Asianet Suvarna News Asianet Suvarna News

ಅರ್ಜಿ ಹಾಕಿದ 24 ತಾಸಿನೊಳಗೇ ವಿದ್ಯುತ್‌ ಸಂಪರ್ಕ

  • ವಿದ್ಯುತ್‌ ಸೇವೆಗಳನ್ನು ಗ್ರಾಹಕಸ್ನೇಹಿಯಾಗಿಸುವ ‘ಜನಸ್ನೇಹಿ ವಿದ್ಯುತ್‌ ಸೇವೆಗಳು’ ಎಂಬ 100 ದಿನಗಳ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ.
  • ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಗೃಹ, ವಾಣಿಜ್ಯ ಚಟುವಟಿಕೆಗಳಿಗೆ ವಿದ್ಯುತ್‌ ಸಂಪರ್ಕ
get Electricity Connection in 24 of applying snr
Author
Bengaluru, First Published Oct 28, 2021, 9:23 AM IST

 ಬೆಂಗಳೂರು (ಅ.28):  ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಗೃಹ, ವಾಣಿಜ್ಯ ಚಟುವಟಿಕೆಗಳಿಗೆ ವಿದ್ಯುತ್‌ (Electricity) ಸಂಪರ್ಕ ಕಲ್ಪಿಸುವುದು ಸೇರಿದಂತೆ ಇಂಧನ ಇಲಾಖೆಯ ವಿದ್ಯುತ್‌  ಸೇವೆಗಳನ್ನು ಗ್ರಾಹಕ ಸ್ನೇಹಿಯಾಗಿಸುವ ‘ಜನಸ್ನೇಹಿ ವಿದ್ಯುತ್‌ ಸೇವೆಗಳು’ ಎಂಬ 100 ದಿನಗಳ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ.

ಇಂಧನ ಸಚಿವ ಸುನೀಲ್‌ ಕುಮಾರ್‌ (Sunil Kumar) ಅವರ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ಸಂಜೆ 5 ಗಂಟೆಗೆ ಬೆಂಗಳೂರಿನ (Bengaluru) ರೇಸ್‌ಕೋರ್ಸ್‌ (Race Corse) ರಸ್ತೆಯ ಪಶ್ಚಿಮ 4ನೇ ಉಪವಿಭಾಗದ ಕಚೇರಿಯಲ್ಲಿ ಚಾಲನೆ ನೀಡಲಿದ್ದಾರೆ. ಚಾಲನೆ ನೀಡಿದ ಕ್ಷಣದಿಂದಲೇ ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು (Electricity) ಕಂಪನಿಗಳಿಗೂ ಅನ್ವಯಿಸುವಂತೆ ಈ ವಿಶೇಷ ಕಾರ್ಯಕ್ರಮ ಜಾರಿಯಾಗಲಿದೆ.

ಕಲ್ಲಿದ್ದಲು ಪೂರೈಕೆ ಹೆಚ್ಚಳ: ಒಂದೇ ದಿನದಲ್ಲಿ 20 ಲಕ್ಷ ಟನ್‌ ಪೂರೈಕೆ!

ಗೃಹ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೊಸ ವಿದ್ಯುತ್‌, ವಿದ್ಯುತ್‌ ಸ್ಥಾವರಗಳ ಮಾಲೀಕತ್ವ ಬದಲಾವಣೆ, ಹೊರೆ ಹೆಚ್ಚುವರಿಕೆ ಅಥವಾ ಇಳಿಸುವಿಕೆ ಸೇರಿದಂತೆ ವಿವಿಧ ವಿದ್ಯುತ್‌ ಸೇವೆಗಳಿಗೆ ಆನ್‌ಲೈನ್‌ (Online) ಅಥವಾ ಆಫ್‌ ಲೈನ್‌ನಲ್ಲಿ (Offline) ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಸೇವೆ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯುತ್‌ ಸಂಪರ್ಕ ವಿಧಾನ ಸರಳೀಕರಣ, ಕನಿಷ್ಠ ದಾಖಲೆಗಳಿಂದ ಸೇವೆ ಪಡೆಯುವುದು, ಗ್ರಾಹಕರು ತಮ್ಮ ಅರ್ಜಿಯ ಪ್ರಗತಿಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ (Website) ಟ್ರ್ಯಾಕ್‌ ಮಾಡುವುದು ಸೇರಿದಂತೆ ಅನೇಕ ಅನುಕೂಲಗಳು ಈ ಕಾರ್ಯಕ್ರಮದಿಂದ ಸಿಗಲಿವೆ ಎಂದು ಇಂಧನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್ ಉತ್ಪಾದನೆ ಕೊಂಚ ಹೆಚ್ಚಳ

ಕಲ್ಲಿದ್ದಲು(Coal) ಅಭಾವದಿಂದ ವಿದ್ಯುತ್‌(Electricity) ಉತ್ಪಾದನೆಯಲ್ಲಿ ಅರ್ಧದಷ್ಟು ಕುಸಿತ ಕಂಡಿದ್ದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ(Thermal Power Plant) ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿದ್ದು, ವಿದ್ಯುತ್‌ ಉತ್ಪಾದನೆ ಉತ್ತಮಗೊಂಡಿದೆ. ಆದರೂ, ರಾಯಚೂರು(Raichur) ಉಷ್ಣ ವಿದ್ಯುತ್‌ ಸ್ಥಾವರದ 3ನೇ ಘಟಕ ಕಲ್ಲಿದ್ದಲು ಕೊರತೆಯಿಂದ ಶುಕ್ರವಾರವೂ ಸ್ಥಗಿತಗೊಂಡಿರುವುದಾಗಿ ಇಂಧನ ಇಲಾಖೆ ತಿಳಿಸಿದೆ.

