ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 4 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
- Home
- News
- State
- Karnataka News Live: ಭಾರೀ ಮಳೆ ಮುನ್ಸೂಚನೆ - ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ!
Karnataka News Live: ಭಾರೀ ಮಳೆ ಮುನ್ಸೂಚನೆ - ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ!

ರಾಮನಗರ: ಬಿಡದಿ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ಆ.9, 10 ಮತ್ತು 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ಜು.30, 31 ಮತ್ತು ಆ.1 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಮ್ಮಜ್ಜಿ ಚನ್ನಮ್ಮರ ಅಗಲಿಕೆಯಿಂದ ಪಾದಯಾತ್ರೆ ಮುಂದೂಡಲಾಗಿತ್ತು. ರಾಜ್ಯ ಸರ್ಕಾರ ಈ ವಿಚಾರವನ್ನು ಪ್ರತಿಷ್ಠೆಗೆ ತೆಗೆದುಕೊಂಡು ರೈತರ ಜಮೀನು ಕಸಿಯುವ ಪ್ರಯತ್ನ ಮಾಡುತ್ತಿದೆ. ಮೊದಲಿನಿಂದ ಬೈರಮಂಗಲ ಭಾಗದ ಜನರ ಜತೆ ಜೆಡಿಎಸ್ ನಿಂತಿದೆ. ಒಂದು ಬಾರಿ ಪಾದಯಾತ್ರೆ ಮಾಡಿ ಧೈರ್ಯ ನೀಡಿದೆ. ಈ ಯೋಜನೆಗೆ ಸ್ಟೇ ತರಲು ಕಾನೂನು ಹೋರಾಟಕ್ಕೆ ಸಹ ಸಿದ್ಧತೆ ನಡೆಸಲಾಗಿದೆ ಎಂದರು.
Karnataka News Live 3 August 2026ಭಾರೀ ಮಳೆ ಮುನ್ಸೂಚನೆ - ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ!
Karnataka News Live 3 August 2026'ಕರ್ಣಾಟಬಲಂ ಅಜೇಯಂ" ಚಿತ್ರಕ್ಕಾಗಿ ಬಾದಾಮಿಯಲ್ಲಿ ಸಹಸ್ರಾರು ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಧ್ಯಾನ್ ಯೋಗೇಶ್ವರ್
ಶಾಸಕ, ನಟ, ನಿರ್ಮಾಪಕ ಸಿಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಕರ್ಣಾಟಬಲಂ ಅಜೇಯಂ' ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಧ್ಯಾನ್ ಸಹಸ್ರಾರು ಕಲಾವಿರೊಂದಿಗೆ 'ಬಾದಾಮಿ ಸೀಮೆಯಿದು ಎಂತ ಸೊಬಗು ..' ಎಂಬ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.
Karnataka News Live 3 August 2026ಕೊಪ್ಪಳಕ್ಕೆ ಇಬ್ಬರು ಸಚಿವರು - ಜಿಲ್ಲೆಯ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದ ಜನಾರ್ದನ ರೆಡ್ಡಿ
G Janardhana Reddy: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಿರುವದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
Karnataka News Live 3 August 2026ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ - ಹುಸ್ಕೂರು ಸ್ಟೇಷನ್ ಬಳಿ ಮೊದಲ 'ಟಿ-ಗಿರ್ಡರ್' ಯಶಸ್ವಿ ಅಳವಡಿಕೆ!
ಬೆಂಗಳೂರು ಉಪನಗರ ಸಾರಿಗೆ ಯೋಜನೆಯ 'ಕಾರಿಡಾರ್ 4' (ಕನಕ ಲೈನ್) ವ್ಯಾಪ್ತಿಯಲ್ಲಿ, ಹುಸ್ಕೂರು ರೈಲ್ವೆ ನಿಲ್ದಾಣದ ಬಳಿ ಮೊದಲ 'ಟಿ-ಗಿರ್ಡರ್' ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದು ಯೋಜನೆಯ ಪ್ರಮುಖ ಮೈಲಿಗಲ್ಲಾಗಿದೆ.
Karnataka News Live 3 August 202650ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಕುರಿತು ಪ್ರಿಯಾಂಕಾ ಉಪೇಂದ್ರ ಮನದಾಳದ ಮಾತು - ನಿರ್ದೇಶನದ ಕನಸು ಬಿಚ್ಚಿಟ್ಟ ನಟಿ
Detective Teekshana: ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ, ಹೊಸ ಸಿನಿಮಾದ ವಿಶೇಷತೆ ಹಾಗೂ ಮುಂದಿನ ನಿರ್ದೇಶನದ ಕನಸಿನ ಬಗ್ಗೆ ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.
