10:14 PM (IST) Mar 04

Karnataka News Live 4 March 2026ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ - ಕೊನೆಗೂ ಕಂಡುಬಂತು 'ಕೊಡವ' ಸೊಗಡು!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ಆರತಕ್ಷತೆ ಅದ್ಧೂರಿಯಾಗಿ ನೆರವೇರಿದೆ. ಈ ಸಮಾರಂಭಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿ ಶುಭ ಹಾರೈಸಿದ್ದು, ರಶ್ಮಿಕಾ ಕುಟುಂಬಸ್ಥರು ಕೊಡವ ಶೈಲಿಯ ಸೀರೆಯುಟ್ಟು ಗಮನ ಸೆಳೆದರು. ಟಾಲಿವುಡ್‌ನ ಹಲವು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.
Read Full Story
08:06 PM (IST) Mar 04

Karnataka News Live 4 March 2026Haveri - ಸೇಮ್‌ ಟು ಸೇಮ್‌ ಚೆಲುವಿನ ಚಿತ್ತಾರ; ಉಲ್ಲಾಸದ ಹೂಮಳೆ ಹಾಡುತ್ತಿದ್ದ ಜೋಡಿಗೆ ಕಟುಕನಾದ ಅಪ್ಪ!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ 'ಚೆಲುವಿನ ಚಿತ್ತಾರ' ಸಿನಿಮಾದಂತೆಯೇ ಘಟನೆಯೊಂದು ನಡೆದಿದೆ. ಪೋಷಕರ ವಿರೋಧದ ನಡುವೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸೃಷ್ಟಿ ಮತ್ತು ಮಣಿಕಂಠ ಜೋಡಿಯನ್ನು, ಯುವತಿಯ ಪೋಷಕರೇ ಬಲವಂತವಾಗಿ ಬೇರ್ಪಡಿಸಿದ್ದಾರೆ.

Read Full Story
06:34 PM (IST) Mar 04

Karnataka News Live 4 March 2026ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ! ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಬರ್ತಿದ್ದಂತೆ ಅಲರ್ಟ್

ದಾವಣಗೆರೆ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ.

Read Full Story
06:29 PM (IST) Mar 04

Karnataka News Live 4 March 2026ಪಲ್ಯ ಮಾಡುವಾಗ ಹಾಗಲಕಾಯಿ ಕಹಿ ಬರ್ತಿದೆಯೇ? ಕಹಿ ತೆಗೆಯಲು ಈ ಸಿಂಪಲ್‌ ಟ್ರಿಕ್‌ ಫಾಲೋ ಮಾಡಿ!

ಹಾಗಲಕಾಯಿ ಅಂದಕೂಡಲೇ ಅದರ ಕಹಿಯ ನೆನಪಾಗಿ ಅನೇಕರು ಮುಖ ಹಿಂಡುತ್ತಾರೆ. ಆದರೆ, ಆಯುರ್ವೇದದಲ್ಲಿ 'ರಾಮಬಾಣ' ಎಂದು ಕರೆಸಿಕೊಳ್ಳುವ ಈ ತರಕಾರಿ ಆರೋಗ್ಯದ ಗಣಿಯಾಗಿದೆ. ಹಾಗಲಕಾಯಿಯ ಅದ್ಭುತ ಪ್ರಯೋಜನಗಳು ಮತ್ತು ಅದರ ಕಹಿಯನ್ನು ಹೋಗಲಾಡಿಸುವ 6 ಸರಳ ಸೂತ್ರಗಳು ಇಲ್ಲಿವೆ

Read Full Story
06:21 PM (IST) Mar 04

Karnataka News Live 4 March 2026ಚಂದ್ರಗುತ್ತಿಯಲ್ಲಿ ಕ್ರಿ.ಶ. 1350ರ ಕಾಲಘಟ್ಟದ ವೀರಗಲ್ಲು ಪತ್ತೆ, ಯುದ್ಧ ಗೆದ್ದ ವಿಜಯನಗರ ಕಾಲದ ಯೋಧನ ಬಣ್ಣನೆ!

ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆರಂಭಿಕ ಕಾಲದ ಅಪೂರ್ವ ವೀರಗಲ್ಲು ಶಾಸನ ಪತ್ತೆಯಾಗಿದೆ. ಕ್ರಿ.ಶ. 1350ರ ಈ ಶಾಸನವು, ಆರಗದ ಅರಸರ ವಿರುದ್ಧ ಹೋರಾಡಿ ಮಡಿದ ಸಂಡದ ಹಾಲಪ್ಪ ಎಂಬ ಯೋಧನ ಸ್ಮರಣಾರ್ಥ ಸ್ಥಾಪಿಸಲಾಗಿದೆ. ಈ ಶೋಧನೆಯು ಮಲೆನಾಡಿನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.
Read Full Story
06:10 PM (IST) Mar 04

Karnataka News Live 4 March 2026ವಿದೇಶದಲ್ಲಿದ್ರೂ 'ಇಂಟರ್ನ್ಯಾಷನಲ್ ಜೀಜು' ಮಾಡಿದ್ದೇನು? ನಿಕ್ ಜೊತೆಗಿದ್ರೂ ಕಣ್ಣೀರು ಹಾಕಿದ್ದೇಕೆ ಪ್ರಿಯಾಂಕಾ ಚೋಪ್ರಾ..?

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತನ್ನದೇ ಆದ ಛಾಪು ಮೂಡಿಸಿರುವ 'ದೇಶಿ ಗರ್ಲ್' ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಪಾಪ್ ಸಿಂಗರ್ ನಿಕ್ ಜೋನಸ್ ಜೋಡಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಈ ಜೋಡಿ ಕೇವಲ ಸಿನಿಮಾಗಳಿಗಾಗಿ ಮಾತ್ರವಲ್ಲದೆ ವಿಭಿನ್ನ ವಿಷಯಕ್ಕೂ ಸುದ್ದಿಯಾಗುತ್ತಾರೆ.

Read Full Story
06:05 PM (IST) Mar 04

Karnataka News Live 4 March 2026ಬೀದರ್ - ಚಿಕಿತ್ಸೆ ಸಿಗದೆ ರೋಗಿ ಸಾಯಲು ಯತ್ನ, BRIMS ನಿರ್ದೇಶಕಿ ನೋ ರೆಸ್ಪಾನ್ಸ್, 'ನನಗೂ ಇದಕ್ಕೂ ಸಂಬಂಧಿವಿಲ್ಲ ಎಂದ DHO!

ಬೀದರ್‌ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎಕ್ಸ್‌-ರೇ ಸೌಲಭ್ಯಕ್ಕಾಗಿ ದಿನಗಟ್ಟಲೆ ಕಾಯುವಂತಾದ ಔರಾದ್ ನಿವಾಸಿ ಆನಂದ ಕರಬಾಳೆ ಎಂಬುವವರು, ಚಿಕಿತ್ಸೆ ಸಿಗದೆ ಮನನೊಂದು ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯು ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಯ ಬೇಜವಾಬ್ದಾರಿ ಬಯಲಾಗಿದೆ.

Read Full Story
05:54 PM (IST) Mar 04

Karnataka News Live 4 March 2026ಕಾಡಾನೆ ನಾಡಿಗೆ ಬರದಂತೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ₹12.77 ಕೋಟಿ ಅನುದಾನ ಬಿಡುಗಡೆ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ನಿರಂತರ ಕಾಡಾನೆ ಹಾವಳಿಯನ್ನು ತಡೆಯಲು ರಾಜ್ಯ ಸರ್ಕಾರವು 7.71 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹12.77 ಕೋಟಿ ಅನುದಾನ ಬಿಡುಗಡೆ ಮಾಡಿದೆ. 