ಐದು ದಿನಗಳ ಹಿಂದೆ ತೀವ್ರ ಕಲ್ಲಿದ್ದಲು ಕೊರತೆಯಿಂದಾಗಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಶೇ. 52 ರಷ್ಟು ಕುಸಿದಿತ್ತು. ಅಲ್ಲದೆ, ರಾಜ್ಯದ(Karnataka) ಒಟ್ಟಾರೆ ವಿದ್ಯುತ್‌ ಉತ್ಪಾದನೆಯೂ ಶೇ.50 ರಷ್ಟು ಕುಸಿತ ಕಂಡಿತ್ತು.

ಆಗಸ್ಟ್‌ 10 ರಂದು ಆರ್‌ಟಿಪಿಎಸ್‌(RTPS) (ರಾಯಚೂರು) ಘಟಕದ ಉತ್ಪಾದನೆ 475 ಮೆ.ವ್ಯಾಟ್‌ಗೆ, (BTPS) (Ballari)(ವಿದ್ಯುತ್‌ ಉತ್ಪಾದನೆ 342 ಮೆ.ವ್ಯಾಟ್‌ಗೆ ಕುಸಿದಿತ್ತು. (YTPS) (ಯರಮರಸ್‌) ಘಟಕ ಮಾತ್ರ 707 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಿತ್ತು.

ಕಲ್ಲಿದ್ದಲು ಪೂರೈಕೆ ಹೆಚ್ಚಳ: ಒಂದೇ ದಿನದಲ್ಲಿ 20 ಲಕ್ಷ ಟನ್‌ ಪೂರೈಕೆ!

ಮೂರು ಘಟಕಗಳು 5,020 ಮೆ.ವ್ಯಾಟ್‌ ಗರಿಷ್ಠ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ವಾಡಿಕೆ ದಿನಗಳಲ್ಲಿ 3,200 ರಿಂದ 3,300 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದವು. ಆದರೆ, ಕಲ್ಲಿದ್ದಲು ಕೊರತೆಯಿಂದ ಅ.10 ರಂದು ಮೂರು ಘಟಕಗಳಿಂದ ವಿದ್ಯುತ್‌ ಉತ್ಪಾದನೆ ಕೇವಲ 1,524 ಮೆ.ವ್ಯಾಟ್‌ಗೆ ಕುಸಿತ ಕಂಡಿತ್ತು. ಕಲ್ಲಿದ್ದಲು ಕೊರತೆಯಿಂದಾಗಿಯೇ ರಾಯಚೂರು ಹಾಗೂ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಎರಡು ಉತ್ಪಾದನಾ ಘಟಕ ಸ್ಥಗಿತಗೊಳಿಸಿರುವ ಬಗ್ಗೆ ಇಂಧನ ಇಲಾಖೆಯೇ ಅಧಿಕೃತವಾಗಿ ಪ್ರಕಟಿಸಿತ್ತು.

ಅಲ್ಪ ಚೇತರಿಕೆ, ಕೊರತೆ ಮುಂದುವರಿಕೆ:

ಇದೀಗ ಶುಕ್ರವಾರದ ವೇಳೆಗೆ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ತಕ್ಕ ಮಟ್ಟಿಗೆ ಚೇತರಿಕೆ ಕಂಡಿದೆ. ಅ. 15 ರಂದು ಆರ್‌ಟಿಪಿಎಸ್‌ (ರಾಯಚೂರು) ಘಟಕದಲ್ಲಿ 768 ಮೆ.ವ್ಯಾಟ್‌, ಬಿಟಿಪಿಎಸ್‌ (ಬಳ್ಳಾರಿ) ಘಟಕದಲ್ಲಿ 790 ಮೆ.ವ್ಯಾಟ್‌, ವೈಟಿಪಿಎಸ್‌ (ಯರಮರಸ್‌) ಘಟಕದಲ್ಲಿ 560 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಿದೆ. ಒಟ್ಟಾರೆ 2,118 ಮೆ.ವ್ಯಾಟ್‌ ವಿದ್ಯುತ್‌ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಉತ್ಪಾದನೆಯಾಗಿದೆ. ಒಟ್ಟಾರೆ ವಿದ್ಯುತ್‌ ಪೂರೈಕೆಯು 8,852 ಮೆ.ವ್ಯಾಟ್‌ ತಲುಪಿದೆ.

Follow Us:
Download App:
  • android
  • ios