Asianet Suvarna News Asianet Suvarna News

2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪ್ರಾಣೇಶ್ ಸೇರಿದಂತೆ 66 ಸಾಧಕರು ಆಯ್ಕೆ

* 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
 * ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ
 * ಒಟ್ಟು 66 ಸಾಧಕರನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

kannada Rajyotsava award 2021 announced By Karnataka Govt rbj
Author
Bengaluru, First Published Oct 31, 2021, 5:20 PM IST

ಬೆಂಗಳೂರು, (ಅ.31):  2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಒಟ್ಟು 66 ಸಾಧಕರನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 66 ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ವಿಶೇಷವಗಿದೆ. ನಟ ದೇವರಾಜ್, ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ ಸೇರಿದಂತೆ ವಿವಿಧ ಕ್ಷೇತ್ರದ 66 ಸಾಧಕರಿಗೆ ರಾಜ್ಯ ಸರ್ಕಾರ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಪ್ರಶಸ್ತಿ ಲಭಿಸಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ರಾಜ್ಯೋತ್ಸವಕ್ಕೆ 500 ಜನರ ಮಿತಿ 

* ಸಾಹಿತ್ಯ ಕ್ಷೇತ್ರದಲ್ಲಿ 6 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
 ಮಹದೇವ ಶಂಕನಪುರ (ಚಾಮರಾಜನಗರ)
 ಪ್ರೊ.ಡಿ.ಟಿ.ರಂಗಸ್ವಾಮಿ (ಚಿತ್ರದುರ್ಗ)
ಜಯಲಕ್ಷ್ಮೀ ಮಂಗಳಮೂರ್ತಿ (ರಾಯಚೂರು)
ಅಜ್ಜಂಪುರ ಮಂಜುನಾಥ್​ (ಚಿಕ್ಕಮಗಳೂರು)
ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ (ವಿಜಯಪುರ)
ಸಿದ್ದಪ್ಪ ಬಿದರಿ (ಬಾಗಲಕೋಟೆಯ)

* ರಂಗಭೂಮಿ ಕ್ಷೇತ್ರ
ಫಕೀರವ್ವ ರಾಮಪ್ಪ ಕೊಡಾಯಿ (ಹಾವೇರಿ)
ಪ್ರಕಾಶ್​ ಬೆಳವಾಡಿ (ಚಿಕ್ಕಮಗಳೂರು)
ರಮೇಶ್​ ಗೌಡ ಪಾಟೀಲ್​ ೯ಬಳ್ಳಾರಿ)
ಎನ್​.ಮಲ್ಲೇಶಯ್ಯ (ರಾಮನಗರ)
ಸಾವಿತ್ರಿ ಗೌಡರ್​​(ಗದಗ )

* ಜಾನಪದ ಕ್ಷೇತ್ರ
ಆರ್​.ಬಿ.ನಾಯಕ (ವಿಜಯಪುರ )
ಗೌರಮ್ಮ ಹುಚ್ಚಪ್ಪ ಮಾಸ್ತರ್​ (ಶಿವಮೊಗ್ಗ )
ದುರ್ಗಪ್ಪ ಚೆನ್ನದಾಸರ​ (ಬಳ್ಳಾರಿ)
ಬನ್ನಂಜೆ ಬಾಬು ಅಮೀನ್ (ಉಡುಪಿ)
ಮಲ್ಲಿಕಾರ್ಜುನ ರಾಚಪ್ಪ ಮುದಕವಿ (ಬಾಗಲಕೋಟೆ)
ವೆಂಕಪ್ಪ ಗೋವಿಂದಪ್ಪ ಭಜಂತ್ರಿ (ಧಾರವಾಡ)
ಮಹಾರುದ್ರಪ್ಪ ವೀರಪ್ಪ ಇಟಗಿ (ಹಾವೇರಿ)

* ಸಂಗೀತ ಕ್ಷೇತ್ರ
ಸಿ.ತ್ಯಾಗರಾಜು (ನಾದಸ್ವರ) ಕೋಲಾರ
ಹೆರಾಲ್ಡ್​ ಸಿರಿಲ್​ ಡಿಸೋಜಾ ದಕ್ಷಿಣ ಕನ್ನಡ 

ಶಿಲ್ಪಕಲಾ ಕ್ಷೇತ್ರ
ಡಾ.ಜಿ.ಜ್ಞಾನಾನಂದ (ಚಿಕ್ಕಬಳ್ಳಾಪುರ)
ವೆಂಕಣ್ಣ ಚಿತ್ರಗಾರ (ಕೊಪ್ಪಳ)