Read Full Story
05:54 PM (IST) Mar 04

Karnataka News Live 4 March 2026ಕಿಚ್ಚ ಅಂದ್ರೆ ಏನು? ತಲೆ ಕೆಡಿಸಿಕೊಂಡ ಸುದೀಪ್! ಕಾಲೇಜಲ್ಲೂ ಹುಚ್ಚು ಹಿಡಿಸಿದ ಶಬ್ದಕ್ಕೆ ಕೊನೆಗೂ ಸಿಕ್ತು ಉತ್ತರ

ನಟ ಸುದೀಪ್ ಅವರಿಗೆ 'ಕಿಚ್ಚ' ಎಂಬ ಹೆಸರು ಬಂದಿದ್ದು 2001ರ 'ಹುಚ್ಚ' ಸಿನಿಮಾದಿಂದ. ಈ ಸಿನಿಮಾದಲ್ಲಿ 'ಕಿಚ್ಚ' ಪದದ ಅರ್ಥ ಹುಡುಕುವ ದೃಶ್ಯವಿದ್ದು, ಕೊನೆಗೆ ಜ್ಯೋತಿಷಿಯೊಬ್ಬರು ಕಿಚ್ಚ ಶಬ್ದದ ಅರ್ಥ ವಿವರಿಸುತ್ತಾರೆ. ಈ ಮೂಲಕ ಸುದೀಪ್ ಅವರ ಜನಪ್ರಿಯ ಹೆಸರಿನ ಹಿಂದಿನ ಕಥೆಯನ್ನು ಲೇಖನವು ತಿಳಿಸುತ್ತದೆ.

Read Full Story
05:33 PM (IST) Mar 04

Karnataka News Live 4 March 2026ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ ಟ್ರಾಫಿಕ್ ದಟ್ಟಣೆ ಶಮನಕ್ಕೆ ದಕ್ಷಿಣ ರೈಲ್ವೆ ಮಹತ್ವದ ಹೆಜ್ಜೆ, ಚತುಷ್ಪಥ ರಸ್ತೆ!

ಮಂಗಳೂರಿನ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿನ ತೀವ್ರ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ದಕ್ಷಿಣ ರೈಲ್ವೆ ಅನುಮೋದನೆ ನೀಡಿದೆ. ಸಂಸದ ಬ್ರಿಜೇಶ್ ಚೌಟ ಅವರ ಪ್ರಯತ್ನದ ಫಲವಾಗಿ ಈ ಯೋಜನೆ ಜಾರಿಯಾಗುತ್ತಿದೆ. 

Read Full Story
05:23 PM (IST) Mar 04

Karnataka News Live 4 March 2026ಸಿಎಂ ಬಂದ್ರೂ ಡಿಲೀಟ್​ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್​ ಇರೋನು ಎಂದ Dog Satish

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್, ತಾವು ಮೂತ್ರ ವಿಸರ್ಜನೆ ಮಾಡುವಾಗ ಸುದೀಪ್ ಅವರ ಹಾಡನ್ನು ಬಳಸಿದ ವಿಡಿಯೋದಿಂದ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ತೀವ್ರ ವಿರೋಧ ವ್ಯಕ್ತವಾದರೂ, ಇದು ನನ್ನ ಇಷ್ಟ ಮತ್ತು ವಿಡಿಯೋ ಡಿಲೀಟ್ ಮಾಡುವುದಿಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.
Read Full Story
05:07 PM (IST) Mar 04

Karnataka News Live 4 March 202692 ಲಕ್ಷ ವೇತನ ಝೀರೋ ಭದ್ರತೆ, ಒಂದೇ ದಿನದಲ್ಲಿ ಶೇ.40ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬೆಂಗಳೂರು ಐಟಿ ಕಂಪೆನಿ!

