Asianet Suvarna News Asianet Suvarna News

ಕರ್ನಾಟಕದ ಜೊತೆ ಯಾವುದೇ ರಾಜಿ ಇಲ್ಲ: ಗೋವಾ ಸಿಎಂ ಸಾವಂತ್‌

ಮಹದಾಯಿ ವಿಚಾರದಲ್ಲಿ ಕರ್ನಾಟಕದ ಜೊತೆಗೆ ಯಾವುದೇ ರಾಜಿ ಇಲ್ಲ ಎಂದು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ

No Compromise With Karnataka On Mahadayi issue Says Goa CM Savanth snr
Author
Bengaluru, First Published Oct 8, 2020, 7:18 AM IST

ಪಣ​ಜಿ (ಅ.08): ‘ಕರ್ನಾ​ಟ​ಕದ ಜತೆ​ಗಿನ ಮ​ಹ​ದಾಯಿ ವಿಚಾ​ರದಲ್ಲಿ ಗೋವಾ ಯಾವುದೇ ಕಾರ​ಣಕ್ಕೂ ರಾಜಿ ಮಾಡಿ​ಕೊ​ಳ್ಳು​ವುದಿಲ್ಲ’ ಎಂದು ಗೋವಾ ಮುಖ್ಯ​ಮಂತ್ರಿ ಪ್ರಮೋದ್‌ ಸಾವಂತ್‌ ಪುನ​ರು​ಚ್ಚ​ರಿ​ಸಿ​ದ್ದಾ​ರೆ. 

ಬುಧವಾರ ಸುದ್ದಿ​ಗಾರರ ಜತೆ ಮಾತ​ನಾ​ಡಿದ ಅವರು, ‘ಈ ವಿಷಯ​ದಲ್ಲಿ ಸರ್ಕಾರ ಸರಿ​ದಾ​ರಿ​ಯ​ಲ್ಲಿದೆ ಹಾಗೂ ನಿಲುವು ಸ್ಪಷ್ಟ​ವಾ​ಗಿದೆ. ನಮ್ಮ ವಾದ​ದಲ್ಲಿ ಬಲ ಇದೆ. ಕರ್ನಾ​ಟ​ಕದ ವಿರುದ್ಧ ಮಹ​ದಾಯಿ ತಿರುವು ವಿರುದ್ಧ ಸುಪ್ರೀಂ ಕೋರ್ಟ್‌​ನಲ್ಲಿ ನ್ಯಾಯಾಂಗ ನಿಂದನೆ ದಾವೆ ದಾಖ​ಲಿ​ಸಿ​ದ್ದೇವೆ. ಕೋರ್ಟಲ್ಲಿ ಹೋರಾಟ ಮುಂದು​ವ​ರಿ​ಸು​ತ್ತೇ​ವೆ. 

ಮಹದಾಯಿ ವಿವಾದ: ಗೋವಾದಿಂದ ಮತ್ತೆ ಶುರುವಾಯ್ತು ಕಿರಿಕ್

ಈ ವಿಚಾ​ರ​ದಲ್ಲಿ ರಾಜಿ ಇಲ್ಲ’ ಎಂದ​ರು. ‘ಮಹ​ದಾಯಿ ಐತೀ​ರ್ಪನ್ನು ಪ್ರಶ್ನಿಸಿ ಗೋವಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಆದರೂ ಕರ್ನಾ​ಟ​ಕವು ಮಹ​ದಾಯಿ ನದಿಗೆ ತಿರುವು ಕೊಟ್ಟಿ​ದೆ. ಇದು ನ್ಯಾಯಾಂಗ ನಿಂದನೆ’ ಎಂದು ಮಂಗ​ಳ​ವಾರ ಸುಪ್ರೀಂ ಕೋರ್ಟ್‌​ನಲ್ಲಿ ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ದಾವೆ ಹೂಡಿ​ತ್ತು.

Follow Us:
Download App:
  • android
  • ios