10:42 PM (IST) Jun 20

Karnataka News Live 20th Juneಟೆಸ್ಟ್‌ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ, ದಿಗ್ಗಜರ ಸಾಲಿಗೆ ಸೇರಿದ ಶುಭ್‌ಮನ್‌ ಗಿಲ್, ದಾಖಲೆ ಬರೆದ ಜೈಸ್ವಾಲ್‌!

ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್, ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

Read Full Story
10:37 PM (IST) Jun 20

Karnataka News Live 20th Juneಇಸ್ರೇಲ್‌ಗೆ ದುಬಾರಿಯಾಗ್ತಿದೆ ಇರಾನ್ ಜೊತೆ ಯುದ್ಧ, ಪ್ರತಿದಿನ ಎಷ್ಟು ಮಿಲಿಯನ್ ಖರ್ಚು ಆಗ್ತಿದೆ ಗೊತ್ತಾ?

8 ದಿನಗಳಿಂದ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧದಲ್ಲಿ ಇಸ್ರೇಲ್ 50,000 ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಪರಮಾಣು ಕೇಂದ್ರಗಳ ಮೇಲಿನ ದಾಳಿ ಮತ್ತು ಕ್ಷಿಪಣಿ ದಾಳಿಯಿಂದ ಉದ್ವಿಗ್ನತೆ ಉತ್ತುಂಗಕ್ಕೇರಿದೆ. ಕಚ್ಚಾ ತೈಲದ ಬೆಲೆಯೂ ಏರಿಕೆಯಾಗಿದೆ.
Read Full Story
10:09 PM (IST) Jun 20

Karnataka News Live 20th June'ನಾನು ತಪ್ಪು ಮಾಡಿದ್ರೆ, ಕಾಲಿಗೆ ಬಿದ್ದು ಕ್ಷಮೆ ಕೇಳೋಕು ರೆಡಿ..' ಸಂಜುಗೆ ಕೈಕೊಟ್ಟ ಗೀತಾ 'ರಚಿತಾ ರಾಮ್‌' ರಿಯಾಕ್ಷನ್‌!

ಸಂಜು ವೆಡ್ಸ್‌ ಗೀತಾ-2 ಸಿನಿಮಾ ಪ್ರಚಾರದಲ್ಲಿ ಭಾಗಿಯಾಗದಿರುವುದು ಮತ್ತು ಉಪ್ಪಿ ರುಪೀ ಸಿನಿಮಾಕ್ಕೆ ಹಣ ಪಡೆದು ದಿನಾಂಕ ನೀಡದಿರುವ ಆರೋಪಗಳಿಗೆ ರಚಿತಾ ರಾಮ್‌ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ರಚಿತಾ ರಾಮ್‌ ಖಂಡಿಸಿದ್ದಾರೆ.
Read Full Story
10:05 PM (IST) Jun 20

Karnataka News Live 20th Juneಇರಾನ್ ಮಹತ್ವದ ಸುದ್ದಿಗೋಷ್ಠಿ - ಜಾಗತಿಕ ಶಾಂತಿಗೆ ಭಾರತ ಮುಂದೆ ಬರಬೇಕು, ಇಸ್ರೇಲ್ ವಿರುದ್ಧ ಕಿಡಿ, ಅಮೆರಿಕ-ಪಾಕಿಸ್ತಾನಕ್ಕೆ ಎಚ್ಚರಿಕೆ!

