*   ಮೂರು ವರ್ಷಗಳ ಪ್ರಶಸ್ತಿ ಘೋಷಣೆ*   ಇಂದು ಮಾಜಿ ಸಿಎಂ ಡಿ. ದೇವರಾಜ್ ಅರಸು ಜನ್ಮದಿನಾಚರಣೆ *   ನಾಡಿನ ಮೂವರು ಸಾಧಕರಿಗೆ ಪ್ರಶಸ್ತಿ 

ಬೆಂಗಳೂರು(ಆ.19): ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದೇವರಾಜು ಅರಸು ಪ್ರಶಸ್ತಿ ಘೋಷಣೆ ಮಾಡಿದೆ. 

Add Asianetnews Kannada as a Preferred SourcegooglePreferred

ಇಂದು(ಗುರುವಾರ) ನಗರದಲ್ಲಿ ಮಾಹಿತಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಮೂರು ವರ್ಷಗಳ ಪ್ರಶಸ್ತಿಯನ್ನ ಘೋಷಿಸಿದ್ದಾರೆ.

'ದೇವರಾಜ ಅರಸು ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ'

* 2019-20 ನೇ ಸಾಲಿನ ದೇವರಾಜು ಅರಸು ಪ್ರಶಸ್ತಿ - ಬಸವಪ್ರಭು ಲಖನಗೌಡ ಪಾಟೀಲ್- ಅಥಣಿ, ಬೆಳಗಾವಿ ಜಿಲ್ಲೆ
* 2020-21 ನೇ ಸಾಲಿನ ದೇವರಾಜು ಅರಸು ಪ್ರಶಸ್ತಿ - ಎಸ್ ಜಿ ಸುಶೀಲಮ್ಮ- ಸುಮಂಗಲಿ ಸೇವಾಶ್ರಮ, ಬೆಂಗಳೂರು
* 2021-22 ನೇ ಸಾಲಿನ ದೇವರಾಜು ಅರಸು ಪ್ರಶಸ್ತಿ - ಕೆ ಭಾಸ್ಕರ್ ದಾಸ್ ಎಕ್ಕಾರು, ಕರ್ನಾಟಕ ಅಲೆಮಾರಿ /ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಬೆಂಗಳೂರು