08:30 AM (IST) Aug 03

Karnataka News Live 3 August 2026ಸವದತ್ತಿ-ಬೆಂಗಳೂರು - 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್‌ಗಳಿಗೆ ಚಾಲನೆ; ಸಮಯ ಈ ರೀತಿ

ಶಾಸಕ ವಿಶ್ವಾಸ ವೈದ್ಯ ಅವರು ಸವದತ್ತಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ನೂತನ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿದರು. ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಇದು ಸುರಕ್ಷಿತ ಹಾಗೂ ಸುಖಕರ ಪ್ರಯಾಣವನ್ನು ಒದಗಿಸಲಿದೆ.
Read Full Story
08:13 AM (IST) Aug 03

Karnataka News Live 3 August 2026ಉಳುಮೆ ಮಾಡವಾಗ ಪತ್ತೆಯಾಯ್ತು ಪಾಳೇಗಾರರ ಕಾಲದ ಅಪರೂಪದ ಶಾಸನ; ಆಕಳು ಕೊಂದ ಪಾಪದ ಉಲ್ಲೇಖ

ಚಿತ್ರದುರ್ಗ ಜಿಲ್ಲೆಯ ಜವಗೊಂಡನಹಳ್ಳಿಯಲ್ಲಿ ಉಳುಮೆ ಮಾಡುವಾಗ ಪಾಳೇಗಾರ ಅರಸ ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ ಕಾಲದ ಶಾಸನವೊಂದು ಪತ್ತೆಯಾಗಿದೆ. ಜನೋಪಕಾರಕ್ಕಾಗಿ ಕೆರೆ ಕಟ್ಟಿಸಿದ ದೊಡ್ಡಗೌಡನಿಗೆ ಅರಸರು ಉಂಬಳಿ ಭೂಮಿ ನೀಡಿದ್ದನ್ನು ಈ ಶಾಸನವು ದಾಖಲಿಸುತ್ತದೆ. ಪ್ರಸ್ತುತ ಈ ಶಾಸನವನ್ನು ಚಿತ್ರದುರ್ಗದ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.
Read Full Story
08:08 AM (IST) Aug 03

Karnataka News Live 3 August 2026Karnataka Politics - ಈ ಮೂವರ ಪೈಕಿ ಕರ್ನಾಟಕದ ಮುಂದಿನ ವಿಧಾನಸಭಾ ಸ್ಪೀಕರ್ ಯಾರು?

ವಿಧಾನಸಭೆ ಸ್ಪೀಕರ್ ಹುದ್ದೆಗೆ ಎಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ ಹಾಗೂ ಆರ್.ವಿ.ದೇಶಪಾಂಡೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಮಾಜಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದೇನು? ಮೂವರ ಪೈಕಿ ಯಾರಾಗಲಿದ್ದಾರೆ ಸ್ಪೀಕರ್?

Read Full Story
07:55 AM (IST) Aug 03

Karnataka News Live 3 August 2026Exclusive - ಕರಾವಳಿ ವಿವಾದದಿಂದ ಕಲಿತ ಪಾಠ ಏನು? ಪ್ರಜ್ವಲ್ ದೇವರಾಜ್ ಮನದಾದಳ ಮಾತು

'ಕರಾವಳಿ' ಚಿತ್ರದ ಅನುಭವದ ನಂತರ, ಚಿತ್ರರಂಗದ ಒಳಿತಿಗಾಗಿ ಸಂಭಾವನೆ ಕಡಿಮೆ ಮಾಡಿಕೊಳ್ಳುವುದು ಮತ್ತು ಉತ್ತಮ ಪ್ರೀ-ಪ್ರೊಡಕ್ಷನ್‌ ಪ್ರಾಮುಖ್ಯತೆಯನ್ನು ನಟರೊಬ್ಬರು ಒತ್ತಿಹೇಳಿದ್ದಾರೆ. 'ಕರಾವಳಿ' ವಿವಾದದಿಂದ ಪಾಠ ಕಲಿತಿದ್ದು, ಅಗ್ರಿಮೆಂಟ್‌ ಇಲ್ಲದೆ ಸಿನಿಮಾ ಮಾಡಬಾರದೆಂದು ನಿರ್ಧರಿಸಿದ್ದಾರೆ. ಜೊತೆಗೆ, ತಾವೇ ನಿರ್ಮಾಪಕರಾಗಿ ಹೊಸ ಸಿನಿಮಾ ಆರಂಭಿಸುತ್ತಿದ್ದು, ಕಥೆಯೇ ಹೀರೋ ಆಗಿರಲಿದೆ ಎಂದು ಘೋಷಿಸಿದ್ದಾರೆ.
Read Full Story
07:47 AM (IST) Aug 03

Karnataka News Live 3 August 2026Bengaluru - ಜೀವನಾಂಶದ ಒಪ್ಪಂದ ಮುರಿದ ಮಗಳು - ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪೇನು?

ಅಪ್ರಾಪ್ತ ವಯಸ್ಸಿನಲ್ಲಿ ತಾಯಿಯೊಂದಿಗೆ ರಾಜೀ ಒಪ್ಪಂದ ಮಾಡಿಕೊಂಡು ತಂದೆಯಿಂದ ಶಾಶ್ವತ ಜೀವನಾಂಶ ಪಡೆದಿದ್ದ ಮಗಳು, ಪ್ರಾಪ್ತ ವಯಸ್ಕಳಾದ ಮೇಲೆ ಮತ್ತೆ ಜೀವನಾಂಶ ಕೋರಲು ಸಾಧ್ಯವಿಲ್ಲ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಈ ಹಿಂದಿನ ರಾಜೀ ಒಪ್ಪಂದವೇ ಅಂತಿಮ ಎಂದು ಮಹತ್ವದ ತೀರ್ಪು ನೀಡಿದೆ.
Read Full Story
07:33 AM (IST) Aug 03

Karnataka News Live 3 August 2026ಕಾವೇರಿ ನೀರಿಗಾಗಿ ಮತ್ತೆ ಹೋರಾಟ 13ರಂದು ಕರ್ನಾಟಕ ಬಂದ್ ಫಿಕ್ಸ್, ವಾಪಸ್ ಮಾತೇ ಇಲ್ಲ - ವಾಟಾಳ್

ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದನ್ನು ವಿರೋಧಿಸಿ ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ರಾಜ್ಯ ಸರ್ಕಾರದ ವಿರುದ್ಧ ರೈತರು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

Read Full Story
07:27 AM (IST) Aug 03

Karnataka News Live 3 August 2026ಮೊದಲ ಗಂಡನ ಹಣದಲ್ಲಿ 2ನೇ ಪತಿ ಜತೆಗೆ ವಿವಾಹ ವಾರ್ಷಿಕೋತ್ಸವ; ಜೀವನಾಂಶಕ್ಕಾಗಿ ದೂರು

ವಿಚ್ಛೇದನ ನೀಡದೆ ಎರಡನೇ ವ್ಯಕ್ತಿಯೊಂದಿಗೆ ವಾಸಿಸುತ್ತಿರುವ ಪತ್ನಿ, ತನ್ನಿಂದ ಜೀವನಾಂಶ ಪಡೆಯುತ್ತಿದ್ದಾಳೆ ಎಂದು ಪತಿ ಹೈಕೋರ್ಟ್‌ಗೆ ದೂರು ನೀಡಿದ್ದಾರೆ. ಪತಿಯ ಅಳಲು ಆಲಿಸಿದ ನ್ಯಾಯಾಲಯ, ಪತ್ನಿಗೆ ಜೀವನಾಂಶ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
Read Full Story