ಇಸ್ರೇಲ್ ದಾಳಿಯನ್ನು ಖಂಡಿಸಲು ಇರಾನ್ ಭಾರತಕ್ಕೆ ಮನವಿ ಮಾಡಿದೆ. ಜಾಗತಿಕ ಶಾಂತಿಗಾಗಿ ಭಾರತ ಮಧ್ಯಪ್ರವೇಶಿಸಬೇಕೆಂದು ಇರಾನ್ ಒತ್ತಾಯಿಸಿದೆ. ಅಮೆರಿಕ ಮತ್ತು ಪಾಕಿಸ್ತಾನದ ಹಸ್ತಕ್ಷೇಪದ ವಿರುದ್ಧ ಇರಾನ್ ಎಚ್ಚರಿಕೆ ನೀಡಿದೆ.
Read Full Story
09:42 PM (IST) Jun 20

Karnataka News Live 20th Juneಯಾದಗಿರಿ - ಕಾನೂನು ವಿದ್ಯಾರ್ಥಿಗೆ ಅಡ್ಡಗಟ್ಟಿ ಜಾತಿ ನಿಂದನೆ, ಕೊನೆ ಬೆದರಿಕೆ!

ಯಾದಗಿರಿ ಜಿಲ್ಲೆಯ ನಾಗರಾಳದಲ್ಲಿ ಎಲ್‌ಎಲ್‌ಬಿ ವಿದ್ಯಾರ್ಥಿ ದುರ್ಗಪ್ಪನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story
08:59 PM (IST) Jun 20

Karnataka News Live 20th Juneಪ್ರಖ್ಯಾತ ನಟಿ ಆಯೇಷಾ ಖಾನ್‌ ನಿಧನ, ಮನೆಯಲ್ಲೇ ಕೊಳೆತು ಹೋಗಿದ್ದ ಮೃತದೇಹ!

ನಟಿ ಆಯೇಷಾ ಖಾನ್ ತಮ್ಮ ಅಪಾರ್ಟ್ಮೆಂಟ್ನಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ, ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಸಾವು ಮನರಂಜನಾ ಉದ್ಯಮದಲ್ಲಿ ದುಃಖವನ್ನುಂಟುಮಾಡಿದೆ.

Read Full Story
08:36 PM (IST) Jun 20

Karnataka News Live 20th Juneಚಾಮರಾಜನಗರ - ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆಯ ಮೃತ ದೇಹ, ವಾಮಾಚಾರಕ್ಕೆ ಬಲಿ ನಾ? ಇಲ್ಲ ಕೊಲೆನಾ?

ಚಾಮರಾಜನಗರದ ಹೊಳೆ ದಂಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ. ವಾಮಾಚಾರದ ಸಾಮಗ್ರಿಗಳು ಪತ್ತೆಯಾಗಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
08:28 PM (IST) Jun 20

Karnataka News Live 20th Juneಮೇಡ್‌ ಇನ್‌ ಚೀನಾ ಇವಿಗಳ ಮೂಲಕ ಜುಲೈನಲ್ಲಿ ಭಾರತದ ಶೋ ರೂಮ್‌ ತೆರೆಯಲಿರುವ ಟೆಸ್ಲಾ!

ಟೆಸ್ಲಾ ತನ್ನ ಮೊದಲ ಶೋ ರೂಂ ಅನ್ನು ಜುಲೈ ಮಧ್ಯಭಾಗದಲ್ಲಿ ಮುಂಬೈನಲ್ಲಿ ತೆರೆಯಲು ಸಜ್ಜಾಗಿದ್ದು, ನಂತರ ನವದೆಹಲಿಯಲ್ಲಿ ಒಂದು ಶೋ ರೂಂ ತೆರೆಯಲಿದೆ.

Read Full Story
08:02 PM (IST) Jun 20

Karnataka News Live 20th JuneHousing quota row - ಮೀಸಲಾತಿ ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತೆ ಮಂತ್ರಿ ಮಟ್ಟದಲ್ಲಿ ಅಲ್ಲ - ಶಾಸಕ ಪೊನ್ನಣ್ಣ

ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳದ ಬಗ್ಗೆ ಶಾಸಕ ಪೊನ್ನಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದ ನಿರ್ಧಾರವಿಲ್ಲದೆ ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಳೆಗಾಲದ ಸಿದ್ಧತೆಗಳ ಬಗ್ಗೆಯೂ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Read Full Story
07:57 PM (IST) Jun 20