ಸಂಕೀರ್ಣ ಕ್ಷೇತ್ರ
 ಡಾ.ಬಿ.ಅಂಬಣ್ಣ (ವಿಜಯನಗರ)
ಕ್ಯಾ.ರಾಜಾರಾವ್(ಬಳ್ಳಾರಿ)​
ಗಂಗಾವತಿ ಪ್ರಾಣೇಶ್​ (ಕೊಪ್ಪಳ)

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ
ಬೆಂಗಳೂರಿನ ಡಾ.ಹೆಚ್​.ಎಸ್​.ಸಾವಿತ್ರಿ
ಬೆಂಗಳೂರಿನ ಪ್ರೊ.ಜಿ.ಯು.ಕುಲಕರ್ಣಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಸಮಾಜಸೇವೆ ಕ್ಷೇತ್ರ
ಬಾಗಲಕೋಟೆಯ ಸೂಲಗಿತ್ತಿ ಯಮುನವ್ವ(ಸಾಲಮಂಟಪಿ)
ಮೈಸೂರು ಜಿಲ್ಲೆಯ ಮದಲಿ ಮಾದಯ್ಯ
ಬೆಂಗಳೂರಿನ ಮುನಿಯಪ್ಪ ದೊಮ್ಮಲೂರು
ಬೆಳಗಾವಿ ಜಿಲ್ಲೆಯ ಬಿ.ಎಲ್​.ಪಾಟೀಲ್​ ಅಥಣಿ
ಮಂಡ್ಯ ಜಿಲ್ಲೆಯ ಡಾ.ಜೆ.ಎನ್.ರಾಮಕೃಷ್ಣೇಗೌಡಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ವೈದ್ಯಕೀಯ ಕ್ಷೇತ್ರ
ದಾವಣಗೆರೆ ಜಿಲ್ಲೆಯ ಡಾ.ಸುಲ್ತಾನ್​ ಬಿ. ಜಗಳೂರು
ಧಾರವಾಡ ಜಿಲ್ಲೆಯ ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ)
ಬೆಂಗಳೂರಿನ ಡಾ.ಎ.ಆರ್​.ಪ್ರದೀಪ್ ​(ದಂತ ವೈದ್ಯಕೀಯ)
ದಕ್ಷಿಣ ಕನ್ನಡ ಜಿಲ್ಲೆಯ ಡಾ.ಸುರೇಶ್​ ರಾವ್
ಧಾರವಾಡದ ಡಾ.ಶಿವನಗೌಡ ರಾಮನಗೌಡರ್​​
ಬೆಂಗಳೂರಿನ ಡಾ.ಸುದರ್ಶನ್​​ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕ್ರೀಡಾ ಕ್ಷೇತ್ರ
ರೋಹನ್​ ಭೋಪಣ್ಣ (ಕೊಡಗು)
ಕೆ.ಗೋಪಿನಾಥ್ ​​(ವಿಶೇಷ ಚೇತನ)
ರೋಹಿತ್​ ಕುಮಾರ್​ ಕಟೀಲು (ಉಡುಪಿ )
ಎ.ನಾಗರಾಜು (ಕಬಡ್ಡಿ) ಬೆಂಗಳೂರು.

ಕೃಷಿ
ಡಾ.ಸಿ ನಾಗರಾಜ್ (ಬೆಂಗಳೂರು ಗ್ರಾಮಾಂತರ)
ಗುರುಲಿಂಗಪ್ಪ ಮೇಲ್ದೊಡ್ಡಿ (ಬೀದರ್)
ಶಂಕರಪ್ಪ ಅಮ್ಮನಘಟ್ಟ (ತುಮಕೂರು)

ಪರಿಸರ
ಮಹಾದೇವ ವೇಳಿಪಾ (ಉತ್ತರ ಕನ್ನಡ)
ಬೈಕಂಪಾಡಿ ರಾಮಚಂದ್ರ (ದಕ್ಷಿಣ ಕನ್ನಡ)

ಪತ್ರಿಕೋದ್ಯಮ
ಅಟ್ನಂ ಅನಂತ ಪದ್ಮನಾಭ (ಮೈಸೂರು)
ಯು.ಬಿ.ರಾಜಲಕ್ಷ್ಮೀ (ಉಡುಪಿ)

ನ್ಯಾಯಾಂಗ ಕ್ಷೇತ್ರ
ಸಿ.ವಿ.ಕೇಶವ ಮೂರ್ತಿ (ಮೈಸೂರು)

ಆಡಳಿತ ಕ್ಷೇತ್ರ
ಹೆಚ್‌.ಆರ್.ಕಸ್ತೂರಿ ರಂಗನ್ (ಹಾಸನ)

