10:45 PM (IST) Feb 15

Karnataka News Live 15 February 2026 ತಟ್ಟೆ ಬಿದ್ದು ಅನ್ನ ಚೆಲ್ಲಿದ್ದಕ್ಕೆ ಬೈದ ಅಮ್ಮಾ, ದುರಂತ ಅಂತ್ಯಕಂಡ 7ನೇ ತರಗತಿ ವಿದ್ಯಾರ್ಥಿನಿ

ತಟ್ಟೆ ಬಿದ್ದು ಅನ್ನ ಚೆಲ್ಲಿದ್ದಕ್ಕೆ ಬೈದ ಅಮ್ಮಾ, ತಾಯಿ ಬೈಗುಳಕ್ಕೆ ಬೇಸತ್ತ ಮಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಕೆಲಸದಿಂದ ಮನೆಗೆ ಮರಳುವಾಗ ಮಗಳು ಶವವಾಗಿದ್ದಾಳೆ. ಮಗಳ ತಬ್ಬಿ ತಾಯಿ ರೋಧನೆ ಮುಗಿಲು ಮುಟ್ಟಿದೆ.

Read Full Story
08:53 PM (IST) Feb 15

Karnataka News Live 15 February 2026 ಕುಣಿಗಲ್ ಕುದರೆ ಎಂದೇ ಖ್ಯಾತಿ ಸ್ಥಳಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಶಿಫ್ಟ್, ಶೌರ್ಯ ಪರಂಪರೆ ಸಾಲಿಗೆ ರೇಸ್

ಕುಣಿಗಲ್ ಕುದರೆ ಎಂದೇ ಖ್ಯಾತಿ ಸ್ಥಳಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಶಿಫ್ಟ್, ಇದೀಗ ಬೆಂಗಳೂರಿನ ಐತಿಹಾಸಿಕ ರೇಸ್ ಕೋರ್ಸ್ ಶೌರ್ಯ ಪರಂಪರೆ ಸಾಲಿಗೆ ಸೇರಿಕೊಳ್ಳುತ್ತಿದೆ. ಬ್ರಿಟೀಷರು ಆರಂಭಿಸಿದ ರೇಸ್ ಕೋರ್ಸ್ ಇದೀಗ ಅದಕ್ಕೂ ಹಿಂದಿನ ಇತಿಹಾಸ ಜೊತೆ ಸೇರಿಕೊಳ್ಳುತ್ತಿದೆ.

 

Read Full Story
04:44 PM (IST) Feb 15

Karnataka News Live 15 February 2026 ಅಶ್ವಿನಿ ಪುನೀತ್​ರನ್ನೇ ಯಾರು ಎಂದು ಪ್ರಶ್ನಿಸಿದ ಸಿಎಂ ಸಿದ್ದು - ಅಪ್ಪು ಫ್ಯಾನ್ಸ್​ ಗರಂ- ವಿಡಿಯೋ ವೈರಲ್​

ಹೊಸಪೇಟೆಯ ಹಂಪಿಯಲ್ಲಿ ಮೂರು ದಿನಗಳ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರನ್ನು ಗುರುತಿಸಲು ವಿಫಲರಾಗಿ 'ಇವರು ಯಾರು' ಎಂದು ಪ್ರಶ್ನಿಸಿದ್ದು, ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Read Full Story
02:11 PM (IST) Feb 15

Karnataka News Live 15 February 2026 ಚಾಮರಾಜನಗರ - ಕುಡಿದು ವಾಹನ ಚಲಾಯಿಸಿದ್ದ ಆಟೋ ಚಾಲಕನಿಗೆ ವಿನೂತನ ಶಿಕ್ಷೆ; ಬೋರ್ಡ್ ಹಿಡಿದು ನಿಂತ ಡ್ರೈವರ್