Karnataka News Live 20th Juneಭಾರತದಲ್ಲಿ ದಾಖಲೆ ಬರೆದ ಮಾರುತಿ ಸ್ವಿಫ್ಟ್, 20 ವರ್ಷ ಪೂರೈಸಿ ಹೊಸ ಮೈಲಿಗಲ್ಲು

2005ರಲ್ಲಿ ಭಾರತಕ್ಕೆ ಎಂಟ್ರಿಕೊಟ್ಟ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಇದೀಗ ಭರ್ಜರಿ ದಾಖಲೆ ಬರೆದಿದೆ. ಬರೋಬ್ಬರಿ 20 ವರ್ಷದಿಂದ ಬೇಡಿಕೆಯ ಕಾರಾಗಿರುವ ಸ್ವಿಫ್ಟ್ ಭಾರತದಲ್ಲಿ ಮಾರಾಟವಾಗಿದ್ದೆಷ್ಟು?

Read Full Story
07:57 PM (IST) Jun 20

Karnataka News Live 20th Juneರಿಪೇರಿ ಮಾಡುವ ಸಹಾಯ ತಿರಸ್ಕರಿಸಿದ ಬ್ರಿಟನ್‌ ರಾಯಲ್‌ ನೇವಿ, 6 ದಿನದಿಂದ ಕೇರಳದಲ್ಲಿ ನಿಂತ F-35B ಫೈಟರ್‌ ಜೆಟ್‌!

ತುರ್ತು ಲ್ಯಾಂಡಿಂಗ್ ನಂತರ, ಹಾನಿಯನ್ನು ನಿರ್ಣಯಿಸಲು ಬ್ರಿಟಿಷ್ ತಾಂತ್ರಿಕ ತಂಡವು ಮೂರನೇ ದಿನ ಆಗಮಿಸಿತು.

Read Full Story
07:41 PM (IST) Jun 20

Karnataka News Live 20th Juneಪ್ರವಾಸಿಗರಿಗಾಗಿ ತನ್ನ ಐಷಾರಾಮಿ ಊಟಿ ವಿಲ್ಲಾದಲ್ಲಿ ಅವಕಾಶ ಕೊಟ್ಟ ನಟ ಮೋಹನ್‌ಲಾಲ್‌, ಒಂದು ರಾತ್ರಿಗೆ ಎಷ್ಟು?

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಊಟಿಯಲ್ಲಿರುವ ತಮ್ಮ ಐಷಾರಾಮಿ ವಿಲ್ಲಾ ‘ಹೈಡ್‌ಅವೇ’ ಅನ್ನು ಸಾರ್ವಜನಿಕರಿಗೆ ತೆರೆದಿದ್ದಾರೆ. ಈ ವಿಲ್ಲಾ ಪ್ರತಿ ರಾತ್ರಿಗೆ ₹37,000 ದರದಲ್ಲಿ ಲಭ್ಯವಿದ್ದು, ಅವರ ಕುಟುಂಬದ ವೈಯಕ್ತಿಕ ಸ್ಪರ್ಶ, ಸಿನಿಮಾ ಸ್ಮರಣಿಕೆಗಳು ಮತ್ತು ನಾಟಿ ಶೈಲಿಯ ಕೇರಳ ಊಟವನ್ನು ಒಳಗೊಂಡಿದೆ.
Read Full Story
07:39 PM (IST) Jun 20

Karnataka News Live 20th Juneಅಮೆರಿಕ ಅಧ್ಯಕ್ಷ ಟ್ರಂಪ್ ಆಹ್ವಾನ ತಿರಸ್ಕರಿಸಿದ ಕಾರಣ ಬಹಿರಂಗಪಡಿಸಿದ ಪ್ರಧಾನಿ ಮೋದಿ

