- Home
- Karnataka Districts
- 30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ!
30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ!
ಮದುವೆಗೆಂದು ಬಂದು ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ, ಕೊಲೆ ಶಂಕೆ ಹುಟ್ಟಿಸಿದ್ದಳು. ಆದರೆ, ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಲು ನಾಟಕವಾಡಿದ್ದು, ಆತನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ತನಿಖೆಯ ದಾರಿ ತಪ್ಪಿಸಲು ಕೆರೆಯ ಬಳಿ ತನ್ನ ವಸ್ತುಗಳನ್ನು ಬಿಟ್ಟು ಹೋಗಿದ್ದಳು.

ಹಾಸನ ಮಹಿಳೆ ಮಿಸ್ಸಿಂಗ್
ಮದುವೆಗೆ ಬಂದು ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಮಹಿಳೆ ಪ್ರಿಯಕರನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರ ತನಿಖೆ ಮಾರ್ಗ ತಪ್ಪಿಸುವ ಉದ್ದೇಶದಿಂದ ಕೆರೆ ಬಳಿ ತನ್ನ ಬಟ್ಟೆಗಳನ್ನು ಬಿಟ್ಟು ಮಹಿಳೆ ಎಸ್ಕೇಪ್ ಆಗಿದ್ದಳು. ಇದೀಗ ಎಸ್ಕೇಪ್ ಹಿಂದೆ ಅಕ್ರಮ ಸಂಬಂಧವಿರೋದು ಬೆಳಕಿಗೆ ಬಂದಿದೆ. ಕೆರೆಯೊಂದರ ಬಳಿ ಆಕೆಯ ಒಳ ಉಡುಪು, ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾದ ಹಿನ್ನೆಲೆ ಆರಂಭದಲ್ಲಿ ಪೊಲೀಸರು ಕೊ*ಲೆ ಶಂಕೆ ವ್ಯಕ್ತಪಡಿಸಿದ್ದರು.
ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮೊಬೈಲ್ ಆಫ್
ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ (29) ಫೆಬ್ರವರಿ 12ರಂದು ಚಿಕ್ಕಮಗಳೂರಿನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದಳು. ಮದುವೆ ನಂತರ ಬೇಲೂರಿಗೆ ತೆರಳಿ ತಾಯಿಯನ್ನು ಭೇಟಿಯಾಗಿದ್ದಳು. ತಾಯಿ ಮನೆಯಿಂದ ಬಳಿಕ ಪ್ರಿಯಾಂಕಾ ಕಾಣೆಯಾಗಿದ್ದಳು. ಬೇಲೂರು ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ರಾತ್ರಿ ಸುಮಾರು 8 ಗಂಟೆಗೆ ಮೊಬೈಲ್ ಆಫ್ ಮಾಡಿದ್ದಾಳೆ.
ದೂರು ದಾಖಲಿಸಿದ್ದ ಕುಟುಂಬಸ್ಥರು
ಮೊಬೈಲ್ ಆಫ್ ಮಾಡುವ ಮುನ್ನ ರಾತ್ರಿ 7.30ಕ್ಕೆ ಕುಟುಂಬದ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕ, “ಯಾರದೋ ಜೊತೆಗಿದ್ದೇನೆ” ಎಂದು ಹೇಳಿ ಆತಂಕಕಾರಿ ರೀತಿಯಲ್ಲಿ ಫೋನ್ ಕಟ್ ಮಾಡಿದ್ದಳು. ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕುಟುಂಬದವರು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆತಂಕಗೊಂಡ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಿಯಕರ ಡೇವಿಡ್ ಮನೆಯಲ್ಲಿದ್ದ ಪ್ರಿಯಾಂಕ
ಇದಾದ ಬಳಿಕ ರಾಷ್ಟ್ರೀಯ ಹೆದ್ದಾರಿ 373ರ ಕೆರೆ ಸಮೀಪ ಪ್ರಿಯಾಂಕ ಅವರ ಚಪ್ಪಲಿ, ಒಳಉಡುಪು ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು. ಸುಮಾರು 30 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಧರಿಸಿದ್ದ ಪ್ರಿಯಾಂಕ ಕಾಣೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಪ್ರಿಯಾಂಕ ತನ್ನ ಪ್ರಿಯಕರ ಡೇವಿಡ್ ಮನೆಯಲ್ಲಿರೋದನ್ನು ಪತ್ತೆ ಮಾಡಿದ್ದಾರೆ.
ಇಬ್ಬರ ಬಂಧನ
ಪ್ರಿಯಾಂಕಾ ಪ್ರಿಯಕರ ಆಕೆಯ ಗಂಡನ ಸಹೋದ್ಯೋಗಿ ಎಂದು ತಿಳಿದು ಬಂದಿದೆ. ಗಂಡನ ಗೆಳೆಯನೊಂದಿಗೆ ಪ್ರಿಯಾಂಕಾ ಅಕ್ರಮ ಸಂಬಂಧ ಹೊಂದಿದ್ದಳು. ಇನಿಯನೊಂದಿಗೆ ಎಸ್ಕೇಪ್ ಆಗುವ ಉದ್ದೇಶದಿಂದ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣ ಧರಿಸಿಕೊಂಡು ಬಂದಿದ್ದಳು. ಮದುವೆ ಬಳಿಕ ಪ್ರಿಯಕರನೊಂದಿಗೆ ಹೋಗಿದ್ದ ಪ್ರಿಯಾಂಕಾ, ತಾನು ಸತ್ತಿದ್ದೇನೆ ಎಂಬು ನಂಬಿಸಲು ಕೆರೆ ಬಳಿ ಬಟ್ಟೆಗಳನ್ನು ಬಿಟ್ಟಿದ್ದಳು. ಇದೀಗ ಇಬ್ಬರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಾಗಿರುವ ಬೇಲೂರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಕಾಲೇಜು ವಾಟ್ಸಪ್ ಗ್ರೂಪ್ಗೆ ತನ್ನದೇ ಬೆತ್ತಲೆ ವಿಡಿಯೋ, ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!
ಸಂಶಯಕ್ಕೆ ಕಾರಣವಾಗಿದ್ದು ಏನು?
ಘಟನೆ ಸ್ಥಳದಲ್ಲಿ ಮೊದಲ ದಿನ ಯಾವುದೇ ವಸ್ತುಗಳು ಕಾಣಿಸದಿದ್ದರೆ, ಎರಡನೇ ದಿನ ಬಟ್ಟೆಗಳು ಹಾಗೂ ಬ್ಯಾಗ್ ಸಿಕ್ಕಿರುವುದು ಸಂಶಯಕ್ಕೆ ಕಾರಣವಾಗಿತ್ತು. ಸ್ವತಃ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ, ಎಎಸ್ಪಿ ಶ್ರೀನಿಧಿ, ಪೊಲೀಸ್ ಅಧಿಕಾರಿಗಳು, ಶ್ವಾನ ದಳ ಹಾಗೂ ಸೂಕ್ಷ್ಮ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ರೈಲು ಲೇಟ್ ಆಗಿದ್ದಕ್ಕೆ ಪ್ಲಾಟ್ಫಾರಂನಲ್ಲಿಯೇ ರಂಗಿನಾಟ; ಬೆಡ್ಶೀಟ್ ಹೊದ್ದಿಕೊಂಡು ಸರಸ

