- Home
- News
- State
- Karnataka News Live: ಪೀಣ್ಯ ಮೇಲ್ಸೇತುವೆ ಮೇಲೆ ರಾತ್ರಿ ಸಂಚರಿಸುವ ಪ್ರಯಾಣಿಕರೇ ಗಮನಿಸಿ; 10 ದಿನ ಫ್ಲೈಓವರ್ ಬಂದ್, ಈ ರಸ್ತೆ ಬಳಸಿ
Karnataka News Live: ಪೀಣ್ಯ ಮೇಲ್ಸೇತುವೆ ಮೇಲೆ ರಾತ್ರಿ ಸಂಚರಿಸುವ ಪ್ರಯಾಣಿಕರೇ ಗಮನಿಸಿ; 10 ದಿನ ಫ್ಲೈಓವರ್ ಬಂದ್, ಈ ರಸ್ತೆ ಬಳಸಿ

ಬೆಂಗಳೂರು: ನಾನು ಮತ್ತು ಸಿದ್ದರಾಮಯ್ಯ ಅವರು ಸೇರಿ ಚರ್ಚೆ ಮಾಡಿಯೇ ಸಂಪುಟ ವಿಸ್ತರಣೆಗೆ ಹೊಸ ಸಚಿವರ ಪಟ್ಟಿಯ ತೀರ್ಮಾನ ಮಾಡಿದ್ದೇವೆ. ಈ ವಿಚಾರದಲ್ಲಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಗೈರಾಗಿದ್ದು, ಅವರಿಗೆ ಅಸಮಾಧಾನವಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಉತ್ತರ ನೀಡಿದರು.
ಸಿದ್ದರಾಮಯ್ಯ ಯಾಕೆ ಅಸಮಾಧಾನಗೊಳ್ಳುತ್ತಾರೆ? ಅವರ ಹುಟ್ಟುಹಬ್ಬ ಇತ್ತು. ಅನೇಕ ಅತಿಥಿಗಳು, ಅಭಿಮಾನಿಗಳು ಶುಭಾಶಯ ಕೋರಲು ಬರುತ್ತಿರುತ್ತಾರೆ. ನಾನೂ ಶುಭ ಕೋರಿದ್ದೇನೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡಿ ಸಮಾಧಾನ ಮಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ 139 ಶಾಸಕರೂ ಒಂದೇ ತಂಡ. ಒಗ್ಗಟಾಗಿ ಕೆಲಸ ಮಾಡುತ್ತಿದ್ದೇವೆ. ನಾನೂ ಸೇರಿ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೆ. ನಾವು ಒಂದಾಗಿದ್ದೇವೆ. ನೀವುಗಳು ಹೊಸದಾಗಿ ಏನೋ ಹುಡುಕುತ್ತಿದ್ದೀರಿ ಎಂದರು.
ನೀವು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ಖಂಡಿತವಾಗಿ ಮಾತನಾಡಿದ್ದೇನೆ. ಒಟ್ಟು ಐದು ಬಾರಿ ಚರ್ಚೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
Karnataka News Live 4 August 2026ಪೀಣ್ಯ ಮೇಲ್ಸೇತುವೆ ಮೇಲೆ ರಾತ್ರಿ ಸಂಚರಿಸುವ ಪ್ರಯಾಣಿಕರೇ ಗಮನಿಸಿ; 10 ದಿನ ಫ್ಲೈಓವರ್ ಬಂದ್, ಈ ರಸ್ತೆ ಬಳಸಿ
Karnataka News Live 4 August 2026Cabinet expansion - ಸಂಪುಟ ವಿಸ್ತರಣೆಯ ಕೊನೆ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡರ ಹೆಸರು ಕೈಬಿಟ್ಟಿದ್ದೇಕೆ?
Karnataka News Live 4 August 2026ಮಂಗಳೂರು-ಬೆಂಗಳೂರು ರೈಲು - ಕೊನೆಗೂ ಹಳಿಗೆ ಮರಳಿದ ಸಂಚಾರ, ತಾತ್ಕಾಲಿಕ ವೇಗದ ನಿರ್ಬಂಧ
Karnataka News Live 4 August 2026SWRಯಿಂದ ಜುಲೈನಲ್ಲಿ ದಾಖಲೆ! 4.69 ಮಿಲಿಯನ್ ಟನ್ ಸರಕು ಸಾಗಣೆಗೆ ಬಂದ ಆದಾಯ ಎಷ್ಟು?
ನೈಋತ್ಯ ರೈಲ್ವೆಯು ಜುಲೈ ತಿಂಗಳಲ್ಲಿ 4.69 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಅವಧಿಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಸೇವೆಯಿಂದ ಒಟ್ಟು ₹793.31 ಕೋಟಿ ಆದಾಯ ಗಳಿಸಿದೆ.
Karnataka News Live 4 August 2026ಮುಗಿಯದ ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರ; ಪ್ರತಿನಿತ್ಯ ತೊಂದರೆ
ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ಮಳೆಯಿಂದ ಸೋಮನಹಳ್ಳಿ ರಸ್ತೆ ಬಂದ್ ಆಗಿದ್ದು, ರಸ್ತೆ ಪಕ್ಕದ ನಿವಾಸಿಗಳು ಅಪಘಾತ, ಆರೋಗ್ಯ ಸಮಸ್ಯೆ ಹಾಗೂ ಪ್ರವಾಹದ ಭೀತಿಯಲ್ಲಿದ್ದಾರೆ.