ಅಮೆರಿಕ ಭೇಟಿ ಮಾಡುವಂತೆ ಟ್ರಂಪ್ ನೀಡಿದ ಆಹ್ವಾನವನ್ನು ಮೋದಿ ತಿರಸ್ಕರಿಸಿದ್ದರು. ಈ ನಡೆ ಭಾರಿ ಚರ್ಚೆಯಾಗಿತ್ತು. ಇದೀಗ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರ ಆಹ್ವಾನ ತಿರಸ್ಕರಿಸಲು ಅಸಲಿ ಕಾರಣವೇನು ಅನ್ನೋದು ಬಹಿರಂಗಪಡಿಸಿದ್ದಾರೆ.

Read Full Story
07:14 PM (IST) Jun 20

Karnataka News Live 20th Juneವಿಮಾನ ದುರಂತದಲ್ಲಿ ಮಡಿದ ಕುಟುಂಬದ ಜೊತೆ ನಾವಿದ್ದೇವೆ, ಟಾಟಾ ಸನ್ಸ್ ಭರವಸೆ

ಏರ್ ಇಂಡಿಯಾ ವಿಮಾನ ದುರಂತ ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ದುರಂತವಾಗಿದೆ. ಮಡಿದ ಕುಟುಂಬಸ್ಥರ ಕಣ್ಣೀರು ನಿಲ್ಲುತ್ತಿಲ್ಲ. ಇದರ ನಡುವೆ ಏರ್ ಇಂಡಿಯಾ ಮಾಲೀಕತ್ವದ ಟಾಟಾ ಸನ್ಸ್ ಚೇರ್ಮೆನ್ ಮಹತ್ವದ ಭರವಸೆ ನೀಡಿದ್ದಾರೆ.

Read Full Story
06:49 PM (IST) Jun 20

Karnataka News Live 20th Juneಟಿಸಿಎಸ್‌ ಬಳಿಕ ಆಂಧ್ರದಲ್ಲಿ ಕಾಗ್ನಿಜೆಂಟ್‌ ಕಂಪನಿಗೆ ಕೇವಲ 99 ಪೈಸೆಗೆ 21.31 ಎಕರೆ ಜಾಗ ನೀಡಿದ ಚಂದ್ರಬಾಬು ನಾಯ್ದು!

ನ್ಯೂಜೆರ್ಸಿಯ ಟೀನೆಕ್ ಮೂಲದ ಸಾಫ್ಟ್‌ವೇರ್ ದೈತ್ಯ ವಿಶಾಖಪಟ್ಟಣಂನಲ್ಲಿ ₹1,582 ಕೋಟಿ ಮೌಲ್ಯದ ಐಟಿ ಕ್ಯಾಂಪಸ್ ನಿರ್ಮಿಸಲಿದ್ದು, 8000 ಉದ್ಯೋಗಗಳ ಭರವಸೆ ನೀಡಿದೆ.

Read Full Story
06:28 PM (IST) Jun 20

Karnataka News Live 20th Juneಮೋಹನ್‌ಲಾಲ್‌ಗೆ ಶ್ರೀಲಂಕಾ ಸಂಸತ್ತಿನಲ್ಲಿ ಅದ್ಧೂರಿ ಸ್ವಾಗತ, ಸ್ಟಾರ್‌ ನಟ ಅಲ್ಲಿ ಹೋಗಿದ್ಯಾಕೆ?

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿ ಶ್ರೀಲಂಕಾ ಸಂಸತ್ ಭೇಟಿ. ಪ್ರಧಾನಿ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿ ಸ್ವಾಗತ. ಈ ಅನುಭವವನ್ನು 'ಮರೆಯಲಾಗದ' ಎಂದು ಬಣ್ಣಿಸಿದ ನಟ.
Read Full Story
06:28 PM (IST) Jun 20

Karnataka News Live 20th Juneಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರಕ್ಕೆ ಹೆಸ್ಕಾಂಗೆ ನಷ್ಟದ ಹೊಡೆತ - ಕಂಬ, ಪರಿವರ್ತಕಗಳಿಂದ 5.65 ಕೋಟಿ ನಷ್ಟ!