ಬೆಂಗಳೂರು ಮೂಲದ ಐಟಿ ಸ್ಟಾರ್ಟ್‌ಅಪ್ ಒಂದೇ ದಿನದಲ್ಲಿ ತನ್ನ 40% ಉದ್ಯೋಗಿಗಳನ್ನು ವಜಾಗೊಳಿಸಿದೆ. ವಾರ್ಷಿಕ ₹92 ಲಕ್ಷ ಸಂಬಳ ಪಡೆಯುತ್ತಿದ್ದ ಉದ್ಯೋಗಿ ಸೇರಿದಂತೆ ಹಲವರು ಕೆಲಸ ಕಳೆದುಕೊಂಡಿದ್ದು, ಈ ಘಟನೆಯು ಭಾರತದ ತಂತ್ರಜ್ಞಾನ ವಲಯದಲ್ಲಿನ ಹೆಚ್ಚುತ್ತಿರುವ ಉದ್ಯೋಗ ಅನಿಶ್ಚಿತತೆಯನ್ನು ತೋರಿಸುತ್ತದೆ. 

Read Full Story
04:52 PM (IST) Mar 04

Karnataka News Live 4 March 2026ಮುನಿಸಿಕೊಂಡ ಗ್ರಾಹಕರ ಸೆಳೆಯಲು ಓಲಾ ಎಲೆಕ್ಟ್ರಿಕ್ ಹೋಳಿ ಆಫರ್, ಕೈಗೆಟುಕುವ ದರದಲ್ಲಿ ಇವಿ ಬೈಕ್

ಮುನಿಸಿಕೊಂಡ ಗ್ರಾಹಕರ ಸೆಳೆಯಲು ಓಲಾ ಎಲೆಕ್ಟ್ರಿಕ್ ಹೋಳಿ ಆಫರ್, ಕೈಗೆಟುಕುವ ದರದಲ್ಲಿ ಇವಿ ಬೈಕ್, ಹಬ್ಬದ ಆಫರ್ ಮೂಲಕ ಸ್ಕೂಟರ್ ಖರೀದಿಸಲು ಓಲಾ ವಿಶೇಷ ಆಫರ್ ನೀಡಿದೆ. ಟೀಕೆ, ದೂರುಗಳಿಂದ ಸೊರಗಿದ್ದ ಓಲಾ ಹೊಸ ಆಫರ್ ನೀಡಿದೆ.

Read Full Story
04:28 PM (IST) Mar 04

Karnataka News Live 4 March 2026ಗೂಗಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಟೆಕ್ಕಿಯ ಪಾಠ, ಈ ಹನ್ನೆರಡು ಸೂತ್ರಗಳು ಇದ್ದರೆ ಮಾತ್ರ ಅರ್ಹ!

ಬೆಂಗಳೂರು ಮೂಲದ ಟೆಕ್ಕಿ ದೀಕ್ಷಾ ಅಗರ್ವಾಲ್, ಗೂಗಲ್‌ನಲ್ಲಿ ತಮ್ಮ ಮೊದಲ ವರ್ಷದ ಸೇವೆಯಲ್ಲಿ ಕಲಿತ ಮಹತ್ವದ ಪಾಠಗಳನ್ನು ಹಂಚಿಕೊಂಡಿದ್ದಾರೆ. ಸರಳ ಕೋಡಿಂಗ್, ಗುಣಮಟ್ಟದ ಪರೀಕ್ಷೆ, ದೋಷಾರೋಪಣೆಗಿಂತ ಪರಿಹಾರಕ್ಕೆ ಆದ್ಯತೆ ನೀಡುವ ಸಂಸ್ಕೃತಿವಿವರಿಸಿದ್ದಾರೆ.

Read Full Story
04:16 PM (IST) Mar 04

Karnataka News Live 4 March 2026​KERC new power rates - ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್ - ಕೈಗಾರಿಕಾ ಮತ್ತು ವಾಣಿಜ್ಯ ವಿದ್ಯುತ್ ದರ ಭಾರಿ ಏರಿಕೆ!

