ಶೈಲಜಾ, ಸತ್ಯನಾರಾಯಣಗೆ ಕಸಾಪ ದತ್ತಿ ಪ್ರಶಸ್ತಿ
20ಕ್ಕೂ ಹೆಚ್ಚು ಲೇಖಕರಿಗೆ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟ| 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ ಕನ್ನಡ ಸಾಹಿತ್ಯ ಪರಿಷತ್ತು|
ಬೆಂಗಳೂರು(ಸೆ.12): ಲೇಖಕಿ ಡಾ.ಬಿ.ಎಸ್.ಶೈಲಜಾ ಅವರ ‘ಆಕಾಶದಲ್ಲಿ ಏನಿದೆ? ಏಕಿದೆ?’ ಕೃತಿಗೆ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ, ಸಾಹಿತಿ ಕೆ. ಸತ್ಯನಾರಾಯಣ ಅವರ ‘ಲೈಂಗಿಕ ಜಾತಕ’ ಕೃತಿಗೆ ಭಾರತೀಸುತ ಸ್ಮಾರಕ ಪ್ರಶಸ್ತಿ ಸೇರಿದಂತೆ 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ಪ್ರಶಸ್ತಿಯ ಹೆಸರು, ಲೇಖಕ ಹಾಗೂ ಕೃತಿಯ ಹೆಸರು ಕ್ರಮವಾಗಿ ಈ ರೀತಿ ಇದೆ.
ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ- ಬಿ.ಪಿ.ನ್ಯಾಮಗೌಡರ- ‘ವೀರಾನ್ವಯ’, ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನಲ್ಲಿ ನೀಡುವ ಎಲ್.ಬಸವರಾಜು ದತ್ತಿ ಪ್ರಶಸ್ತಿ-ಪೊ›. ಎಚ್.ಟಿ.ಪೋತೆ- ‘ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕ ಪ್ರೀತಿ’, ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ- ಡಾ.ಬಸು ಬೇವಿನಗಿಡದ- ‘ನೆರಳಿಲ್ಲದ ಮರ’,
ವಿ.ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ- ಪ್ರೊ.ವಸಂತ ಕುಷ್ಠಗಿ- ‘ಕಾಯಕ ಧರ್ಮ’, ಭಾರತಿ ಮೋಹನ ಕೋಟಿ ದತ್ತಿ ಪ್ರಶಸ್ತಿ- ಪೊ›.ಕೆ.ಎಂ. ಸೀತಾರಾಮಯ್ಯ - ‘ಪ್ಯಾರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್ ರೀಗೇಯ್್ನಡ್’, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ, ಡಾ.ಮದನಕೇಸರಿ ಜೈನ ಪ್ರಶಸ್ತಿ- ಡಾ.ನೀರಜಾ ನಾಗೇಂದ್ರಕುಮಾರ್- ‘ಝಾಣಜ್ಝಯಣ-ಪಾಹುಡ.’
ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ: ಸರಕಾರಕ್ಕೆ ಕಸಾಪ ಪತ್ರ
ಕಾದಂಬರಿ ಪ್ರಕಾರದಲ್ಲಿ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ-ಬಿ.ಆರ್. ಪೋಲೀಸ್ ಪಾಟೀಲ್- ‘ಮಹಾವೃಕ್ಷ’, ಸಣ್ಣಕತೆ ವಿಭಾಗದಲ್ಲಿ ಕೃಷ್ಣಮೂರ್ತಿ ಚಂದರ್- ‘ಅಸ್ಮಿತೆ’, ಮಕ್ಕಳ ಸಾಹಿತ್ಯ ಕೃತಿ ಪ್ರಕಾರದಲ್ಲಿ ವಿಶಾಲಾ ಆರಾಧ್ಯ ಅವರ ‘ಬೊಂಬಾಯಿ ಮಿಠಾಯಿ’, ಅನುವಾದಿತ ಕೃತಿ ಪ್ರಕಾರದಲ್ಲಿ ಕೆ.ಶಾರದಾ ಅವರ ‘ದ್ರೌಪದಿ’ ಕೃತಿಗಳು ಆಯ್ಕೆಯಾಗಿದೆ.
ಡಿ. ಮಾಣಿಕರಾವ್ ಸ್ಮರಣಾರ್ಥ ನೀಡುವ ಹಾಸ್ಯ ಸಾಹಿತ್ಯ ದತ್ತಿಗೆ ವಿ.ವಿ. ಗೋಪಾಲ್- ‘ಗುಂಡನ ಅವಾಂತರ’, ಡಾ.ಎ.ಎಸ್. ಧರಣೇಂದ್ರಯ್ಯ- ಮನೋಜ್ಞಾನ ದತ್ತಿ ಪ್ರಶಸ್ತಿ- ಗಣೇಶ್ರಾವ್ ನಾಡಿಗೇರ್- ‘ಮನದೊಳಗಿನ ಮಾತು’, ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ಪ್ರಶಸ್ತಿ-ದೀಪ್ತಿ ಭದ್ರಾವತಿ- ‘ಗೀರು’ ಕೃತಿ, ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ- ಸಮನ್ವಿತ ಪ್ರಕಾಶನದ ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕೃತಿಗೆ ನೀಡಲಾಗಿದೆ.
ಗುಬ್ಬಿ ಸೋಲೂರು ಮುರುಘಾರಾಧ್ಯ ದತ್ತಿ ಪ್ರಶಸ್ತಿ- ಸಂತೋಷಕುಮಾರ ಮೆಹೆಂದಳೆ ಅವರ ‘ಎಂಟೆಬೆ..!’, ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ- ಸುಧಾ ಆಡುಕಳ- ‘ಬಕುಲದ ಬಾಗಿಲಿನಿಂದ’, ಶ್ರೀಮತಿ ಗಂಗಮ್ಮ ಶ್ರೀ ಬಿ.ಶಿವಣ್ಣ ದತ್ತಿ ಪ್ರಶಸ್ತಿ- ಡಾ.ಜಿ.ರಾಮಕೃಷ್ಣ- ‘ವರ್ತಮಾನ’, ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ಪ್ರಶಸ್ತಿ- ಲಕ್ಷ್ಮೀದೇವಿ ಕಮ್ಮಾರರ ‘ಯಶಸ್ಸಿನ ದಾರಿ ದೀಪಗಳು’, ಪಳಕಳ ಸೀತಾರಾಮಭಟ್ಟದತ್ತಿ ಪ್ರಶಸ್ತಿ- ಆಶಾ ರಘು- ‘ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು’ ಕೃತಿ, ಜಯಲಕ್ಷ್ಮಿ ಮತ್ತು ಬಾಪು ರಾಮಣ್ಣ ದತ್ತಿ ಪ್ರಶಸ್ತಿ- ವಿದ್ಯಾಧರ ಮುತಾಲಿಕ ದೇಸಾಯಿ ಅವರ ‘ಹಿಮ್ಮುಖ ಹರಿದ ನದಿ’ ಕೃತಿಗೆ ನೀಡಲಾಗಿದೆ.