ಮದ್ಯಪಾನ ಮಾಡಿ ಆಟೋ ಚಲಾಯಿಸಿದ ಚಾಮರಾಜನಗರದ ಚಾಲಕನಿಗೆ ನ್ಯಾಯಾಲಯವು ವಿನೂತನ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಆದೇಶದಂತೆ, ಚಾಲಕನು 'ಕುಡಿದು ವಾಹನ ಓಡಿಸಬೇಡಿ' ಎಂಬ ಫಲಕ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ನಿಂತು ಜಾಗೃತಿ ಮೂಡಿಸಿದ್ದಾನೆ. ಈ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗಿದೆ.
Read Full Story
01:03 PM (IST) Feb 15

Karnataka News Live 15 February 2026 ಬಿಕ್ಲು ಶಿವ ಕೊಲೆ ಪ್ರಕರಣ - ಬಿಜೆಪಿ ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ

BJP MLA Byrati Basavaraj ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ವರದಿ ಆಧರಿಸಿ 42ನೇ ಎಸಿಜೆಎಂ ನ್ಯಾಯಾಲಯವು ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ. 

Read Full Story
12:44 PM (IST) Feb 15

Karnataka News Live 15 February 2026 Bengaluru - ಶ್ವಾನ ಪ್ರಿಯರ ಗಮನಕ್ಕೆ, ಬೀದಿನಾಯಿಗಳಿಗೆ ಆಹಾರ ಹಾಕಲು ನಗರದಲ್ಲಿ 450 ಸ್ಥಳಗಳ ಗುರುತು

ಸಾರ್ವಜನಿಕ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ, ನಗರದಾದ್ಯಂತ ಬೀದಿ ನಾಯಿಗಳಿಗೆ ಆಹಾರ ನೀಡಲು 450 ಸ್ಥಳಗಳನ್ನು ಗುರುತಿಸಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ಈ ಕ್ರಮ ಕೈಗೊಂಡಿದ್ದು, ಪ್ರಾಣಿ ಪ್ರಿಯರು ನಿಗದಿತ ಸ್ಥಳಗಳಲ್ಲೇ ಆಹಾರ ನೀಡಿ, ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಲಾಗಿದೆ.

Read Full Story
12:01 PM (IST) Feb 15

Karnataka News Live 15 February 2026 Gadag - ಶಿವರಾತ್ರಿ ದಿನವೇ ರಾಮಲಿಂಗೇಶ್ವರ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು! (ಫೋಟೋ)

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರಿನಲ್ಲಿ ಶಿವರಾತ್ರಿಯ ಸಂಭ್ರಮದ ನಡುವೆಯೇ ರಾಮಲಿಂಗೇಶ್ವರ ಹಾಗೂ ನಂದಿ ವಿಗ್ರಹಗಳನ್ನು ಭಗ್ನಗೊಳಿಸಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ ಘಟನೆಯ ವಿವರ ಇಲ್ಲಿದೆ.

 

Read Full Story
11:33 AM (IST) Feb 15

Karnataka News Live 15 February 2026 2028ಕ್ಕೆ ಸಿದ್ದರಾಮಯ್ಯ ಅಲ್ಲ, ಡಿಕೆಶಿನೂ ಅಲ್ಲ, ವಿಜಯೇಂದ್ರ ಸಿಎಂ - ಬಿಜೆಪಿ ಮುಖಂಡನ ಭವಿಷ್ಯವಾಣಿ ನಿಜವಾಗುತ್ತಾ?

BY Vijayendra Becoming CM in 2028 ಬೀಳಗಿಯಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರು 2028ಕ್ಕೆ ಬಿ.ವೈ.ವಿಜಯೇಂದ್ರ ರಾಜ್ಯದ ಮುಖ್ಯಮಂತ್ರಿಯಾಗುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Read Full Story
11:33 AM (IST) Feb 15

Karnataka News Live 15 February 2026 ಪಂಪ್‌ವೆಲ್‌- ಕರಾವಳಿ ಜಂಕ್ಷನ್‌ ರಸ್ತೆ ಕಾಮಗಾರಿ - ಇಂದಿನಿಂದ 4 ತಿಂಗಳು ಸಂಚಾರ ಬದಲಾವಣೆ

ಮಂಗಳೂರಿನ ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್‌ವರೆಗಿನ ಚತುಷ್ಪಥ ರಸ್ತೆ ಅಭಿವೃದ್ದಿ ಕಾಮಗಾರಿ ಫೆ.15ರಿಂದ ನಾಲ್ಕು ತಿಂಗಳ ಕಾಲ ನಡೆಯಲಿದೆ. ಪರ್ಯಾಯ ಮಾರ್ಗಗಳು ಈ ರೀತಿಯಾಗಿದೆ. 