ಉತ್ತರ ಕರ್ನಾಟಕದಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಹೆಸ್ಕಾಂಗೆ 5.65 ಕೋಟಿ ರೂ. ನಷ್ಟವಾಗಿದೆ. ಧಾರವಾಡ, ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ, ಪರಿವರ್ತಕಗಳು ಹಾನಿಗೊಳಗಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ.
Read Full Story
06:26 PM (IST) Jun 20

Karnataka News Live 20th Juneಕಾಂಗ್ರೆಸ್ ನಾಯಕಿ ವಸಂತ ಕರ್ಮಕಾಂಡ ಬಯಲು; ಸರ್ಕಾರಿ ಕೆಲಸ ಕೊಡಿಸೋದಾಗಿ ₹20 ಲಕ್ಷದವರೆಗೆ ಹಣ ಪೀಕಿದ್ದ ಆರೋಪ!

ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವು ಜನರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ವಿಶ್ವಕರ್ಮ ಸಮಾಜದ ಕಾರ್ಯಕ್ರಮದಲ್ಲಿ ವಂಚಿತರು ಪ್ರತಿಭಟನೆ ನಡೆಸಿ, ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆಯಿತು.
Read Full Story
06:24 PM (IST) Jun 20

Karnataka News Live 20th Juneಮೆಟ್ರೋ ಲೇಡಿಸ್ ಕೋಚ್‌ನಲ್ಲಿ ಕಾಣಿಸಿಕೊಂಡ ಹಾವು, ಕಕ್ಕಾಬಿಕ್ಕಿಯಾದ ಮಹಿಳಾ ಪ್ರಯಾಣಿಕರು

ಮೆಟ್ರೋ ರೈಲಿನ ಮಹಿಳಾ ಕೋಚ್‌ನಲ್ಲಿ ಮಹಿಳೆಯರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. ಎಲ್ಲರೂ ಹಾವು ಹಾವು ಎಂದು ಕೂಗಿಕೊಂಡು ಸೀಟ್ ಮೇಲೆ ಹತ್ತಿದರೆ, ಕೂಗಾಟ ಚೀರಾಟದಿಂದ ರೈಲು ತುರ್ತು ನಿಲುಗಡೆ ಮಾಡಿದ ಘಟನೆ ನಡೆದಿದೆ.

Read Full Story
06:20 PM (IST) Jun 20

Karnataka News Live 20th Juneಆ ಸ್ಟಾರ್ ನಟಿಯನ್ನು ನೋಡೊದಕ್ಕಾಗಿಯೇ ಸಮನ್ಸ್ ನೀಡಿ ಕೋರ್ಟ್ ಗೆ ಕರೆಸುತ್ತಿದ್ದ ಜಡ್ಜ್!

ಈಕೆ ಅಂದಿನ ಕಾಲದ ಜನಪ್ರಿಯ ನಟಿ, ಆಕೆಯನ್ನು ನೋಡೊದಕ್ಕೆ ಜನ ತುದಿಗಾಲಲ್ಲಿ ನಿಲ್ಲುತ್ತಿದ್ದ ದಿನಗಳವು. ಜನ ಆ ನಟಿಯ ಬಗ್ಗೆ ಎಷ್ಟು ಹುಚ್ಚರಾಗಿದ್ದರು ಎಂದರೆ ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರು ಒಬ್ಬರು ಆಕೆಯನ್ನು ಒಮ್ಮೆ ನೋಡೋದಕ್ಕಾಗಿಯೇ ಆಕೆಗೆ ಸಮನ್ಸ್ ಕಳುಹಿಸಿದ್ದರು.

Read Full Story