08:22 AM (IST) Aug 04

Karnataka News Live 4 August 2026ಪೀಣ್ಯ ಮೇಲ್ಸೇತುವೆ ಮೇಲೆ ರಾತ್ರಿ ಸಂಚರಿಸುವ ಪ್ರಯಾಣಿಕರೇ ಗಮನಿಸಿ; 10 ದಿನ ಫ್ಲೈಓವರ್ ಬಂದ್, ಈ ರಸ್ತೆ ಬಳಸಿ

ಡಾಂಬರೀಕರಣ ಕಾಮಗಾರಿಯ ಕಾರಣದಿಂದಾಗಿ ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಮೇಲೆ ಆಗಸ್ಟ್ 3 ರಿಂದ 12 ರವರೆಗೆ ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ತುಮಕೂರು ಕಡೆಗೆ ಹೋಗುವ ವಾಹನಗಳಿಗೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಸಂಚಾರ ನಿರ್ಬಂಧವಿದ್ದು, ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.
Read Full Story
07:57 AM (IST) Aug 04

Karnataka News Live 4 August 2026Cabinet expansion - ಸಂಪುಟ ವಿಸ್ತರಣೆಯ ಕೊನೆ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡರ ಹೆಸರು ಕೈಬಿಟ್ಟಿದ್ದೇಕೆ?

ಸಂಪುಟ ವಿಸ್ತರಣೆಯ ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೈಬಿಡಲಾಗಿದೆ. ಸಿದ್ದರಾಮಯ್ಯನವರ ಆಕ್ಷೇಪದಿಂದಾಗಿ ಈ ಬದಲಾವಣೆಯಾಗಿದ್ದು, ಇದೀಗ ಖಾಲಿ ಇರುವ ಒಂದು ಸ್ಥಾನವನ್ನು ಕುರುಬ ಅಥವಾ ಮಹಿಳಾ ಕೋಟಾದಡಿ ತುಂಬುವುದು ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ.
Read Full Story
07:44 AM (IST) Aug 04

Karnataka News Live 4 August 2026ಮಂಗಳೂರು-ಬೆಂಗಳೂರು ರೈಲು - ಕೊನೆಗೂ ಹಳಿಗೆ ಮರಳಿದ ಸಂಚಾರ, ತಾತ್ಕಾಲಿಕ ವೇಗದ ನಿರ್ಬಂಧ

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ಮಣ್ಣು ಕುಸಿತದಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರವು, ತೆರವು ಕಾರ್ಯಾಚರಣೆ ಪೂರ್ಣಗೊಂಡ ನಂತರ ಪುನರಾರಂಭಗೊಂಡಿದೆ. ಸುರಕ್ಷತೆಗಾಗಿ ತಾತ್ಕಾಲಿಕ ವೇಗ ನಿರ್ಬಂಧ ವಿಧಿಸಲಾಗಿದೆ. ಇದೇ ವೇಳೆ, ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
Read Full Story
07:27 AM (IST) Aug 04

Karnataka News Live 4 August 2026SWRಯಿಂದ ಜುಲೈನಲ್ಲಿ ದಾಖಲೆ! 4.69 ಮಿಲಿಯನ್ ಟನ್ ಸರಕು ಸಾಗಣೆಗೆ ಬಂದ ಆದಾಯ ಎಷ್ಟು?

ನೈಋತ್ಯ ರೈಲ್ವೆಯು ಜುಲೈ ತಿಂಗಳಲ್ಲಿ 4.69 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಅವಧಿಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಸೇವೆಯಿಂದ ಒಟ್ಟು ₹793.31 ಕೋಟಿ ಆದಾಯ ಗಳಿಸಿದೆ.

Read Full Story
07:16 AM (IST) Aug 04

Karnataka News Live 4 August 2026ಮುಗಿಯದ ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರ; ಪ್ರತಿನಿತ್ಯ ತೊಂದರೆ

ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ಮಳೆಯಿಂದ ಸೋಮನಹಳ್ಳಿ ರಸ್ತೆ ಬಂದ್ ಆಗಿದ್ದು, ರಸ್ತೆ ಪಕ್ಕದ ನಿವಾಸಿಗಳು ಅಪಘಾತ, ಆರೋಗ್ಯ ಸಮಸ್ಯೆ ಹಾಗೂ ಪ್ರವಾಹದ ಭೀತಿಯಲ್ಲಿದ್ದಾರೆ.

Read Full Story
07:05 AM (IST) Aug 04

Karnataka News Live 4 August 2026Bengaluru - ಪಂಚಪಾಲಿಕೆ ತರ 5 ಹೋಳಾದ ಬೆಂಗಳೂರು ಪೊಲೀಸ್ ಕಮೀಷನರೇಟ್‌? 7648 ಕೋಟಿ ವೆಚ್ಚ

ಬೆಂಗಳೂರು ಪೊಲೀಸ್ ಕಮೀಷನರೇಟ್‌ ಅನ್ನು ಐದು ಪ್ರತ್ಯೇಕ ಕಮೀಷನರೇಟ್‌ಗಳಾಗಿ ವಿಭಜಿಸಲು ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಯೋಜನೆಯಡಿ, ಮುಖ್ಯ ಆಯುಕ್ತರ ಹುದ್ದೆ ಸೃಜನೆಯಾಗಲಿದ್ದು, ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಂಬ ಐದು ಘಟಕಗಳು ಉದಯವಾಗಲಿವೆ. ಈ ಬದಲಾವಣೆಗೆ ಸುಮಾರು 7,648 ಕೋಟಿ ರೂ. ವೆಚ್ಚವಾಗಲಿದ್ದು, 6,633 ಹೊಸ ಹುದ್ದೆಗಳ ಸೃಜನೆಗೆ ಮನವಿ ಮಾಡಲಾಗಿದೆ.
Read Full Story