09:13 AM (IST) Aug 01

Karnataka News Live 1st August: Viral Robot - ಈ ರೋಬೋಟ್ ನೋಡೋಕೆ ರಾಕ್ಷಸನ ತರ, ಆದರೆ ಆಪತ್ಬಾಂಧವ, ರಕ್ಷಿಸೋಕೆ ಬಂದ್ರೂ ಜನ ಹೆದರಿ ಸಾಯ್ತಾರೆ!

ಕೊಂಬು, ಚೈನ್‍ಸಾ ಮತ್ತು ನಾಲ್ಕು ಕಾಲುಗಳಿರುವ 'ತ್ರೀಹಾಲ್ವ್ಸ್' ಎಂಬ ರೋಬೋಟ್ ತನ್ನ ಭಯಾನಕ ರೂಪದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಕಾಡು ಕಡಿಯುವಂತಹ ಅಪಾಯಕಾರಿ ಕೆಲಸಗಳಲ್ಲಿ ಮನುಷ್ಯರಿಗೆ ಸಹಾಯ ಮಾಡಲು ಕ್ಯಾಲಿಫೋರ್ನಿಯಾದ 'ಸ್ಯಾಟಿರಸ್' ಕಂಪನಿ ಇದನ್ನು ವಿನ್ಯಾಸಗೊಳಿಸಿದೆ.
Read Full Story
07:26 AM (IST) Aug 01

Karnataka News Live 1st August: Gen-Z ಹೋರಾಟದ ಬೆನ್ನಲ್ಲೇ ಎಚ್ಚೆತ್ತ ಸಿಎಂ: ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಲು ತಾಕೀತು, ಪರಿಶೀಲನೆಗಾಗಿ ರಂಗನಾಥ್‌ ಸಮಿತಿ ರಚನೆ

ಜೆನ್‌ಝೀ ಹೋರಾಟದ ಪರೋಕ್ಷ ಪರಿಣಾಮವೋ ಎಂಬಂತೆ ಕೆಪಿಎಸ್ಸಿ ಹಾಗೂ ಕೆಇಎ ನಡೆಸುವ ನೇಮಕಾತಿ ಪರೀಕ್ಷೆ ಸಮರ್ಪಕತೆ ಪರಿಶೀಲನೆಗಾಗಿ ರಾಜ್ಯ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ.

Read Full Story
07:25 AM (IST) Aug 01

Karnataka News Live 1st August: ನಾಳೆ 3991 ಪೇದೆ ನೇಮಕಾತಿ ಪರೀಕ್ಷೆ: ಮೊದಲ ಬಾರಿಗೆ ಒಎಂಆರ್ ದೊಡ್ಡ ಬದಲಾವಣೆ, ಅಭ್ಯರ್ಥಿಗಳೇ ಈ ವಿಷಯ ತಿಳಿದಿರಲಿ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುತ್ತಿದೆ. ಈ ಬಾರಿ ಹೊಸ ಓಎಂಆರ್ ಸ್ಕ್ಯಾನಿಂಗ್ ವ್ಯವಸ್ಥೆ, ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ನಿಷೇಧದಂತಹ ಬಿಗಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

Read Full Story
07:25 AM (IST) Aug 01

Karnataka News Live 1st August: Ujire: ಉಜಿರೆಯಲ್ಲಿ ರಾಷ್ಟ್ರಪತಿಗಳ ಹೆಸರಲ್ಲಿದೆ 6.20 ಎಕ್ರೆ ಜಮೀನು!

ದಕ್ಷಿಣ ಕನ್ನಡದ ಉಜಿರೆಯಲ್ಲಿ 6.20 ಎಕ್ರೆ ಜಮೀನು ರಾಷ್ಟ್ರಪತಿಗಳ ಹೆಸರಿನಲ್ಲಿರುವುದು ಸರ್ಕಾರದ ದಿಶಾಂಕ್ ಆ್ಯಪ್ ಮೂಲಕ ಬೆಳಕಿಗೆ ಬಂದಿದೆ. ಸರ್ವೇ ನಂಬರ್ 208ರ ಈ ಭೂಮಿಯ ಮಾಲೀಕತ್ವದ ಕುರಿತು ಗೊಂದಲ ಸೃಷ್ಟಿ ಈ ಬಗ್ಗೆ ಕಂದಾಯ ಇಲಾಖೆ ಸ್ಪಷ್ಟನೆ ನೀಡಬೇಕೆಂದು ಎಂಜಿನಿಯರ್ ಜಗದೀಶ್ ಪ್ರಸಾದ್ ಆಗ್ರಹಿಸಿದ್ದಾರೆ.

Read Full Story
07:24 AM (IST) Aug 01

Karnataka News Live 1st August: Siddaramaiah Shopping: ಮಂತ್ರಿ ಮಾಲ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಪಿಂಗ್‌!

ಸಿಎಂ ಆಗಿದ್ದಾಗ ಸದಾ ಬ್ಯುಸಿಯಾಗಿರುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಈಗ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ಗೆ ಆಗಮಿಸಿ ಸಾಮಾನ್ಯರಂತೆ ಶಾಪಿಂಗ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

Read Full Story