ರೈತ ಹೋರಾಟದಲ್ಲಿ ಸದ್ದು ಮಾಡಿದ್ದ ಟೂಲ್ ಕಿಟ್| ಟೂಲ್ ಕಿಟ್ ಪ್ರಕರಣದಲ್ಲಿ ಕನ್ನಡತಿ ಬಂಧನ| ದೆಹಲಿ ಪೊಲೀಸರ ನಡೆ ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್
ಬೆಂಗಳೂru(ಫೆ.16): ಟೂಲ್ಕಿಟ್ ಪ್ರಕರಣ ಸಂಬಂಧ ವಿದ್ಯಾರ್ಥಿನಿ ಹಾಗೂ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ದೆಹಲಿ ಪೊಲಿಸರ ವಿಶೇಷ ತಂಡ ಬಂಧಿಸಿದೆ. ಇದರ ಬೆನ್ನಲ್ಲೇ ದಿಶಾ ಬಂಧನಕ್ಕೆ ಖಂಡನೆ ವ್ಯಕ್ತವಾಗಿತ್ತು. ಸದ್ಯ ಕೆಪಿಸಿಸ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇವರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿ, ಖಂಡಿಸಿದ್ದಾರೆ.
"
ಗ್ರೇಟಾ ಥನ್ಬರ್ಗ್ toolkit ಪ್ರಕರಣ; ನಿಖಿತಾ ವಿರುದ್ಧ ಜಾಮೀನು ರಹಿತ ವಾರೆಂಟ್!
ಈ ಸಂಬಂಧ ಟ್ವೀಟ್ ಮಾಡಿರುವ ಡಿ. ಕೆ. ಶಿವಕುಮಾರ್ ಇದು ಭಾರತದ ಯುವಕರ ನೈತಿಕ ಬಲವನ್ನು ದುರ್ಬಲಗೊಳಿಸುವ ಸೂಚನೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ದಿಶಾ ರವಿ ವಿರುದ್ಧ ಪೊಲೀಸ್ ಕ್ರಮ ಸರಿಯಲ್ಲ, 'ಟೂಲ್ಕಿಟ್' ಪಿತೂರಿಯನ್ನು ಬಳಸುವುದು ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತದೆ. ಯುವತಿಯನ್ನು ಬಂಧಿಸುವ ಮೊದಲ ನ್ಯಾಯಾಲಯವನ್ನು ಏಕೆ ಸಂಪರ್ಕಿಸಬಾರದಿತ್ತು ? ದಿಶಾ ರವಿ ಅವರ ಪರ ಕಾಂಗ್ರೆಸ್ ನಿಲ್ಲಲಿದೆ ಎಂದಿದ್ದಾರೆ.
Arrest of Disha Ravi is an attack to weaken the moral strength of India's Youth and make dissent illegal.
— DK Shivakumar (@DKShivakumar) February 16, 2021
Police action against her, using a concocted 'Toolkit' conspiracy violates legal norms.
Why not approach a competent court before arresting a young woman?#FarmersProtest
ದಿಶಾ ರವಿ ಬಂಧನ : ಬಸವರಾಜು ವಿ.ಶಿವಗಂಗಾ ವಿರೋಧ
ರೈತರ ಹೋರಾಟವನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಮಾನ ಹರಾಜು ಹಾಕಿದ್ದಾರೆಂಬ ಗೂಗಲ್ ಕಿಟ್ ರೂವಾರಿ ಬೆಂಗಳೂರಿನ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಸರಿಯಲ್ಲ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ.ಶಿವಗಂಗಾ ವಿರೋಧಿಸಿದರು.
ಗ್ರೆಟಾ ಥನ್ಬರ್ಗ್ ಟೂಲ್ ಕಿಟ್ ವಿವಾದ: ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಅರೆಸ್ಟ್!
ದಿಶಾ ರವಿ ಅವರನ್ನು ರಹಸ್ಯ ಕಾರ್ಯಾಚರಣೆ ಮೂಲಕ ಬಂಧಿಸಿರುವುದು ಸರಿಯಲ್ಲ. ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಬಗ್ಗೆ ವರದಿಯಾಗಿದೆ. ಇದೀಗ ಥಂಬರ್ಗ್ ಹಂಚಿಕೊಂಡಿದ್ದ ಗೂಗಲ್ ಕಿಟ್ ಅನ್ನು ವೈರಲ್ ಆಗಲು ದಿಶಾ ರವಿ ಕಾರಣಕರ್ತರು ಎನ್ನಲಾಗಿರುವುದು ಸರಿಯಲ್ಲ. ಕೃಷಿ ಕಾಯ್ದೆ ವಿಚಾರವಾಗಿ ಈಗಾಗಲೇ ಭಾರತದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ.
ಈಗಾಗಲೇ ವಿದೇಶದ ಸಾಮಾಜಿಕ ಹೋರಾಟಗಾರರು ಮೋದಿ ಸರ್ಕಾರದ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಈಗ ಮತ್ತೆ ದಿಶಾ ರವಿ ಬಂಧಿಸಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಒಬ್ಬ ಮಹಿಳೆಗೆ ಮಾಡುತ್ತಿರುವ ಅವಮಾನವಾಗಿದ್ದು, ಬಂಧನ ಮಾಡಿರುವುದು ದೇಶದ ಮಹಿಳೆಯರಿಗೆ ಮಾಡುತ್ತಿರುವ ಅವಮಾನವಿದು ಎಂದು ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 16, 2021, 12:31 PM IST