08:20 AM (IST) Mar 11

Karnataka News Live 11 March 2026ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ - ಗೃಹಸಚಿವ ಪರಮೇಶ್ವರ್ ಭರವಸೆ

ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ನೀಡುವ ಮಾಸಿಕ ಪಿಂಚಣಿಯನ್ನು 10 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಇದರೊಂದಿಗೆ, ಸಂತ್ರಸ್ತೆಯರಿಗೆ ಉಚಿತ ಮನೆ, ಸಾಲವನ್ನು ಅನುದಾನವಾಗಿ ಪರಿವರ್ತಿಸುವುದ.. ಮಹತ್ವದ ಕ್ರಮ ಘೋಷಿಸಲಾಗಿದೆ.

Read Full Story
08:01 AM (IST) Mar 11

Karnataka News Live 11 March 2026'ಸುಮ್ಮನೆ ಬಿಟ್ರೆ ಚಾಳಿ ಮುಂದುವರಿಸ್ತಾರೆ' - ದರ್ಶನ್‌ ಫ್ಯಾನ್ಸ್‌ ವಿರುದ್ಧ ದೂರು, ಕೋರ್ಟಲ್ಲಿ ಸಾಕ್ಷ್ಯ ನುಡಿದ ರಮ್ಯಾ

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾ೧ಚಾರ ಹಾಗೂ ಜೀವ ಬೆದರಿಕೆ ಹಾಕಿದ ನಟ ದರ್ಶನ್‌ ಅಭಿಮಾನಿಗಳ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ನಟಿ ರಮ್ಯಾ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ದಾಖಲಿಸಿದ್ದಾರೆ. ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕುವವರಿಗೆ ಭಯ ಬರಬೇಕು ಹೀಗಾಗಿ ಈ ಕೇಸ್ ಎಂದಿದ್ದಾರೆ.

Read Full Story
07:53 AM (IST) Mar 11

Karnataka News Live 11 March 2026ಗುಟ್ಕಾ, ಪಾನ್ ತಿಂದು ಹಲ್ಲಿನ ಬಣ್ಣ ಕೊಳಕಾಗಿದೆಯಾ? ಹಲ್ಲು ಫಳಫಳ ಹೊಳೆಯಲು ಮಾಡುವ ಟಿಪ್ಸ್

ಗುಟ್ಕಾ, ಪಾನ್ ಮಸಾಲಾದಿಂದ ಉಂಟಾದ ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ಈ ಲೇಖನವು ಪರಿಣಾಮಕಾರಿ ಮನೆಮದ್ದನ್ನು ವಿವರಿಸುತ್ತದೆ. ಮೂರು ವಸ್ತು ಬಳಸಿ ತಯಾರಿಸಿದ ಮಿಶ್ರಣವನ್ನು ಏಳು ದಿನಗಳ ಕಾಲ ಬಳಸುವುದರಿಂದ ಹಲ್ಲುಗಳನ್ನು ಮತ್ತೆ ಫಳಫಳ ಹೊಳೆಯುವಂತೆ ಮಾಡಬಹುದು.

Read Full Story
07:23 AM (IST) Mar 11

Karnataka News Live 11 March 2026ರಸ್ತೆ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ಕಸ ಬಳಕೆ

ನಗರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಕಸವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಸ್ವಚ್ಛ ಸರ್ವೇಕ್ಷಣಾ 2025-26 ಅಂಗವಾಗಿ ಮಂಗಳವಾರ ಅಂಜನಾಪುರ ವಾರ್ಡ್‌ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರೊಂದಿಗೆ ‘ಚಹಾ ಸಂವಾದ ನಡೆಸಿ ಮಾತನಾಡಿದರು

Read Full Story
07:16 AM (IST) Mar 11

Karnataka News Live 11 March 2026Bengaluru drug bust - ಡ್ರಗ್ಸ್ ಮಾಫಿಯಾ ವಿರುದ್ಧ ನಿಲ್ಲದಬೇಟೆ - ಐವರು ಪೆಡ್ಲರ್‌ಗಳ ಬಂಧನ

ಬೆಂಗಳೂರಿನಲ್ಲಿ ಪೊಲೀಸರು ಮತ್ತು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಐವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ನಗರದ ಇತರೆಡೆ ನಡೆದ ದಾಳಿಗಳಲ್ಲಿ ಒಟ್ಟು 5.73 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಗಾಂಜಾವನ್ನು ವಶಕ್ಕೆ

Read Full Story
07:12 AM (IST) Mar 11

Karnataka News Live 11 March 2026ಗೌಡ್ರ ಬಲವಂತಕ್ಕೆ ವಿತ್ತ ಸಚಿವನಾಗಿದ್ದೆ - ನಂಬಿಕಸ್ಥ ಬೇಕು ಅಂತ ವಿತ್ತ ಸಚಿವ ಮಾಡಿದ್ರು - ಸಿದ್ದು

1994ರಲ್ಲಿ ದೇವೇಗೌಡರು ತಮ್ಮನ್ನು ಬಲವಂತವಾಗಿ ವಿತ್ತ ಸಚಿವರನ್ನಾಗಿ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಸ್ಮರಿಸಿಕೊಂಡರು. ತಮಗೆ ಕಂದಾಯ ಇಲಾಖೆಯ ಆಸಕ್ತಿ ಇದ್ದರೂ, ನಂಬಿಕಸ್ಥ ವ್ಯಕ್ತಿ ಬೇಕೆಂಬ ಕಾರಣಕ್ಕೆ ದೇವೇಗೌಡರು ಆರ್ಥಿಕ ಇಲಾಖೆಯನ್ನು ನೀಡಿದರೆಂದು ಅವರು ವಿವರಿಸಿದರು.
Read Full Story