ಸೈನಿಕ
ನವೀನ್ ನಾಗಪ್ಪ (ಹಾವೇರಿ)

ಯಕ್ಷಗಾನ
ಗೋಪಾಲಾಚಾರ್ಯ (ಶಿವಮೊಗ್ಗ)

ಹೊರನಾಡು ಕನ್ನಡಿಗ
ಡಾ ಸುನಿತಾ ಶೆಟ್ಟ -ಮುಂಬೈ
ಚಂದ್ರಶೇಖರ್ ಪಾಲ್ವಾಡಿ- ಮುಂಬೈ
ಡಾ.ಸಿದ್ದರಾಮೇಶ್ವರ ಕಂಟಿಕೆರ್
ಪ್ರವೀಣ್ ಶೆಟ್ಟಿ- ದುಬೈ

ಪೌರ ಕಾರ್ಮಿಕ
ರತ್ಮಮ್ಮ ಶಿವಪ್ಪ ಬಬಲಾದ (ಯಾದಗಿರಿ)

ಹೈದ್ರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು
ಮಹದೇವಪ್ಪ ಕಡೆಚೂರು (ಕಲಬುರಗಿ)

ಯೋಗ
ಭ.ಮ. ಶ್ರೀಕಂಠ (ಶಿವಮೊಗ್ಗ)
ಡಾ. ರಾಘವೇಂದ್ರ ಶೆಣೈ (ಬೆಂಗಳೂರು)

ಉದ್ಯಮ 
ಶ್ಯಾಮರಾಜು (ಬೆಂಗಳೂರು)

10 ಸಂಘ ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ
ಗದಗ ಜಿಲ್ಲೆಯ ವೀರೇಶ್ವರ ಪುಣ್ಯಾಶ್ಯಮ ಅಂಧ ಮಕ್ಕಳ ಶಾಲೆ
ದಾವಣಗೆರೆ ಜಿಲ್ಲೆ ಕರ್ನಾಟಕ ಹಿಮೋ ಫೀಲಿಯಾ ಸೊಸೈಟಿ
ಕಲಬುರಗಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಾಮಕೃಷ್ಣಾಶ್ರಮ
ಹುಬ್ಬಳ್ಳಿಯ ಆಲ್​ ಇಂಡಿಯಾ ಜೈನ್​ ಯುತ್ ಫೆಡರೇಷನ್
ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಪ್ರಶಸ್ತಿ ಘೋಷಿಸಲಾಗಿದೆ.

ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ಪದಕ
ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ಪದಕ ನೀಡಲಾಗಿದೆ.  ವಿಶೇಷ ಕಾರ್ಯಾಚರಣೆಗೆ ನೀಡುವ ಕೇಂದ್ರ ಗೃಹಮಂತ್ರಿ ಪದಕ ಕರ್ನಾಟಕ ರಾಜ್ಯದ 11 ಮಂದಿ ಪೊಲೀಸರಿಗೆ ಲಭಿಸಿದೆ.

 ಐಪಿಎಸ್ ಅಧಿಕಾರಿ ಸಂತೋಷ್ ಬಾಬುಗೆ ಪದಕ ಘೋಷಣೆ ಮಾಡಲಾಗಿದೆ. ಇನ್ಸ್​ಪೆಕ್ಟರ್​ಗಳಾದ ಜಿ.ಬಾಲರಾಜ್, ಪಿ.ಶಶಿಕುಮಾರ್​, ಹೆಚ್.ವಿ. ಸುದರ್ಶನ್, ಎಸ್.ಆರ್. ಶ್ರೀಧರ್​ಗೆ ಪದಕ ದೊರೆತಿದೆ. 

ಇನ್ಸ್ ಪೆಕ್ಟರ್ ಗಳಾದ ಜಿ. ಬಾಲರಾಜ್ ಮತ್ತು ಪಿ. ಶಶಿಕುಮಾರ್, ಹೆಚ್.ವಿ. ಸುದರ್ಶನ್, ಎಸ್.ಆರ್. ಶ್ರೀಧರ್ ಅವರು ಪದಕ ಪಡೆದುಕೊಂಡಿದ್ದಾರೆ.

ಎಎಸ್‌ಐಗಳಾದ ಶೌಕತ್ ಅಲಿ, ಫಕ್ರುದ್ದೀನ್, ಅಕ್ಬರ್, ಸೋಮಶೇಖರ್, ಕೃಷ್ಣ ದೇವೇಗೌಡ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

Follow Us:
Download App:
  • android
  • ios