ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡದೆ ಇದ್ದರೆ ಕಷ್ಟವಾಗಲಿದೆ. ಬೆಲೆ ಏರಿ​ಕೆ ಹಣದುಬ್ಬರಕ್ಕೆ ಕಾರಣವಾಗಲಿದೆ. ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡುತ್ತಿಲ್ಲ. ದೂರದೃಷ್ಟಿ ಇಲ್ಲದೆ ಸರ್ಕಾರ ನಡೆ​ಸ​ಲಾ​ಗು​ತ್ತಿ​ದೆ. ಗ್ಯಾರಂಟಿ ಜಾರಿ ಮಾಡಿ ರಾಜ್ಯದವನ್ನು ಸಾಲಕ್ಕೆ ತಳ್ಳುತ್ತಿದ್ದಾರೆ ಎಂದ​ ಮಾಜಿ ಸಚಿವ ಸಿ.ಟಿ.​ರವಿ 

ನವ​ದೆ​ಹ​ಲಿ(ಸೆ.01): ಕಾಂಗ್ರೆ​ಸ್‌ಗೆ ರಾಜ್ಯದ ಹಿತ​ಕ್ಕಿಂತ ‘ಇಂಡಿಯಾ’ ಒಕ್ಕೂಟ ಮುಖ್ಯ​ವಾ​ಗಿ​ದೆ. ಅದಕ್ಕಾಗಿ ಕೇಳುವ ಮೊದಲೇ ತಮಿ​ಳು​ನಾಡಿಗೆ ನೀರು ಹರಿ​ಸಿ​ದೆ ಎಂದು ಮಾಜಿ ಸಚಿವ ಸಿ.ಟಿ.​ರವಿ ಆರೋ​ಪಿ​ಸಿ​ದ​ರು.

ದೆಹ​ಲಿ​ಯಲ್ಲಿ ಗುರು​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿ, ಕಾಂಗ್ರೆಸ್‌ ಸರ್ಕಾರ ಬುಧ​ವಾರ ವೈಭ​ವದ ಸಂಭ್ರಮ(ಗೃಹ​ಲಕ್ಷ್ಮೀ ಗ್ಯಾರಂಟಿ ಉದ್ಘಾ​ಟ​ನೆ ಯೋಜ​ನೆ​) ಮಾಡಿ​ದೆ. ಆದರೆ ರಾಜ್ಯದ ಜನ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ರಾಜ್ಯದಲ್ಲಿ ಶೇ.70ರಷ್ಟು ಮಳೆ ಕೊರ​ತೆ​ಯಾ​ಗಿ​ದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷ ಸಂಭ್ರಮ ಮಾಡುತ್ತಿದೆ. ರಾಜ್ಯದ ಹಿತ ಕಾಪಾಡುವ ಕ್ರಮ ತೆಗೆದುಕೊಳ್ಳಬಹುದಿತ್ತು. ತಮಿ​ಳು​ನಾಡು ಕೇಳುವ ಮೊದಲೇ ನೀರು ಹರಿ​ಸಿ​ದೆ ಎಂದ​ರು.

ಭ್ರಮೆಯಲ್ಲಿರೋ ದುರಂಹಕಾರಿ ಬಳಿ ನಾನು ಮಾತಾಡಲ್ಲ: ಸಿ.ಟಿ.ರವಿ ವಿರುದ್ಧ ರೇಣು ಕಿಡಿ

ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡದೆ ಇದ್ದರೆ ಕಷ್ಟವಾಗಲಿದೆ. ಬೆಲೆ ಏರಿ​ಕೆ ಹಣದುಬ್ಬರಕ್ಕೆ ಕಾರಣವಾಗಲಿದೆ. ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡುತ್ತಿಲ್ಲ. ದೂರದೃಷ್ಟಿ ಇಲ್ಲದೆ ಸರ್ಕಾರ ನಡೆ​ಸ​ಲಾ​ಗು​ತ್ತಿ​ದೆ. ಗ್ಯಾರಂಟಿ ಜಾರಿ ಮಾಡಿ ರಾಜ್ಯದವನ್ನು ಸಾಲಕ್ಕೆ ತಳ್ಳುತ್ತಿದ್ದಾರೆ ಎಂದ​ರು.

ಇದೇ ವೇಳೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಕೇರಳದ ಸಂಸದ. ಅಲ್ಲದೆ, ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ. ಆದರೂ ಅವರು ರಾಜ್ಯ ಸರ್ಕಾ​ರದ ಕಾರ್ಯ​ಕ್ರ​ಮ​ದಲ್ಲಿ ಭಾಗಿ​ಯಾ​ಗಿ​ದ್ದಾರೆ ಎಂದು ಕಿಡಿ​ಕಾ​ರಿ​ದ​ರು.