Read Full Story
11:07 AM (IST) Feb 15

Karnataka News Live 15 February 2026 ಮಂಡ್ಯ ಗ್ರಾ.ಪಂಚಾಯ್ತಿಯೊಳಗೆ 3 ದಿನದಲ್ಲಿ 54 ಲಕ್ಷ ಗುಳುಂ - 11 ನೌಕರರ ವಿರುದ್ಧ ಪ್ರಕರಣ ದಾಖಲು

Taggahalli Gram Panchayat: ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ, ಪ್ರಭಾರ ಪಿಡಿಒ ಅಧಿಕಾರಿಯೊಬ್ಬರು ಕೇವಲ ಮೂರು ದಿನಗಳಲ್ಲಿ 54 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. 

Read Full Story
10:40 AM (IST) Feb 15

Karnataka News Live 15 February 2026 ಬೆಂಗಳೂರು ಅಪಘಾತ; ಅಮ್ಮನಿಗೆ ಸ್ವೀಟ್ ಕೊಡಿಸಿ, ಹತ್ತೇ ನಿಮಿಷದಲ್ಲಿ ಬರ್ತಿನಿ ಎಂದ ಮಗ ಬರಲಿಲ್ಲ

ಬೆಂಗಳೂರಿನ ಫ್ಲೈಓವರ್ ಮೇಲೆ ನಡೆದ ಭೀಕರ ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರು ಯುವಕರು ಸಾವನ್ನಪ್ಪಿದ್ದಾರೆ. ಅತಿಯಾದ ವೇಗದಿಂದ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Read Full Story
09:43 AM (IST) Feb 15

Karnataka News Live 15 February 2026 ನೌಟಂಕಿ ಪ್ರಿಯಾಂಕಾ-ಕಿಲಾಡಿ ಡೇವಿಡ್ ಲವ್ ಸ್ಟೋರಿ; ಗಂಡ ಫ್ಯಾಕ್ಟರಿಯಲ್ಲಿದ್ರೂ ಕಳ್ಳಾಟ

ಬೇಲೂರಿನ ಪ್ರಿಯಾಂಕಾ ನಾಪತ್ತೆ ಪ್ರಕರಣವು ರೋಚಕ ತಿರುವು ಪಡೆದಿದ್ದು, ಆತ್ಮಹ*ತ್ಯೆ ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. 

Read Full Story
09:03 AM (IST) Feb 15

Karnataka News Live 15 February 2026 1000 ದಿನ ಪೂರೈಸಿದ ಇದೊಂದು 'ಹೊಲಸು ಸರ್ಕಾರ' ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಗಜಿಣಗಿ ವಾಗ್ದಾಳಿ!

ಬಿಜೆಪಿ ಹಿರಿಯ ನಾಯಕ ರಮೇಶ ಜಿಗಜಿಣಗಿ ಅವರು, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಆಸೆಯನ್ನು ಪುನರುಚ್ಚರಿಸಿದ್ದಾರೆ. ವಿಜಯೇಂದ್ರ ಸೇರಿದಂತೆ ಯಾರೇ ಸಿಎಂ ಆದರೂ ತಮಗೆ ಅಸಮಾಧಾನವಿಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತವನ್ನು 'ಹೊಲಸು ಸರ್ಕಾರ' ಎಂದು ಟೀಕಿಸಿದರು. 

Read Full Story
08:38 AM (IST) Feb 15

Karnataka News Live 15 February 2026 30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ!

