06:04 AM (IST) May 18

Karnataka News Live 18 May 2026ಸಿಲಿಂಡರ್‌ಗೆ ಮಧ್ಯರಾತ್ರಿಯಿಂದ್ಲೇ ಕ್ಯೂ, ಪೆಟ್ರೋಲ್‌ ‘ನೋ ಸ್ಟಾಕ್‌’! ಭಾಲ್ಕಿ, ಬಳ್ಳಾರಿಯಲ್ಲಿ ಜನರ ಪರದಾಟ

ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೀದರ್‌ನ ಭಾಲ್ಕಿಯಲ್ಲಿ ಗ್ಯಾಸ್‌ ಸಿಲಿಂಡರ್‌ಗಳಿಗಾಗಿ ಹಾಗೂ ಬಳ್ಳಾರಿಯಲ್ಲಿ ಪೆಟ್ರೋಲ್‌ಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ.

Read Full Story
05:59 AM (IST) May 18

Karnataka News Live 18 May 2026ಸಿಡಿಲ ಮಳೆಗೆ ರಾಜ್ಯದಲ್ಲಿ 3 ಬಲಿ; 10 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮುಂಗಾರು ಪೂರ್ವ ಮಳೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಯಾದಗಿರಿಯಲ್ಲಿ ಮದುವೆ ಮಂಟಪದ ಛಾವಣಿ ಕುಸಿದುಬಿದ್ದಿದೆ.
Read Full Story
05:51 AM (IST) May 18

Karnataka News Live 18 May 2026Belagavi - ಶಿವಾನಂದ ನೀಲಣ್ಣವರ ₹4500 ಕೋಟಿ ಹಗರಣ ಕೇಸ್; ತನಿಖೆ ಕೈಗೆತ್ತಿಕೊಂಡ ಸಿಐಡಿ

ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಹೂಡಿಕೆ ಸಂಸ್ಥೆ ತೆರೆದು, ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಜನರಿಗೆ ಅಂದಾಜು ₹4500 ಕೋಟಿ ವಂಚಿಸಿದ ಆರೋಪದ ಮೇಲೆ ಶಿವಾನಂದ ನೀಲಣ್ಣನವರನನ್ನು ಬಂಧಿಸಲಾಗಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಾಗಿದ್ದರಿಂದ, ಇದೀಗ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ.
Read Full Story
05:45 AM (IST) May 18

Karnataka News Live 18 May 2026Chikkamagaluru - ದಕ್ಷಿಣ ಭಾರತದಲ್ಲೇ ಪ್ರಥಮ - ಆಪರೇಷನ್ ಒಂಟಿ ಕಾಡುಕೋಣ ಸೆರೆ ಸಕ್ಸಸ್

ಚಿಕ್ಕಮಗಳೂರು ತಾಲೂಕಿನ ಅರೆನೂರು ಹಕ್ಕಿಮಕ್ಕಿಯಲ್ಲಿ ರೈತರ ಜಮೀನುಗಳಿಗೆ ಹಾನಿ ಮಾಡುತ್ತಿದ್ದ ಒಂಟಿ ಕಾಡುಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಕಾರ್ಯಾಚರಣೆಯ ಬಳಿಕ, ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ.

Read Full Story
05:32 AM (IST) May 18

Karnataka News Live 18 May 2026ಯೋಜನೆಯ ಗುತ್ತಿಗೆ ಅಂತಿಮಗೊಳ್ಳುವ ಮುನ್ನವೇ ಸರ್ವೇ ಕಾರ್ಯ ಆರಂಭಿಸಿದ ಅದಾನಿ ಸಂಸ್ಥೆ

ಬೆಂಗಳೂರಿನ ಬಹುಚರ್ಚಿತ ಸುರಂಗ ರಸ್ತೆ ನಿರ್ಮಾಣ ಯೋಜನೆಯ ಗುತ್ತಿಗೆ ಅಂತಿಮಗೊಳ್ಳುವ ಮುನ್ನವೇ, ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿರುವ ಅದಾನಿ ಸಂಸ್ಥೆಯು ನಗರದಲ್ಲಿ ಪ್ರಾಥಮಿಕ ಭೂ ಸಮೀಕ್ಷೆ ಮತ್ತು ಮಣ್ಣು ಪರೀಕ್ಷೆ ಆರಂಭಿಸಿದೆ. ಯೋಜನೆಯ ವಿನ್ಯಾಸ ಮತ್ತು ಸವಾಲುಗಳನ್ನು ಮುಂಚಿತವಾಗಿ ಅರಿಯಲು ಈ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಸರ್ಕಾರದೊಂದಿಗಿನ ಮಾತುಕತೆಗಳು ಇನ್ನೂ ಮುಂದುವರಿದಿವೆ.
Read Full Story
05:25 AM (IST) May 18

Karnataka News Live 18 May 2026ಕಡಲಾಚೆ ಪಯಣ ಬೆಳೆಸಿದ ನಮ್ಮ ಕಲಬುರಗಿಯ ಪ್ರಸಿದ್ಧ ಜೋಳದ ರೊಟ್ಟಿ; ವಿದೇಶಗಳಿಗೆ ರಫ್ತು

ಕಲಬುರಗಿಯ ಪ್ರಸಿದ್ಧ ಜೋಳದ ರೊಟ್ಟಿಯು ಈಗ ಅಮೆರಿಕ, ಕೆನಡಾ, ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ರಫ್ತಾಗುತ್ತಿದೆ. ಜಿಲ್ಲಾಡಳಿತದ ಈ ಉಪಕ್ರಮವು ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡಿ, ಅವರ ಆದಾಯವನ್ನು ಹೆಚ್ಚಿಸಿದೆ ಮತ್ತು ಈ ಉದ್ಯಮವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೆಲೆಯೂರುತ್ತಿದೆ.
Read Full Story