Karnataka News Live 3 August 2026ಕರ್ನಾಟಕ ಸಚಿವ ಸಂಪುಟ ವಿಸ್ತರಣೆ - ಯಾರ ಮೇಲೆ 19 ಹೊಸ ಸಚಿವರ ಪ್ರಮಾಣ; ಮಹಿಳೆಯರಿಲ್ಲದೆ 33ಕ್ಕೆ ಹಿಗ್ಗಿದ ಸಂಪುಟ ಗಾತ್ರ!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಸಂಪುಟದ ಒಟ್ಟು ಬಲ 33ಕ್ಕೆ ಏರಿಕೆಯಾಗಿದೆ. ಆದರೆ, ಈ ವಿಸ್ತರಿತ ಮಂತ್ರಿಮಂಡಲದಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಗಮನಾರ್ಹ ಚರ್ಚೆಗೆ ಕಾರಣವಾಗಿದೆ.
Karnataka News Live 3 August 2026ಉಗ್ರನ ಗೆಳತಿ, ರಾಜಕಾರಣಿಗಳೇ ಟಾರ್ಗೆಟ್! ಯಾರೀ ಹನಿಟ್ರ್ಯಾಪ್ ಸುಂದರಿ ಅರ್ಪಿತಾ? ಬೆಚ್ಚಿಬೀಳೋ ಸ್ಟೋರಿ
Karnataka News Live 3 August 2026ಇಂಜಿನಿಯರಿಂಗ್ ಪ್ಲಾಸ್ಟಿಕ್ ಆಗಬಹುದು ನಿಮ್ಮನೆಯ ಹಾಲಿನ ಖಾಲಿ ಪ್ಯಾಕೆಟ್, IISc ವಿಜ್ಞಾನಿಗಳ ಕ್ರಾಂತಿಕಾರಿ ತಂತ್ರಜ್ಞಾನ!
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು, ಪರಿಸರಕ್ಕೆ ಮಾರಕವಾಗಿದ್ದ ಹಾಲಿನ ಪ್ಲಾಸ್ಟಿಕ್ ಪೊಟ್ಟಣಗಳನ್ನು ಅತ್ಯಂತ ಗಟ್ಟಿಮುಟ್ಟಾದ 'ಹೈ-ಪರ್ಫಾರ್ಮೆನ್ಸ್ ಇಂಜಿನಿಯರಿಂಗ್ ಪ್ಲಾಸ್ಟಿಕ್' ಆಗಿ ಪರಿವರ್ತಿಸುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
Karnataka News Live 3 August 2026ಬೆಂಗಳೂರಿನ ಕೆಂಗೇರಿ ಬಳಿಯ 530 ಎಕರೆ ಅರಣ್ಯ ಭೂಮಿ ಕಬಳಿಸುವ ಸಂಚಿಗೆ ಚೆಕ್ಮೆಟ್ ನೀಡಿದ ತಹಶೀಲ್ದಾರ್!
ಬೆಂಗಳೂರಿನ ಕೆಂಗೇರಿ ಬಳಿಯ 30,000 ಕೋಟಿ ರೂ. ಮೌಲ್ಯದ ಬಿ.ಎಂ ಕಾವಲ್ ಅರಣ್ಯ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ನಡೆಸಿದ ಬೃಹತ್ ಸಂಚನ್ನು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ವಿಫಲಗೊಳಿಸಿದ್ದಾರೆ.
Karnataka News Live 3 August 2026'ಅದೃಷ್ಟವು ನಮ್ಮ ಕೈಯಲ್ಲಿಲ್ಲ' ಎನ್ನುತ್ತಲೇ ಪತಿ ಜೊತೆ ಹೊಸ ಹೆಜ್ಜೆ ಇಟ್ಟ ನಟಿ ತಾರಾ - ಫೋಟೋಗಳು ವೈರಲ್
Karnataka News Live 3 August 2026ಒಂದು ರಾತ್ರಿಯಲ್ಲೇ ಹೆಣ್ಣಿನ ಬದುಕಿನ ಅನಾವರಣ - ಚರ್ಚೆಗೆ ಗ್ರಾಸವಾದ 'ಬ್ರಹ್ಮ ಕಮಲ' ಟ್ರೇಲರ್
Brahma Kamala Trailer: ವಿಭಿನ್ನ ಕಥೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತ್ತೊಮ್ಮೆ ಹೊಸ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
Karnataka News Live 3 August 2026ಉತ್ತರ ಕರ್ನಾಟಕ ಮಂದಿಗೆ ಮಸ್ತ್ ಸುದ್ದಿ.. ಮಿಸ್ ಮಾಡ್ದೇ ಓದಲೇಬೇಕಾದ ಸ್ಟೋರಿ ಇದು..!