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಪರಿಷ್ಕರಿಸಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಈ ನಿರ್ಧಾರದಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ದರ ಏರಿಕೆಯಾಗಿದ್ದು, ಗೃಹ ಬಳಕೆದಾರರ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

Read Full Story
04:14 PM (IST) Mar 04

Karnataka News Live 4 March 2026ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಇತಿಹಾಸ, ಭ್ರಷ್ಟಾಚಾರವಲ್ಲ-ಜ್ಯೋತಿ!

ಇತ್ತೀಚಿನ ಕೆಪಿಎಸ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದೇ ಪರೀಕ್ಷಾ ಕೊಠಡಿಯಿಂದ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ತಿಳಿಸಿದ್ದಾರೆ.

Read Full Story
04:12 PM (IST) Mar 04

Karnataka News Live 4 March 2026ಅಡ್ಡಾದಿಡ್ಡಿ ಕಾರು ಚಾಲನೆ - ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ - ಕೈಗೆ ಸಿಕ್ಕ ಕಾರು ಚಾಲಕನಿಗೆ ಕೈರುಚಿ ತೋರಿಸಿದ ಜನ

ಬಳ್ಳಾರಿಯ ಎಎಸ್ಎಂ ಮಹಿಳಾ ಕಾಲೇಜು ಬಳಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಚಾಲಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಕಾರು ಪಲ್ಟಿಯಾಗಿ ಜಖಂಗೊಂಡಿದೆ. 

Read Full Story
03:46 PM (IST) Mar 04

Karnataka News Live 4 March 2026ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಆದರೆ.. - ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ, ಆದರೆ ಕಾನೂನಾತ್ಮಕ ತೊಡಕುಗಳಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ, ಬಿಜೆಪಿ ವಿರುದ್ಧದ ಆರೋಪ, ದಲಿತ ನಾಯಕರ ಸರಣಿ ಸಭೆ ಕುರಿತು ಅವರು ಮಾಹಿತಿ, ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ನಿಭಾಯಿಸುವುದಾಗಿ ತಿಳಿಸಿದ್ದಾರೆ.

Read Full Story
03:42 PM (IST) Mar 04

Karnataka News Live 4 March 2026ಕೋರ್ಟ್ ಸಮಯ ಹಾಳು ಮಾಡುತ್ತಿರೋ ಡಿ ಗ್ಯಾಂಗ್; ದಾಸನ ಬೇಡಿಕೆಗೆ SPP ಗುನ್ನ, ಮುಗಿಯಲ್ಲ ಗ್ರಹಣ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಪ್ರತಿದಿನದ ವಿಚಾರಣೆ, ಮನೆಯೂಟ ಸೇರಿದಂತೆ ದರ್ಶನ್ ಪರ ವಕೀಲರ ಹಲವು ಮನವಿಗಳಿಗೆ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Read Full Story
03:38 PM (IST) Mar 04

Karnataka News Live 4 March 2026ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿರುವರಿಗೆ, ಪಿಜಿ ನಡೆಸುವ ಮಾಲೀಕರಿಗೆ ಜಿಬಿಎ ವಾರ್ನಿಂಗ್, ಈ ನಿಯಮ ಪಾಲಿಸಲೇಬೇಕು

2 ಮಹಡಿಗಿಂತ ಹೆಚ್ಚಿನ ಕಟ್ಟಡಗಳು ಮತ್ತು ಪಿಜಿಗಳಲ್ಲಿ ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಡಬ್ಬಿಗಳನ್ನು ಕಡ್ಡಾಯಗೊಳಿಸಲು ಜಿಬಿಎ ಮುಂದಾಗಿದೆ. ಸಾರ್ವಜನಿಕ ಸಭೆಯಲ್ಲಿ ಈ ವಿಷಯ ತಿಳಿಸಿದ ಮುಖ್ಯ ಆಯುಕ್ತ ಮಹೇಶ್ವರ ರಾವ್, ಕಟ್ಟಡ ನಿಯಮ ಉಲ್ಲಂಘನೆ ವಿರುದ್ಧವೂ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

Read Full Story