ಮದುವೆಗೆಂದು ಬಂದು ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ, ಕೊಲೆ ಶಂಕೆ ಹುಟ್ಟಿಸಿದ್ದಳು. ಆದರೆ, ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಲು ನಾಟಕವಾಡಿದ್ದು, ಆತನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ತನಿಖೆಯ ದಾರಿ ತಪ್ಪಿಸಲು ಕೆರೆಯ ಬಳಿ ತನ್ನ ವಸ್ತುಗಳನ್ನು ಬಿಟ್ಟು ಹೋಗಿದ್ದಳು.
Read Full Story
08:24 AM (IST) Feb 15

Karnataka News Live 15 February 2026 Hampi Utsav 2026 - ಸೈನಿಕರಿಗಾಗಿ ವೇಶ್ಯಾವಾಟಿಕೆ ಆರಂಭಿಸಿದ್ದ ವಿಜಯನಗರ ಅರಸರು; ಇಂಟರೆಸ್ಟಿಂಗ್ ಮಾಹಿತಿ

ಹಂಪಿ ಉತ್ಸವದ ವಿಚಾರಗೋಷ್ಠಿಯಲ್ಲಿ, ವಿಜಯನಗರ ಸಾಮ್ರಾಜ್ಯದ ವೈಭವದ ಹಿಂದೆ ಮಹಿಳೆಯರ ಶೋಷಣೆ, ವೇಶ್ಯಾವಾಟಿಕೆ  ಶ್ರಮಿಕರ ಇತಿಹಾಸವನ್ನು ಕಡೆಗಣಿಸಿದಂತಹ ಕರಾಳ ಸತ್ಯಗಳನ್ನು ವಿದ್ವಾಂಸರು ವಿಶ್ಲೇಷಿಸಿದರು. ರಾಜರ ಇತಿಹಾಸಕ್ಕೆ ಸೀಮಿತವಾಗದೆ, ಜನಪದ ನಾಯಕ ಕುಮಾರರಾಮನಂತಹ ಸಾಮಾನ್ಯರ ಕಥೆಗಳ ಮಹತ್ವ ಹೇಳಲಾಯ್ತು.

Read Full Story
08:02 AM (IST) Feb 15

Karnataka News Live 15 February 2026 ಇದು ಸಾವಿರ ಸುಳ್ಳಿನ ಸರ್ಕಾರ - '1000 ದಿನ- ಸಾವಿರ ಸಮಸ್ಯೆ’ ಪೋಸ್ಟರ್‌ ಬಿಡುಗಡೆ ಮಾಡಿದ ವಿಜಯೇಂದ್ರ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾವಿರ ದಿನಗಳ ಆಡಳಿತದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಸಾವಿರ ದಿನ-ಸಾವಿರ ಸಮಸ್ಯೆ' ಪೋಸ್ಟರ್ ಬಿಡುಗಡೆ ಮಾಡಿದರು.

Read Full Story
07:40 AM (IST) Feb 15

Karnataka News Live 15 February 2026 Siddaramaiah statue - 6.5 ಅಡಿ ಎತ್ತರದ ಸಿದ್ದರಾಮಯ್ಯ ಪ್ರತಿಮೆ ಅನಾವರಣ; ತಮ್ಮದೇ ಪ್ರತಿಮೆ ನೋಡಿ ಸಿದ್ದು ದಿಲ್‌ಖುಷ್!

ಹಾವೇರಿಯಲ್ಲಿ ನಡೆದ ಭೂ ಗ್ಯಾರಂಟಿ ಸಮಾವೇಶದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ 6.5 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಕಾಂಗ್ರೆಸ್ ಸರ್ಕಾರದ 1000 ದಿನಗಳ ಪೂರೈಕೆ ಹಿನ್ನೆಲೆ ಗೊಟಗೋಡಿಯ ರಾಕ್ ಗಾರ್ಡನ್‌ನವರು ತಯಾರಿಸಿದ ಈ ಪ್ರತಿಮೆಯನ್ನು ಕಂಡು ಸಂತಸ

Read Full Story