ದಕ್ಷಿಣ ಕನ್ನಡದ​ದಲ್ಲಿ ಕೊರೋನಾ ಅಬ್ಬ​ರದ ನಡು​ವೆಯೂ ತಗ್ಗಿದ ಸಾವಿನ ಪ್ರಮಾ​ಣ!| ಈ ವರ್ಷ ಜು.20ರ ವರೆಗೆ ಜಿಲ್ಲೆ​ಯಲ್ಲಿ ಮೃತರ ಸಂಖ್ಯೆ 2403| - ಕಳೆದ ವರ್ಷ ಈ ಅವ​ಧಿ​ಯಲ್ಲಿ ಸಾವಿ​ಗೀ​ಡಾ​ದ​ವ​ರು 4,787 ಮಂದಿ

ಮಂಗಳೂರು(ಜು.27): ಕೊರೋನಾ ಮರಣ ಪ್ರಮಾಣ(ಡೆತ್‌ ರೇಟ್‌)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು​ತ್ತಿ​ದ್ದರೂ ವಿವಿಧ ಕಾರಣಗಳಿಂದಾದ ಒಟ್ಟು ಸಾವಿನ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಗಣನೀಯವಾಗಿ ತಗ್ಗಿರುವ ವಿಚಾರ ಇದೀಗ ಬೆಳ​ಕಿಗೆ ಬಂದಿದೆ. ಲಾಕ್‌ಡೌನ್‌ ಹೇರಿದ್ದ ವೇಳೆ ಅಪಘಾತ, ಅಪರಾಧ ಚಟುವಟಿಕೆಗಳ ಸಂಖ್ಯೆ ಇಳಿಕೆಯಾದದ್ದು, ಜೊತೆಗೆ ಜನತೆ ಜಾಗೃತರಾಗಿ ಮನೆಯಲ್ಲುಳಿದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದೂ ಸಾವಿನ ಸಂಖ್ಯೆ ಇಳಿ​ಮು​ಖಕ್ಕೆ ಕಾರ​ಣ​ಗ​ಳ​ಲ್ಲೊಂದು ಎಂದು ಹೇಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜು.24ರ ರಾಜ್ಯ ಬುಲೆಟಿನ್‌ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4214 ಕೋವಿಡ್‌ ಸೋಂಕಿತರ ಪೈಕಿ 99 ಮಂದಿ ಮೃತಪಟ್ಟು ಡೆತ್‌ರೇಟ್‌ ಶೇ.2.34ಕ್ಕೇರಿದೆ. ಇಷ್ಟಾದರೂ ಮಂಗಳೂರಿನ ಒಟ್ಟು ಸಾವಿನ ಸಂಖ್ಯೆಯಲ್ಲಿ ಈ ಬಾರಿ ಏರಿಕೆಯೇ ಆಗದೆ, ಇಳಿಮುಖವಾಗಿರುವುದು ವಿಶೇಷ.

ದೇಶದಲ್ಲಿ ಮತ್ತೆ 50218 ಕೇಸ್‌: ಕೊರೋನಾಗೆ 725 ಬಲಿ!

ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ ಜ.1ರಿಂದ ಜು.19ರವರೆಗೆ ವಿವಿಧ ಕಾರಣಗಳಿಂದ ಮೃತ​ಪ​ಟ್ಟವರ ಸಂಖ್ಯೆ ಒಟ್ಟು 4,787. ಆದರೆ ಈ ಬಾರಿ ಕೊರೋನಾ ಸಾವುಗಳನ್ನು ಸೇರಿಸಿಯೂ ಜು.20ರವರೆಗೆ ಮೃತಪಟ್ಟಿರುವವರ ಸಂಖ್ಯೆ 3403. ಅಂದರೆ ಕೋವಿಡ್‌ ಅಬ್ಬ​ರದ ನಡು​ವೆಯೂ ಈ ವರ್ಷ 1,384 ಕಡಿಮೆ ಮರಣ ದಾಖಲಾಗಿದೆ. ಕಳೆದ ವರ್ಷ ಜನವರಿಯಿಂದ ಜೂನ್‌ ಅಂತ್ಯದವರೆಗೆ ಮಂಗಳೂರಲ್ಲಿ 1,032 ಅಪಘಾತಗಳು ಸಂಭವಿಸಿ ಅದರಲ್ಲಿ 148 ಮಂದಿ ಸಾವಿಗೀಡಾಗಿದ್ದರು. 1075 ಮಂದಿ ಗಾಯಗೊಂಡಿದ್ದರು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 326 ಅಪಘಾತಗಳು ಸಂಭವಿಸಿ 50 ಮಂದಿ ಮೃತಪಟ್ಟಿದ್ದಾರೆ. 364 ಮಂದಿ ಮಾತ್ರ ಗಾಯಗೊಂಡಿದ್ದಾರೆ.

ಅಪ​ಘಾತ ಪ್ರಕ​ರ​ಣ​ಗಳು ಇಳಿ​ಮು​ಖ​ವಾ​ಗಿ​ರು​ವುದು ಒಂದು ಕಾರ​ಣ​ವಾ​ದರೆ ಕೇರ​ಳ​ದಿಂದ ಬರುವ ರೋಗಿ​ಗಳ ಸಂಖ್ಯೆ, ಹೊರ ಜಿಲ್ಲೆ​ಗ​ಳಿಂದ ದಕ್ಷಿಣ ಕನ್ನ​ಡಕ್ಕೆ ಬರುವ ರೋಗಿ​ಗಳ ಸಂಖ್ಯೆಯೂ ಇಳಿ​ಮು​ಖ​ವಾ​ಗಿ​ರು​ವುದು ಈ ರೀತಿ ಸಾವಿನ ಪ್ರಮಾಣ ತಗ್ಗಲು ಮತ್ತೊಂದು ಕಾರಣ ಎಂದು ಆರೋಗ್ಯ ಅಧಿ​ಕಾ​ರಿ​ಗಳು ಹೇಳು​ತ್ತಾ​ರೆ.

ದೈಹಿಕ ಅಂತರ ಕಾಪಾಡುತ್ತೆ ‘ಡಿಸ್ಟೋಸಿಟ್‌’ ಉಪಕರಣ!

ಲಾಕ್‌ಡೌನ್‌ನಿಂದಾಗಿ ಅಪಘಾತದಿಂದ ಸಾವಿನ ಸಂಖ್ಯೆಯೂ ಈ ಬಾರಿ ಇಳಿದಿದೆ. ಉತ್ತಮ ವೈದ್ಯಕೀಯ ವ್ಯವಸ್ಥೆಯಿರುವ ಮಂಗಳೂರಿನ ಆಸುಪಾಸಿನ ಎಂಟು ಜಿಲ್ಲೆಗಳಲ್ಲದೆ ನೆರೆಯ ಕೇರಳದಿಂದಲೂ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಬಾರಿ ಲಾಕ್‌ಡೌನ್‌ನಿಂದಾಗಿ ಬರಲು ಸಾಧ್ಯವಾಗಿಲ್ಲ. ಅಲ್ಲದೆ, ಆರೋಗ್ಯ ಜಾಗೃ​ತಿಯೂ ಹೆಚ್ಚಿದೆ. ಸಾವಿನ ಸಂಖ್ಯೆ ಕ್ಷೀಣಿಸಲು ಇದು ಕೂಡ ಬಹುಮುಖ್ಯ ಕಾರಣವಾಗಿರಬಹುದು ಎಂದು ಜಿಲ್ಲಾ ಪ್ರಭಾರ ಆರೋ​ಗ್ಯಾ​ಧಿ​ಕಾರಿ ಡಾ.ರತ್ನಾಕರ್‌ ಹೇಳುತ್ತಾ​ರೆ.