Asianet Suvarna News Asianet Suvarna News

ಮಾನ್ಪಡೆ ಸಾವಿನ ಬಗ್ಗೆ ಕೇಸು ಹಾಕಿ: ಡಿಕೆಶಿ ಸವಾಲು

ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಕಾರಣ ಎಂದು ಹೇಳಿದ್ದು ಇದೀಗ ಡಿಕೆಶಿ ಸವಾಲು ಹಾಕಿದ್ದಾರೆ

DK Shivakumar Challenge To Sadananda gowda over Manpade death snr
Author
Bengaluru, First Published Oct 27, 2020, 9:03 AM IST

ಬೆಂಗಳೂರು (ಅ.27): ‘ರೈತ ಮುಖಂಡ ಮಾರುತಿ ಮಾನ್ಪಡೆ ಸಾವಿಗೆ ನಾವು ಕಾರಣವಾಗಿದ್ದರೆ ನಮ್ಮ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಲು ಹೇಳಿ’ ಎಂದು ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದರು.

 ಕೊರೋನಾ ನಿಯಮ ಉಲ್ಲಂಘಿಸಿ ರೈತರ ಪ್ರತಿಭಟನೆ ಮಾಡಿಸಿದ ಕಾಂಗ್ರೆಸ್‌ ಪಕ್ಷ ಹಾಗೂ ನಾಯಕರಾದ ಡಿ.ಕೆ. ಶಿವಕುಮಾರ್‌ ಅವರೇ ಮಾರುತಿ ಮಾನ್ಪಡೆ ಸಾವಿಗೆ ಕಾರಣ ಎಂದು ಡಿ.ವಿ. ಸದಾನಂದಗೌಡ ಆರೋಪಿಸಿದ್ದರು. 

'ಆರ್‌ಆರ್‌ ನಗರದ ಸ್ಥಿತಿ ಭೂತದ ಬಾಯಲ್ಲಿ ಭಗವದ್ಗೀತೆ' ...

ಇದಕ್ಕೆ  ಈ ಬಗ್ಗೆ ಕೂಡಲೇ ಕೇಶ್ ದಾಖಲಿಸಿ ಎಂದು ಡಿಕೆಶಿ ಹೇಳಿದರು.

ಡಿಕೆಶಿ ಕಾರಣ

ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಅವರ ಸಾವಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾರಣ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಆರೋಪ ಮಾಡಿದ್ದಾರೆ.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ವಿರೋಧಿಸಲು ಬೆಂಗಳೂರಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಮಾರುತಿ ಮಾನ್ಪಡೆ ಸಹ ಭಾಗವಹಿಸಿದ್ದರ ಪರಿಣಾಮ ಕೊರೋನಾ ಸೋಂಕು ತಗುಲಿ ಸಾವನ್ನಪ್ಪಿದರು. ಇದಕ್ಕೆ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರೇ ಕಾರಣಕರ್ತರು ಎಂದು ಹೇಳಿದರು.

Follow Us:
Download App:
  • android
  • ios