಿಸಿ, ಆ ಸಚಿವರನ್ನು ಸಂಪುಟದಿಂದ ಯಾಕೆ ವಜಾಗೊಳಿಸಿಲ್ಲ ಎಂದು ಪ್ರಶ್ನಿಸಿದರು. ವಿದೇಶಾಂಗ ನೀತಿಯ ಬಗ್ಗೆ ಅಮೆರಿಕಾದ ಮಾಜಿ ಅಧ್ಯಕ್ಷರು ಮಾತನಾಡುತ್ತಾರೆ, ಆದರೆ 100 ದೇಶಗಳನ್ನು ಸುತ್ತಿದ ಮೋದಿಯವರಿಂದ ಏನಾಯಿತು ಎಂದು ಖರ್ಗೆ ವ್ಯಂಗ್ಯವಾಡಿದರು. ಟ್ರಂಪ್, ಮೇಕ್ ಇನ್ ಇಂಡಿಯಾ ಮತ್ತು ಆಪಲ್‌ನಂತಹ ಯೋಜನೆಗಳಿಗೆ ತೆರಿಗೆ ಶೂನ್ಯ ಮಾಡಿದ್ದೀರಾ ಎಂದು ಕೇಳುತ್ತಾರೆ, ಆದರೆ ಇದಕ್ಕೆ ಯಾರೂ ಉತ್ತರ ಕೊಟ್ಟಿಲ್ಲ. ಪ್ರಧಾನಿ ಮೋದಿಯವರು ಈ ವಿಷಯಗಳಿಗೆ ಉತ್ತರ ಕೊಡಬೇಕು, ಆದರೆ ಅವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಸರ್ವಪಕ್ಷ ಸಭೆಯಲ್ಲಿ ಎಐಸಿಸಿ ಕೊಟ್ಟ ಹೆಸರಿಲ್ಲ, ಕೇವಲ ಶಶಿ ತರೂರ್‌ರವರ ಹೆಸರಿದೆ ಎಂಬ ವಿಷಯವನ್ನು ಬೆಂಬಲಿಸುವುದಾಗಿ ಖರ್ಗೆ ಹೇಳಿದರು. ಆದರೆ, ಎರಡು ಬಾರಿ ಸರ್ವಪಕ್ಷ ಸಭೆ ಕರೆದರೂ ಬಿಜೆಪಿ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದರು.

ಕದನ ವಿರಾಮಕ್ಕೆ ಭಾರತವೇ ಮೊದಲು ಕೇಳಿದ್ದು?
ಪಾಕಿಸ್ತಾನದ ಪ್ರಧಾನಿಯವರು ಭಾರತದ ಮುಖ್ಯಸ್ಥರು ಕದನ ವಿರಾಮ ಕೇಳಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲಿ, ಬಿಜೆಪಿ ಯಾಕೆ ಹೆದರುತ್ತಿದೆ ಎಂದು ಪ್ರಶ್ನಿಸಿದರು. ಸೈನಿಕರು ಮತ್ತು ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಡುವುದಾಗಿ ಹೇಳಿದ ಖರ್ಗೆ, ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಆದರೆ, ಮೋದಿಯವರು ತಿರಂಗಾ ಯಾತ್ರೆ ಮಾಡುತ್ತಾ ಸೈನಿಕರ ವೇಷದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಮಣಿಪುರಕ್ಕೆ ಯಾಕೆ ಹೋಗಿಲ್ಲ?
 ಮಣಿಪುರಕ್ಕೆ ಮೋದಿಯವರು ಹೋಗಿಲ್ಲ, ಸಂತಾಪವನ್ನೂ ವ್ಯಕ್ತಪಡಿಸಿಲ್ಲ ಎಂದು ಖರ್ಗೆ ಟೀಕಿಸಿದರು. ಇಮೇಜ್ ಡ್ಯಾಮೇಜ್ ಆಗುವ ಕಡೆ ಮೋದಿಯವರು ಹೋಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಎನ್‌ಡಿಎ ಮುಖ್ಯಮಂತ್ರಿಗಳಿಗೆ ಮಾತ್ರ ಬ್ರೀಫಿಂಗ್ ನೀಡಲಾಗುತ್ತದೆ, ಆದರೆ ಪಂಜಾಬ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳಿಗೆ ಯಾಕೆ ಮಾಹಿತಿ ಕೊಡುವುದಿಲ್ಲ ಎಂದು ಖರ್ಗೆ ಕೇಳಿದರು.

 ರಾಷ್ಟ್ರೀಯ ಭದ್ರತೆಗಿಂತ ರಾಜಕೀಯವೇ ಬಿಜೆಪಿಗೆ ಮುಖ್ಯವೇ ಎಂದು ಪ್ರಶ್ನಿಸಿದ ಖರ್ಗೆ, ಈ ಎಲ್ಲ ವಿಷಯಗಳಿಗೆ ಉತ್ತರ ಕೊಡಲು ಸಂಸತ್ತ ಸಭೆ ಕರೆಯಬೇಕು, ಪತ್ರಿಕಾಗೋಷ್ಠಿ ನಡೆಸಬೇಕು. ಆದರೆ ಬಿಜೆಪಿಗೆ ಆ ಸಾಮರ್ಥ್ಯವಿಲ್ಲ ಎಂದು ತೀಕ್ಷ್ಣವಾಗಿ ಟೀಕಿಸಿದರು.