Karnataka News Live 3 August 2026ದುನಿಯಾ ವಿಜಯ್ ಅಭಿಮಾನಿಗಳಿಗೆ ಗುಡ್ನ್ಯೂಸ್ - ದೊಡ್ಮನೆ ಕುಡಿಯ 'ಸಿಟಿ ಲೈಟ್ಸ್' ರಿಲೀಸ್ ಡೇಟ್ ಫಿಕ್ಸ್
City Lights Kannada Movie: ದುನಿಯಾ ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು, "ಸಿಟಿ ಲೈಟ್ಸ್ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಘೋಷಿಸಿದ್ದಾರೆ.
Karnataka News Live 3 August 2026ಮಧು ಬಂಗಾರಪ್ಪಗೆ ಮತ್ತೆ ಸಚಿವ ಸ್ಥಾನ; ಸಹೋದರ ಕುಮಾರ್ ಬಂಗಾರಪ್ಪ ಅಚ್ಚರಿಕೆ ಹೇಳಿಕೆ
ಸಚಿವ ಸಂಪುಟ ವಿಸ್ತರಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ಅವರ ಸಹೋದರ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯವಾಗಿ ಭಿನ್ನ ಪಕ್ಷಗಳಲ್ಲಿದ್ದರೂ ಸಹೋದರನ ಯಶಸ್ಸಿಗೆ ಅವರು ಹಾರೈಸಿದ್ದಾರೆ. ಆ ಕುರಿತಾದ ವರದಿ ಇಲ್ಲಿದೆ..
Karnataka News Live 3 August 2026ತಮ್ಮನ್ನೇ 'ಅಯೋಗ್ಯ' ಎಂದ ಅಭಿಷೇಕ್ ಅಂಬರೀಶ್ - ವೈರಲ್ ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್
ನಟ ಅಭಿಷೇಕ್ ಅಂಬರೀಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹೊಸ ಸಿನಿಮಾ ಅಥವಾ ಲುಕ್ನಿಂದಲ್ಲ. 'ಅಯೋಗ್ಯ 2' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಚಿತ್ರದ ಬಗ್ಗೆ ಕೇಳಲಾದ..
Karnataka News Live 3 August 2026ಸಚಿವರ ಪಟ್ಟಿಯಲ್ಲಿದ್ದರೂ ಕೊನೇ ಕ್ಷಣದಲ್ಲಿ ಮಂಕಾಳ್ ವೈದ್ಯಗೆ ಕೈತಪ್ಪಿದ ಮಂತ್ರಿಗಿರಿ, ಕರಾವಳಿಯಲ್ಲಿ ಸಿಡಿದೆದ್ದ ಮೀನುಗಾರರ ಸಮುದಾಯ!
ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಸಚಿವರ ಪಟ್ಟಿಯಲ್ಲಿದ್ದ ಶಾಸಕ ಮಂಕಾಳು ವೈದ್ಯ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದ್ದು, ಇದನ್ನು ಎಐಸಿಸಿ 'ಟೈಪಿಂಗ್ ಮಿಸ್ಟೇಕ್' ಎಂದು ಸಮಜಾಯಿಷಿ ನೀಡಿದೆ.
Karnataka News Live 3 August 2026ಕದ್ದ ಚಿನ್ನ, ಹಣವನ್ನ ಮನೆಗೆ ಎಸೆದ ಕಳ್ಳರು.. ಅದರಲ್ಲಿತ್ತು ಒಂದು ಭಾವನಾತ್ಮಕ ಪತ್ರ!
ಸಾಮಾನ್ಯವಾಗಿ ಕಳ್ಳರು ಕದ್ದ ಮಾಲನ್ನು ಮಾರಿ ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ಕಳ್ಳರು ಪಶ್ಚಾತ್ತಾಪ ಪಟ್ಟು ಮಾಲನ್ನು ಮರಳಿಸಿರುವುದು ಈಗ ಕಾಕಿನಾಡ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ಈ 'ಪಶ್ಚಾತ್ತಾಪ' ಪಟ್ಟ ಕಳ್ಳರು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.